ಯುಗಾದಿ ಹಬ್ಬ(ugadi festival)ದ ಸಂಭ್ರಮದ ಜೊತೆಗೆ, ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ವಿಶೇಷ ಬಸ್ಗಳ (Special Buses) ವ್ಯವಸ್ಥೆ ಮಾಡಲಾಗಿದೆ. ಹೌದು ಸ್ನೇಹಿತರೇ, ಈ ವ್ಯವಸ್ಥೆಯು ತೆರಳುವ ಪ್ರಯಾಣಿಕರಿಗೆ ಸುಲಭ ಮತ್ತು ಅನುಕೂಲಕರ ಪ್ರಯಾಣವನ್ನು ಒದಗಿಸುತ್ತದೆ. ಈ ವಿಷೇಶ ಬಸ್ ಗಳು ಯಾವ ಯಾವ ನಗರಗಳಿಗೆ ಪ್ರಯಾಣಿಸುತ್ತವೆ ಹಾಗೂ ವಿಷೇಶ ಬಸ್ ಗಳ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆಯಲು ವರದಿಯನ್ನು ತಪ್ಪದೇ ಕೊನೆಯವರೆಗೆ ಓದಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯುಗಾದಿಗೆ ವಿಶೇಷ ಬಸ್ಸುಗಳು :
ಕರ್ನಾಟಕದ ಜನತೆ ಯುಗಾದಿ ಹಬ್ಬದ ಸಂಭ್ರಮಕ್ಕೆ ಸಜ್ಜಾಗಿದ್ದು, ಮನೆ ಮನೆಗಳಲ್ಲಿ ಭರದಿಂದ ಸಿದ್ಧತೆ ನಡೆಯುತ್ತಿದೆ. ಭಾರತೀಯರ ಹೊಸ ವರ್ಷವೆಂದು(New year) ಪರಿಗಣಿಸಲಾಗುವ ಈ ಹಬ್ಬವನ್ನು ರಾಜ್ಯದಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಬೇರೆಡೆಗಳಲ್ಲಿ ಕೆಲಸ ಮಾಡುವ ಜನರು ಈ ದಿನ ತಮ್ಮ ಊರುಗಳಿಗೆ ತೆರಳಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ವಾಡಿಕೆ. ಈ ಕಾರಣಕ್ಕಾಗಿ, ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಊರಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ವಿಶೇಷ ಬಸ್ಗಳ(Special buses) ವ್ಯವಸ್ಥೆ ಮಾಡಿದೆ.
NWKRTC ಯು ಈ ವರ್ಷ ಯುಗಾದಿ ಹಬ್ಬಕ್ಕಾಗಿ 500 ಕ್ಕೂ ಹೆಚ್ಚು ವಿಶೇಷ ಬಸ್ಗಳನ್ನು ಓಡಿಸಲು ಯೋಜಿಸಿದೆ. ಈ ಬಸ್ಗಳು ರಾಜ್ಯದ ಪ್ರಮುಖ ನಗರಗಳಿಂದ ಊರುಗಳಿಗೆ ಸಂಚರಿಸಲಿವೆ.
ಏಪ್ರಿಲ್ 6 ರಿಂದ 15 ರವರೆಗೆ ನಡೆಯುವ ವಿಶೇಷ ಬಸ್ಗಳ ಉತ್ಸವ:
ಯುಗಾದಿ ಹಬ್ಬದ ಸಂಭ್ರಮಕ್ಕೆ ರಜೆಗಳ ಸರಣಿ ಜೋಡಣೆಯಾಗಿ, ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡ ತಿಳಿಸಿದ್ದಾರೆ.
ಇದೇ ಸಮಯದಲ್ಲಿ ರಂಜಾನ್ ಹಬ್ಬ(Ramzan festival)ವೂ ಬಂದಿರುವುದರಿಂದ, ಏಪ್ರಿಲ್ 6 ರಿಂದ 15 ರವರೆಗೆ ಒಟ್ಟು 10 ದಿನಗಳ ಕಾಲ ವಿಶೇಷ ಬಸ್ಸುಗಳು ಓಡಲಿವೆ ಎಂದು ಅವರು ಹೇಳಿದ್ದಾರೆ.
ಹಬ್ಬದ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ನಿರೀಕ್ಷೆಯಿದ್ದು, ಈ ಹೆಚ್ಚುವರಿ ಬಸ್ಸುಗಳು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಶೇಷ ಬಸ್ಸುಗಳ ವೇಳಾಪಟ್ಟಿ ಮತ್ತು ಮಾರ್ಗಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು, ಪುಣೆ, ಗೋವಾ ಮತ್ತಿತರ ನಗರಗಳಿಂದ ಹುಬ್ಬಳ್ಳಿಗೆ ಹೆಚ್ಚುವರಿ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಏಪ್ರಿಲ್ 5 (ಶುಕ್ರವಾರ) ರಿಂದ 7 (ರವಿವಾರ) ವರೆಗೆ ಈ ಬಸ್ಗಳು ಲಭ್ಯವಿರುತ್ತವೆ. ಸರ್ಕಾರಿ, ಖಾಸಗಿ ಉದ್ಯೋಗಿಗಳು, ಉದ್ಯಮಿಗಳು ಮತ್ತು ಇತರ ಪ್ರಯಾಣಿಕರಿಗೆ ಈ ವ್ಯವಸ್ಥೆ ಅನುಕೂಲಕರವಾಗಿದೆ.
ಹಬ್ಬದ ದಿನಗಳ ರಜೆ ಮುಗಿಸಿ ತಮ್ಮ ಕೆಲಸದ ಸ್ಥಳಗಳಿಗೆ ಮರಳುವ ಪ್ರಯಾಣಿಕರಿಗೆ ಸಹಾಯ ಮಾಡಲು, ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಏಪ್ರಿಲ್ 14 (ರವಿವಾರ) ಮತ್ತು 15 (ಸೋಮವಾರ) ರಂದು ಹುಬ್ಬಳ್ಳಿ-ಬೆಂಗಳೂರು, ಪುಣೆ, ಗೋವಾ, ಮಂಗಳೂರು, ವಿಜಯಪುರ, ಬಾಗಲಕೋಟೆ ಮತ್ತು ಇತರ ಜಿಲ್ಲೆಗಳಿಗೆ ಹೆಚ್ಚುವರಿ ವಿಶೇಷ ಬಸ್ಸುಗಳನ್ನು ಓಡಿಸಲಿದೆ. ಈ ಅವಧಿಯಲ್ಲಿ ಜಿಲ್ಲೆಯೊಳಗೆ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ನಿರೀಕ್ಷಿಸಲಾಗಿದೆ. ಈ ಹೆಚ್ಚಳಕ್ಕೆ ಸ್ಪಂದಿಸಲು, ಹೆಚ್ಚುವರಿ ಬಸ್ಸುಗಳನ್ನು ಸೇವೆಗೆ ಸೇರಿಸಲಾಗುವುದು. ಮುಂಚಿತವಾಗಿ ಯೋಜಿಸಿ ಮತ್ತು ನಿಮ್ಮ ಟಿಕೆಟ್ಗಳನ್ನು ಮೊದಲೇ ಕಾಯ್ದಿರಿಸಿಬೇಕು, ಹೆಚ್ಚಿನ ಸಂಖ್ಯೆಯ ಆಸನಗಳನ್ನು ಕಾಯ್ದಿರಿಸಿದರೆ (ಷರತ್ತುಗಳು ಅನ್ವಯಿಸುತ್ತವೆ) ಏಕಮುಖ ಪ್ರಯಾಣದಲ್ಲಿ 5% ರಿಯಾಯಿತಿಯನ್ನು ಸಹ ಆನಂದಿಸಬಹುದು. ಎರಡು ಬದಿ ಪ್ರಯಾಣ ಆಸನ ಕಾಯ್ದಿರಿಸಿದವರಿಗೆ ಶೇಕಡಾ 10ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ರಜಾದಿನಗಳ ಬಗ್ಗೆ ವಿವರ ಇಲ್ಲಿದೆ:
ಭಾನುವಾರ, ಏಪ್ರಿಲ್ 9 – ಚಾಂದ್ರಮಾನ ಯುಗಾದಿ
ಗುರುವಾರ, ಏಪ್ರಿಲ್ 11 – ರಂಜಾನ್
ಶನಿವಾರ, ಏಪ್ರಿಲ್ 13 – ಎರಡನೇ ಶನಿವಾರ
ಭಾನುವಾರ, ಏಪ್ರಿಲ್ 14 – ಡಾ. ಅಂಬೇಡ್ಕರ್ ಜಯಂತಿ
ಅಂದರೆ , ಒಟ್ಟು 8 ರಜಾದಿನಗಳು! ಈ ಹಬ್ಬದ ಅವಧಿಯಲ್ಲಿ ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು, ನಿಮ್ಮ ಟಿಕೆಟ್ಗಳನ್ನು ಮುಂಚಿತವಾಗಿ ಕಾಯ್ದಿರಿಸುವುದನ್ನು ಪರಿಗಣಿಸಿ. ರಿಯಾಯಿತಿ ಕೊಡುಗೆಯ ಲಾಭವನ್ನು ಪಡೆದುಕೊಳ್ಳಿ ಮತ್ತು ಸಂಭಾವ್ಯ ಸಂಚಾರ ದಟ್ಟಣೆಗೆ ಸಿದ್ಧರಾಗಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ
- ಮೊಬೈಲ್ ನಲ್ಲಿ ಏನು ಡಿಲೀಟ್ ಮಾಡಿದೆ ಸ್ಟೋರೇಜ್ ಫ್ರೀ ಮಾಡಿ! ಇಲ್ಲಿದೆ ಮಾಹಿತಿ
- ಹೊಸ ರೇಷನ್ ಕಾರ್ಡ್ ಸ್ಟೇಟಸ್ ಮೊಬೈಲ್ ನಲ್ಲೆ ಚೆಕ್ ಮಾಡಿ, New Ration Card Status Karnataka 2024 @ahara.kar.nic.in
- ಭಾರತ ಅಷ್ಟೇ ಅಲ್ಲ ಅಮೆರಿಕದಲ್ಲೂ ಈ ಗ್ರಹಣಕ್ಕೆ ಭಯ ಪಡ್ತಿದಾರೆ ಜನ! ಯಾಕೆ ಗೊತ್ತಾ?
- ಗೃಹಲಕ್ಷ್ಮಿ 7ನೇ ಕಂತಿನ ಹಣ ಈಗ ಖಾತೆಗೆ ಬಂತು, ನಿಮ್ಮ ಖಾತೆಗೆ ಬರದೇ ಇದ್ರೆ ಈ ರೀತಿ ಮಾಡಿ
- ಯುಗಾದಿ ಹಬ್ಬಕ್ಕೆ ಚಿನ್ನ ಮತ್ತಷ್ಟು ದುಬಾರಿ, ಚಿನ್ನದ ಬೆಲೆಯಲ್ಲಿ ಐತಿಹಾಸಿಕ ದಾಖಲೆ. ಇಂದಿನ ರೇಟ್ ನೋಡಿ
- ಸ್ವಂತ ಬಿಸಿನೆಸ್ ಪ್ರಾರಂಭಿಸಲು 10 ಲಕ್ಷ ರೂ ಸಹಾಯಧನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ.?
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group





