GruhaLakshmi Scheme: ರಾಜ್ಯದಲ್ಲಿ ಸಾಕಷ್ಟು ಮಹಿಳೆಯರು ಗೃಹಲಕ್ಷ್ಮಿ ಹಣಕ್ಕಾಗಿ ಕಾದು ಕುಳಿತಿದ್ದಾರೆ. ನಾಳೆ ಜಮಾ ಆಗುತ್ತೆ ನಾಡಿದ್ದು ಆಗುತ್ತೆ ಅನ್ನೋ ಕುತೂಹಲದಲ್ಲೇ ಕಾಯ್ತಾ ಇದ್ದಾರೆ. ಈ ಗೊಂದಲದ ನಡುವೆ ಈ ಬಗ್ಗೆ ಸರ್ಕಾರವು ಇದೀಗ ಗುಡ್ ನ್ಯೂಸ್ ಕೊಟ್ಟಿದೆ ಅಂತಾ ಹೇಳಬಹುದು, ಮುಂದಿನ ಕೆಲವೇ ದಿನಗಳಲ್ಲಿ ಜೂನ್ ತಿಂಗಳ ಹಣ ಮಹಿಳೆಯರ ಖಾತೆಗೆ ಜಮಾ ಆಗಲಿದೆ, ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
“ರಾಜ್ಯದ ಮಹಿಳೆಯರಿಗೆ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲೇ ನಾವು ಸಿಹಿ ಸುದ್ದಿ ಕೊಟ್ಟಿದ್ದೆವು ಈಗಾಗಲೇ ಸರ್ಕಾರವು ಗೃಹಲಕ್ಷ್ಮಿ ಯೋಜನೆ 2025-26 ಸಾಲಿನ ಬಾಕಿ 3ನೇ ಕಂತಿನ ಜೂನ್ ಹಣವನ್ನು ಹಬ್ಬದ ಸಂದರ್ಭದಲ್ಲೇ ಬಿಡುಗಡೆ ಮಾಡಿದ್ದೇವೆ. ಈ ಹಣವನ್ನು ಸರ್ಕಾರದ ಆದೇಶದ ಪ್ರಕಾರ, ಆಯಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ (TPEO) ಸರ್ಕಾರಿ ಖಾತೆಗೆ ಬಿಡುಗಡೆ ಮಾಡಲಾಗಿದೆ , ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ (DBT) ವ್ಯವಸ್ಥೆಯ ಮೂಲಕ ತಾಲೂಕು ಶಿಶು ಅಭಿವೃದ್ಧಿ ಯೋಜನೆ (ICDS) ಅಧಿಕಾರಿಗಳು ಈ ಹಣವನ್ನು ಆಯಾ ತಾಲೂಕಿನ ಫಲಾನುಭವಿಗಳ ಖಾತೆಗೆ ಗೌರಿ ಗಣೇಶ ಹಬ್ಬದ ಒಳಗೆ ನೇರವಾಗಿ ಹಣ ಖಾತೆಗೆ ಜಮಾ ಮಾಡಲಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಜೂನ್ ತಿಂಗಳ ಹಣ ಬಿಡುಗಡೆ ಮಾಡಲಾಗಿದೆ ಆದರೇ ಹಣ ಗಣೇಶ ಚತುರ್ಥಿ ಒಳಗೆ ಮಹೀಳೆಯರ ಬ್ಯಾಂಕ್ ಖಾತೆಗೆ ಸೇರಲಿದೆ ಎಂದು ವಿವರಿಸಿ ಹೇಳಿದರು”.
ಗೃಹಲಕ್ಷ್ಮಿ ಯೋಜನ (GruhaLakshmi Scheme) ಅಡಿಯಲ್ಲಿ ರಾಜ್ಯದಾದ್ಯಂತ ಒಟ್ಟಾರೆ 1.23 ಕೋಟಿ ಫಲಾನುಭವಿಗಳಿಗೆ ಈವರೆಗೆ 47,400 ಕೋಟಿ ರೂ. ಗಳಷ್ಟು ಜಮಾ ಮಾಡಲಾಗಿದೆ ಎಂದ ಅವರು ರಾಜ್ಯ ದೇಶದಲ್ಲಿಯೇ ಅತೀ ಹೆಚ್ಚು ತಲಾ ಆದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ ಎಂದು ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆ: ಪ್ರಮುಖ ವಿವರಗಳು
- ಯೋಜನೆಯ ಉದ್ದೇಶ: ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಗಳಿಗೆ ನಿತ್ಯಾವಸರದ ಸಹಾಯಧನವನ್ನು ನೀಡುವುದು.
- ಫಲಾನುಭವಿಗಳು: ಸುಮಾರು 1.23 ಕೋಟಿ ಮಹಿಳೆಯರು ಈ ಯೋಜನೆಯ ಅಡಿಯಲ್ಲಿ ಅರ್ಹರಾಗಿದ್ದಾರೆ.
- ಹಣದ ವರ್ಗಾವಣೆ: ತಾಲೂಕು ಪಂಚಾಯಿತಿ ಮೂಲಕ ನೇರ ಬ್ಯಾಂಕ್ ಖಾತೆಗೆ (DBT) ಹಣವನ್ನು ಸಂದಾಯ ಮಾಡಲಾಗುತ್ತಿದೆ.
- ಪಾವತಿ ಸ್ಥಿತಿ: ಈಗಾಗಲೇ 40 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ.
ಗೃಹಲಕ್ಷ್ಮಿ ಯೋಜನೆಯ ಹಣವನ್ನು ಹೇಗೆ ಚೆಕ್ ಮಾಡಬೇಕು?
ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ಪರಿಶೀಲಿಸಲು DBT Karnataka ಅಪ್ಲಿಕೇಶನ್ ಅನ್ನು ಬಳಸಬಹುದು. ಹಂತ ಹಂತವಾದ ಮಾರ್ಗದರ್ಶನ:
ಹಂತ 1: DBT Karnataka ಅಪ್ಲಿಕೇಶನ್ ಡೌನ್ಲೋಡ್ ಮಾಡಿ
- ನಿಮ್ಮ ಸ್ಮಾರ್ಟ್ಫೋನ್ನಲ್ಲಿ Google Play Store ತೆರೆಯಿರಿ.
- “DBT Karnataka” ಎಂದು ಸರ್ಚ್ ಮಾಡಿ.
- ಅಧಿಕೃತ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ.
ಹಂತ 2: OTP ಮೂಲಕ ಲಾಗಿನ್ ಮಾಡಿ
- ಅಪ್ಲಿಕೇಶನ್ ತೆರೆದ ನಂತರ, ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಿ.
- “Get OTP” ಬಟನ್ ಕ್ಲಿಕ್ ಮಾಡಿ.
- ನಿಮ್ಮ ಮೊಬೈಲ್ಗೆ ಬಂದ OTP ನಮೂದಿಸಿ ಮತ್ತು “Verify OTP” ಕ್ಲಿಕ್ ಮಾಡಿ.
ಹಂತ 3: mPIN ಸೆಟಪ್ ಮಾಡಿ
- ನಿಮ್ಮ ಸುರಕ್ಷತೆಗಾಗಿ 4-ಅಂಕಿಯ mPIN ರಚಿಸಿ.
- ಅದೇ PIN ಅನ್ನು “Confirm mPIN” ನಲ್ಲಿ ಮತ್ತೆ ನಮೂದಿಸಿ.
- “Submit” ಕ್ಲಿಕ್ ಮಾಡಿ.
ಹಂತ 4: ಪಾವತಿ ಸ್ಥಿತಿ ಪರಿಶೀಲಿಸಿ
- ಮುಖಪುಟದಲ್ಲಿ “Payment Status” ಆಯ್ಕೆಯನ್ನು ಕ್ಲಿಕ್ ಮಾಡಿ.
- ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ನಿಮ್ಮ ಹಣದ ವರ್ಗಾವಣೆ ವಿವರಗಳು ತೋರಿಸಲ್ಪಡುತ್ತದೆ.
- “Seeding Status of Aadhaar in Bank Account” ಕ್ಲಿಕ್ ಮಾಡಿ, ನಿಮ್ಮ ಆಧಾರ್ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆ ಎಂಬುದನ್ನು ಪರಿಶೀಲಿಸಿ.
ಮುಖ್ಯ ಸೂಚನೆಗಳು
✅ ಹಣವು ಹಂತಹಂತವಾಗಿ ಎಲ್ಲಾ ಫಲಾನುಭವಿಗಳ ಖಾತೆಗೆ ಬರುತ್ತದೆ.
✅ ಯಾವುದೇ ತಾಂತ್ರಿಕ ಸಮಸ್ಯೆ ಇದ್ದರೆ, ನಿಮ್ಮ ತಾಲೂಕು ಕಚೇರಿಗೆ ಸಂಪರ್ಕಿಸಿ.
✅ ಫ್ರಾಡ್ ಎಚ್ಚರಿಕೆ: ಸರ್ಕಾರವು SMS/ಕರೆ ಮೂಲಕ ಪಾಸ್ವರ್ಡ್ ಕೇಳುವುದಿಲ್ಲ.
ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯಾಗಿರುವುದು ರಾಜ್ಯದ ಮಹಿಳೆಯರಿಗೆ ಒಂದು ದೊಡ್ಡ ಸಹಾಯವಾಗಿದೆ . ಹಾಗೆಯೇ ಆದಷ್ಟು ಬೇಗ ಹಣ ಖಾತೆಗೆ ಜಮಾ ಆದರೇ ಸಂತಸದ ಸುದ್ದಿ ಅಂತಅನೇ ಹೇಳಬಹುದು..
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ರಾಜ್ಯದ ಮಹಿಳೆಯರಿಗೆ ಶುಭಸುದ್ದಿ “ಗೃಹಲಕ್ಷ್ಮಿ” ಯೋಜನೆಯ ಬಾಕಿ ಕಂತಿನ ₹4000 ಹಣ ನಾಳೆ ವರಮಹಾಲಕ್ಷ್ಮಿ ಹಬ್ಬಕ್ಕೆ ಖಾತೆಗೆ ಜಮಾ.!
- ಖಾತೆಗೆ ಬರದ ಹಣ: ಗೃಹಲಕ್ಷ್ಮಿ ಯೋಜನೆ ವಿರುದ್ಧ ಮಹಿಳೆಯರ ಆಕ್ರೋಶ; 21ನೇ ಕಂತು ಬಿಗ್ ಅಪ್ಡೇಟ್ ಕೊಟ್ಟ ಅಧಿಕಾರಿಗಳು
- ಸರ್ಕಾರದಿಂದ `ನಿರುದ್ಯೋಗಿಗಳಿಗೆ ಬಂಪರ್ ಗಿಫ್ಟ್’ : ಎಲೆಕ್ಟ್ರಿಕ್ ವಾಹನ ಖರೀದಿಗೆ 3 ಲಕ್ಷ ರೂ. ಸಹಾಯಧನ ಸೇರಿ 17 ಬಿಲ್ ಗೆ ಸಂಪುಟ ಒಪ್ಪಿಗೆ.!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Shivaraj is the Lead Editor at NeedsOfPublic.in with over 4 years of experience tracking Indian government schemes and educational updates. He specializes in simplifying complex notifications from the Central and State governments to help the public understand their benefits. Before joining NeedsOfPublic, Shivaraj worked as a Content Writer focusing on Civic issues. When he isn’t decoding the latest circulars, he enjoys reading about digital literacy.”
Follow Shivaraj on:


WhatsApp Group




