ಇ-ಸ್ವತ್ತು ಪಡೆಯಲು ‘ಎನ್ನಂಬರೆನ್ಸ್ ಪ್ರಮಾಣಪತ್ರ’ (Encumbrance Certificate)ಕಡ್ಡಾಯ: ಸಾರ್ವಜನಿಕರಲ್ಲಿ ಅಸಮಾಧಾನ, ಖರ್ಚು-ತೊಂದರೆ ಹೆಚ್ಚಳ
ಕರ್ನಾಟಕ ಸರ್ಕಾರ(Karnataka government) ಆಸ್ತಿಯ ಲೆಕ್ಕ-ಪತ್ರಗಳ ಪಾರದರ್ಶಕತೆಗೆ ಒತ್ತು ಕೊಡುತ್ತಲೇ ಬಂದಿದೆ. ಈ ನಿಟ್ಟಿನಲ್ಲಿ ಹಲವು ಡಿಜಿಟಲ್ ಕ್ರಮಗಳನ್ನು ರೂಪಿಸುತ್ತಿದೆ. ಇ ಖಾತಾ(E- khatha), ಬಿ ಖಾತಾ(B-Khata), ಇ-ಸ್ವತ್ತು ಪ್ರಕ್ರಿಯೆಗಳ ಮೂಲಕ ಭೂಸ್ವಾಮ್ಯ ಮತ್ತು ಆಸ್ತಿ ದಾಖಲಾತಿಗಳನ್ನು ಸುಧಾರಣೆ ಮಾಡಲಾಗುತ್ತಿದೆ. ಆದರೆ ಈ ಹೊಸ ಕ್ರಮಗಳು ಜನಸಾಮಾನ್ಯರ ಪಾಲಿಗೆ ಮಾತ್ರ ಭಾರೀ ಅಡಚಣೆಯೂ ಹಾಗೂ ತೊಂದರೆಯನ್ನೂ ತಂದಿವೆ. ಇ-ಸ್ವತ್ತು ಪಡೆಯುವ ಪ್ರಕ್ರಿಯೆಯಲ್ಲಿ ಇತ್ತೀಚೆಗೆ ತಂದಿರುವ ಬದಲಾವಣೆಗಳು ಆಸ್ತಿದಾರರ ಮೇಲೆ ಹೆಚ್ಚು ಹಣ ಹಾಗೂ ಸಮಯದ ಹೊರೆ ನೀಡುತ್ತಿವೆ. ಇನ್ನು ಇ-ಸ್ವತ್ತು ಪಡೆಯಲು ‘ಎನ್ನಂಬರೆನ್ಸ್ ಪ್ರಮಾಣಪತ್ರ’ (Encumbrance Certificate) ಕಡ್ಡಾಯಗೊಳಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ‘ಎನ್ನಂಬರೆನ್ಸ್ ಪ್ರಮಾಣಪತ್ರ’ದಿಂದ(Encumbrance Certificate) ಆಗುತ್ತಿರುವ ತೊಂದರೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿದ ದಾಖಲೆ, ಹೆಚ್ಚಿದ ತೊಂದರೆ:
ಈ ಹಿಂದೆ ಇ-ಸ್ವತ್ತು ಪಡೆಯಲು ಈ ಪ್ರಮಾಣಪತ್ರ ಅಗತ್ಯವಿರಲಿಲ್ಲ. ಆದರೆ ಇದೀಗ ಈ ಹೊಸ ನಿಯಮದ ಅಡಿಯಲ್ಲಿ, ಈ ಪ್ರಮಾಣಪತ್ರವನ್ನು ಪಡೆದು ಸಲ್ಲಿಸದೇ ಇ-ಸ್ವತ್ತು ಪಡೆಯಲಾಗದು ಎಂಬ ನಿಲುವು ಮರುಹುಟ್ಟುಕೊಂಡಿದೆ. ಬೆಂಗಳೂರಿನ ಜೊತೆ ಜೊತೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ಹಲವು ನಗರ ಪಾಲಿಕೆಗಳಲ್ಲಿ ಈ ನಿಯಮ ಜಾರಿಯಾಗಿದೆ. ಇದರಿಂದಾಗಿ ಸಾರ್ವಜನಿಕರು ದಿನಕ್ಕೊಂದು ದಾಖಲೆಗಾಗಿ ಅಧಿಕಾರಿಗಳೆದುರು ಅಲೆದಾಡುವ ಸ್ಥಿತಿಗೆ ತಲುಪಿದ್ದಾರೆ.
ಎನ್ನಂಬರೆನ್ಸ್ ಪ್ರಮಾಣಪತ್ರದ ಗೊಂದಲ:
ಈ ಪ್ರಮಾಣಪತ್ರ ಸಾಮಾನ್ಯವಾಗಿ ಆಸ್ತಿಯ ಮೇಲೆ ಯಾವುದೇ ಸಾಲ ಅಥವಾ ಕಾನೂನು ಸಂಬಂಧಿ ತೊಂದರೆ ಇಲ್ಲವೆಂಬ ದೃಢೀಕರಣಕ್ಕಾಗಿ ನೀಡಲಾಗುತ್ತದೆ. ಇದು ಸಾಮಾನ್ಯವಾಗಿ ಆಸ್ತಿ ಖರೀದಿ, ಮಾರಾಟ ಅಥವಾ ಬ್ಯಾಂಕ್ ಸಾಲಕ್ಕಾಗಿ(Bank loan) ಅಗತ್ಯವಿರುವ ದಾಖಲೆಯಾಗಿದೆ. ಆದರೆ ಇ-ಸ್ವತ್ತು ಪಡೆಯಲು ಈ ಪ್ರಮಾಣಪತ್ರ ಎಷ್ಟು ಅಗತ್ಯ ಎಂಬುದು ಈಗ ಬಹುತೇಕರಿಗೆ ಗೊತ್ತಿಲ್ಲದ ಸ್ಥಿತಿಯಲ್ಲಿದೆ. ಜನ ಸಾಮಾನ್ಯರು ಇದನ್ನು ಪಡೆದುಕೊಳ್ಳಲು 4-5 ದಿನ ಹಾಗೂ 500 ರಿಂದ 1000 ರೂ.ವರೆಗೆ ಖರ್ಚು ಮಾಡಬೇಕಾಗುತ್ತಿದೆ.
ಪೂರ್ವ ಅಧ್ಯಕ್ಷರಿಂದ ವಿರೋಧ:
ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್(Association of Consulting Civil Engineer) ಮಾಜಿ ಅಧ್ಯಕ್ಷ ಸುರೇಶ ಎಂ. ಕಿರೇಸೂರ(Former President Suresh M. Kiresura) ಅವರು ಈ ನವೀನ ಪ್ರಕ್ರಿಯೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಾರ್ವಜನಿಕರಿಗೆ ಅನಗತ್ಯ ತೊಂದರೆ ತರಬಾರದು ಎಂಬ ಕಾರಣದಿಂದ ಮಹಾನಗರ ಪಾಲಿಕೆ ಹಾಗೂ ಸರ್ಕಾರಕ್ಕೆ ಈ ನಿಯಮವನ್ನು ತಕ್ಷಣವೇ ರದ್ದು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಇನ್ನು, ಇಂತಹ ಪ್ರಕ್ರಿಯೆ ಗ್ರಾಮೀಣ ಪ್ರದೇಶಗಳಿಗೂ ಹಬ್ಬುತ್ತಿದ್ದು, ಇ-ಸ್ವತ್ತು ನೀಡಲು ಹೊಸ ಕರಡು ನಿಯಮಾವಳಿ ರೂಪಿಸಲಾಗುತ್ತಿದೆ. ಈ ಕರಡು ಜುಲೈ ತಿಂಗಳೊಳಗೆ ಪೂರ್ಣಗೊಳ್ಳಲಿದ್ದು, ಅಂತಿಮ ಮಾರ್ಗಸೂಚಿಗಳನ್ನು ಜುಲೈ ಎರಡನೇ ವಾರದಲ್ಲಿ ಪ್ರಕಟಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಐಟಿ ಸಚಿವ ಪ್ರಿಯಾಂಕ್ ಖರ್ಗೆ(Minister Priyank Kharge) ಅವರು ತಿಳಿಸಿದ್ದಾರೆ.
ಇ-ಸ್ವತ್ತು ಯೋಜನೆಯು ನಿಜವಾಗಿ ಜನಸಾಮಾನ್ಯರಿಗೆ ಉಪಯುಕ್ತವಾಗಬೇಕಾದರೆ, ಅದರ ಪ್ರಕ್ರಿಯೆ ಸರಳ, ಪರದರ್ಶಕ ಹಾಗೂ ಲಂಚಮುಕ್ತವಾಗಿರಬೇಕು. ಪ್ರತಿದಿನ ಹೊಸ ದಾಖಲೆಗಳ ಬೇಡಿಕೆ ಹಾಗೂ ಅಧಿಕೃತ ಸಮರ್ಥನೆಯಿಲ್ಲದ ಪ್ರಮಾಣಪತ್ರಗಳ ಕಡ್ಡಾಯತೆ, ಈ ಯೋಜನೆಯ ಪ್ರಾಮಾಣಿಕತೆಗೆ ಶಂಕೆ ಮೂಡಿಸುತ್ತಿವೆ. ಸರಕಾರವು ತಕ್ಷಣವೇ ಈ ನಿಯಮಗಳ ಪುನರ್ ವಿಮರ್ಶೆ ಮಾಡಬೇಕು ಎಂಬುದು ಜನಾಭಿಪ್ರಾಯವಾಗಿದೆ.
ಒಟ್ಟಾರೆಯಾಗಿ, ಇ-ಸ್ವತ್ತು ಪಡೆಯುವ ಪ್ರಕ್ರಿಯೆ ಡಿಜಿಟಲ್(Digital) ಆಗುತ್ತಿರುವಂತೆಯೇ, ಅದರೊಂದಿಗೆ ಉಂಟಾಗುತ್ತಿರುವ ಕಾನೂನುಬದ್ಧ ಜಟಿಲತೆಗಳು ಜನರಿಗೆ ನಿಜವಾದ ತೊಂದರೆಯಾಗಿ ಪರಿಣಮಿಸುತ್ತಿವೆ. ಹೆಚ್ಚುವರಿ ದಾಖಲೆಗಳು, ಅಧಿಕಾರಿ ಮುಖ ಕಾಣುವ ಅಗತ್ಯತೆ, ಹಾಗೂ ಹಣ-ಸಮಯದ ವ್ಯಯದಿಂದ ಈ ವ್ಯವಸ್ಥೆ ಯಥಾರ್ಥದಲ್ಲಿ ಪ್ರಜಾಪರವಾಗಿ ಕಂಡುಬರುವುದಿಲ್ಲ. ಸರಕಾರ ಹಾಗೂ ಮಹಾನಗರ ಪಾಲಿಕೆಗಳು ಈ ಕುರಿತು ಜನಾಭಿಪ್ರಾಯ ಆಲಿಸಿ ಸುಗಮ ನಿರ್ಧಾರ ತೆಗೆದುಕೊಳ್ಳಬೇಕಾದ ಅಗತ್ಯವಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




