“ಇಂದಿನ ಆಧುನಿಕ ಜೀವನಶೈಲಿಯಲ್ಲಿ (new lifestyle) ಸ್ವಂತ ಮನೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಕನಸು. ತಮ್ಮದೇ ಆದ ನೆಲೆ ಕಟ್ಟಬೇಕು ಎಂಬ ಕನಸನ್ನು ಸಾಕಾರಗೊಳಿಸಲು ಬಹುಮಾನ್ಯ ಶ್ರಮ, ಯೋಜನೆ ಮತ್ತು ಧೈರ್ಯ ಅಗತ್ಯ. ಆದರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ (Indian culture) ದೇವರ ಭಕ್ತಿಯು, ಜಾತಕದ ಗ್ರಹಬಲಗಳು ಮತ್ತು ಶ್ರದ್ಧೆಯ ಮಾರ್ಗವು ಈ ಕನಸನ್ನು ಸುಲಭಗೊಳಿಸಬಹುದಾದ ಶಕ್ತಿಶಾಲಿ ಆಯಾಮಗಳಾಗಿ ಪರಿಗಣಿಸಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇನ್ನು, ಜ್ಯೋತಿಷ್ಯಶಾಸ್ತ್ರದಲ್ಲಿ (In Astrology) ಮಂಗಳ ಗ್ರಹ (ಅಂಗಾರಕ) ಮನೆ ಕಟ್ಟುವ ಯೋಗಕ್ಕೆ ಪ್ರಮುಖ ಕಾರಣವೆಂದೂ, ಮಂಗಳ ಬಲಿಷ್ಠವಿದ್ದರೆ ಖಂಡಿತವಾಗಿಯೂ ನಿವಾಸವನ್ನು ಹೊಂದುವ ಅವಕಾಶ ಸಿಗುತ್ತದೆ ಎಂಬ ನಂಬಿಕೆಯೂ ಇದೆ. ಹೀಗಾಗಿ, ಮಂಗಳನಿಗೆ ಸಂಬಂಧಿಸಿದ ಕೆಲವು ದೇವಾಲಯಗಳು, ವಿಶೇಷ ಪೂಜೆಗಳು ಈ ಕನಸನ್ನು ನೆರವೇರಿಸಬಲ್ಲದು ಎಂಬ ಭರವಸೆ ಜನರಲ್ಲಿ ಗಟ್ಟಿಯಾಗಿ ಬೆಳೆದಿದೆ. ಇದೀಗ, ನೀವು ಸ್ವಂತ ಮನೆ(Own house) ಕಟ್ಟುವ ಆಸೆ ಹೊಂದಿದ್ದರೆ ಈ ಕೆಳಗಿನ ಕೆಲವು ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ ದಿಟ್ಟ ಹೆಜ್ಜೆ ಇಡಬಹುದು. ಹಾಗಿದ್ದರೆ ಆ ದೇವಸ್ಥಾನಗಳು ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಹೌದು, ಭಾರತೀಯ ಸಂಸ್ಕೃತಿಯಲ್ಲಿ ಸ್ವಂತ ಮನೆ ಎಂಬುದು ಕೇವಲ ಒಂದು ಕಟ್ಟಡವಲ್ಲ, ಅದು ಬದುಕಿನ ನೆಲೆ, ನೆಮ್ಮದಿ, ಸಾಂತ್ವನ, ಕುಟುಂಬದ ಅಭಯ ಸ್ಥಳ. ಒಂದು ಮನೆಯನ್ನು ಹೊಂದಿರುವ ಕನಸು(Dream) ಪ್ರತಿ ಕುಟುಂಬದ ಹಂಬಲ. ಆದರೆ ಈಗಿನ ಆರ್ಥಿಕ ಪರಿಸ್ಥಿತಿ, ಜಾಗದ ದರ, ಸಾಲದ ಭಾರ ಮತ್ತು ಜಾತಕದ ಗ್ರಹಬಲ ಇವೆಲ್ಲವೂ ಮನೆ ಕನಸಿಗೆ ಅಡ್ಡಿಯಾಗಬಹುದು. ಇಂಥ ಸಂದರ್ಭದಲ್ಲಿ ಭಕ್ತಿಯಿಂದ ಶರಣಾಗಿ, ದೇವಸ್ಥಾನಗಳಿಗೆ (Temples) ಹೋಗುವುದು ಅನೇಕರು ಅನುಸರಿಸುವ ಮಾರ್ಗ. ವಿಶೇಷವಾಗಿ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಂಗಳ ಗ್ರಹ ಮನೆ, ಭೂಮಿ, ಜಾಗ ಈ ವಿಷಯಗಳಿಗೂ ನೇರ ಸಂಬಂಧ ಹೊಂದಿದೆ. ಮಂಗಳ ಬಲಶಾಲಿಯಾದ್ರೆ ಮನೆ ಯೋಗ ನಿಶ್ಚಿತ ಎಂದು ನಂಬುತ್ತಾರೆ.
1. ಮಂಗಳವಾರದ ಚತುರ್ಥಿ: ಗಣೇಶನ ಪೂಜೆ,
ಮಂಗಳವಾರದಂದು ಬರುವ ಅಂಗಾರಕ ಚತುರ್ಥಿ ಗಣೇಶನಿಗೆ ಅತ್ಯಂತ ಪ್ರೀತಿಯ ದಿನ. ಈ ದಿನ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ (Special puja) ಮಾಡಿದರೆ ಮನೆ ಕಟ್ಟೋ ಯೋಗ ಸಿಗುತ್ತದೆ ಎನ್ನುವುದು ನಂಬಿಕೆ.
ಪಿಳ್ಳರ್ಯಾ ಪಟ್ಟಿ ಕಲ್ಪವೃಕ್ಷ ಗಣಪತಿ ದೇವಸ್ಥಾನದಲ್ಲಿ ದೇವರು ಅಂಕುಶ-ಪಾಶವಿಲ್ಲದೇ, ಬಲಕಡೆಯ ಸೊಂಡಿಲೊಂದಿಗೆ ಆಶೀರ್ವದಿಸುತ್ತಿದ್ದಾನೆ. ಇಲ್ಲಿಗೆ ಕುಟುಂಬ ಸಮೇತರಾಗಿ ಹೋಗಿ ಪೂಜೆ ಮಾಡಿದರೆ ಮನೆ ಯೋಗ ಖಂಡಿತ ಸಿಗುತ್ತದೆ ಎನ್ನಲಾಗುತ್ತದೆ.
2. ಮಣಚನಲ್ಲೂರಿನ ಭೂಮಿನಾಥರ್ ದೇವಸ್ಥಾನ – ಭೂಮಿ ದೇವನ ಅನುಗ್ರಹ,
ತಿರುಚಿ ಬಳಿ ಇರುವ ಈ ದೇವಸ್ಥಾನ ವಾಸ್ತು ಪುರುಷನ ತಾಯಿ ಮನೆ ಎನ್ನಬಹುದು. ಇಲ್ಲಿ ಶಿವನ (Lord shiva) ಬೆವರಿನಿಂದ ಹುಟ್ಟಿದ ಶಿವಗಣ, ಜನರ ಮನೆ-ಜಾಗ ಸಂಬಂಧಿಸಿದ ಆಸೆಗಳನ್ನು ಈಡೇರಿಸುತ್ತಾನೆ. ವಿಶೇಷ ಪೂಜೆ ಮಾಡಿದರೆ ನಿವೇಶನ, ಗೃಹ ನಿರ್ಮಾಣಕ್ಕೆ ಅನುಕೂಲವಾಗುತ್ತದೆ.
3. ಸಿರುವಾಪುರಿ ಮುರುಗನ ಆಶೀರ್ವಾದ:
ಚೆನ್ನೈನ ಬಳಿಯ ಸಿರುವಾಪುರಿ ಮುರುಗ ದೇವಸ್ಥಾನಕ್ಕೆ ಹೋಗಿ, ಭಕ್ತಿಯಿಂದ ಪೂಜೆ ಮಾಡಿದರೆ ಗೃಹ ಕನಸು ಈಡೇರುತ್ತದೆ. ಈ ದೇವಸ್ಥಾನಕ್ಕೆ ರಾಮಾಯಣದ (Ramayana) ಕಾಲದಿಂದ ಸಂಬಂದವಿದ್ದು, ಲವ-ಕುಶರ ಯುದ್ಧದ ನೆಲ ಎಂದು ಪರಿಗಣಿಸಲಾಗಿದೆ.
4. ಮೇಲ್ನೋದತ್ತೂರಿನ ವರಾಹ ದೇವಸ್ಥಾನ – ಭೂಮಿ ಸಮಸ್ಯೆಗಳ ಪರಿಹಾರ:
ತಿರುವಳ್ಳೂರು ಜಿಲ್ಲೆಯಲ್ಲಿ ಇರುವ ಈ ದೇವಸ್ಥಾನದಲ್ಲಿ ಶಾಂತ(Peace) ಸ್ವರೂಪಿ ಧರಣಿ ವರಾಹನ ಪೂಜೆ, ಶನಿವಾರದಂದು ತುಪ್ಪದ ದೀಪ ಹಚ್ಚುವುದರಿಂದ, ಶನಿ ಗ್ರಹದ ಬಾಧೆ ನಿವಾರಣೆಯಾಗುತ್ತದೆ. ಜಾಗದ ಸಮಸ್ಯೆಗಳ ಪರಿಹಾರವಾಗುತ್ತದೆ, ಮದುವೆ ಸಮಸ್ಯೆಗಳೂ ದೂರವಾಗುತ್ತವೆ ಎಂಬ ನಂಬಿಕೆ ಇದೆ.
5. ಮರಕ್ಕಾಣಂನಲ್ಲಿ ಭೂಮೀಶ್ವರ ದೇವಸ್ಥಾನ – ಜಾಗದ ಆಶೀರ್ವಾದ:
ಚೆನ್ನೈ-ಪುದುಚೇರಿ ದಾರಿಯಲ್ಲಿರುವ ಮರಕ್ಕಾಣಂನಲ್ಲಿ ಭೂಮಿಯಿಂದಲೇ ಹೊರಬಂದಂತೆ ಭಕ್ತನಿಗೆ ಕಾಣಿಸಿಕೊಂಡ ಶಿವಲಿಂಗ ಭೂಮೀಶ್ವರ ಸ್ವಾಮಿ. ಭಕ್ತಿಯಿಂದ ಪೂಜೆ ಮಾಡಿದರೆ ನಿವೇಶನ ಮತ್ತು ಮನೆ ಸಂಬಂಧಿಸಿದ ಎಲ್ಲಾ ತೊಂದರೆಗಳು (All problems) ಪರಿಹಾರವಾಗುತ್ತವೆ.
6. ಒತ್ತಕ್ಕಾಲ್ ಮಂಟಪದ ಬಾಲಮುರುಗನ ತಾಣ – ಕಲ್ಲು ಮಂಟಪದ ಭಕ್ತಿಯ ಯಾತ್ರೆ:
ಪಿಚನೂರಿನ ಹತ್ತಿರ ಇರುವ ಈ ದೇವಸ್ಥಾನದಲ್ಲಿ ಬಾಲಮುರುಗ, ಭದ್ರಕಾಳಿ ಅಮ್ಮ ಮತ್ತು ಗಣಪತಿ ಸನ್ನಿಧಿ ಇದೆ. ಇಲ್ಲಿ ಕೆಂಪು ಕಲ್ಲುಗಳನ್ನು (Red stones) ಜೋಡಿಸಿ ಪೂಜೆ ಮಾಡಿದರೆ, ಮನೆ, ಬಾಳಿಗೆ ಅಸ್ತಿತ್ವ ಸಿಗುತ್ತದೆ. ಮನೆ, ಮದುವೆ, ಸಂತಾನ ಈ ಮೂರು ಕನಸುಗಳಿಗೆ ಈ ಸ್ಥಳ ಆಶೀರ್ವಾದ ದಾಯಕ ಎಂದು ನಂಬಲಾಗಿದೆ.
ಒಟ್ಟಾರೆಯಾಗಿ, ಧಾರ್ಮಿಕ ನಂಬಿಕೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆದರೆ ನಾವು ನಮ್ಮ ಮನಸ್ಸನ್ನು ಶುದ್ಧವಾಗಿ, ಭಕ್ತಿಯಿಂದ ದೇವರ ಆಶೀರ್ವಾದ ಕೇಳಿದರೆ, ನಮ್ಮ ಹಾದಿಯಲ್ಲಿ ಪ್ರೋತ್ಸಾಹ, ಶಕ್ತಿ ಮತ್ತು ಶ್ರದ್ಧೆ ಒದಗುತ್ತದೆ. ಹಣ, ಜಾಗ, ಜಾತಕದ ಅಡ್ಡಿಯಂತೆ ಎನಿಸಬಹುದಾದ ಅಡೆತಡೆಗಳಿಗೆ ಭಕ್ತಿಯು ಶಕ್ತಿ ನೀಡುವ ಸಾಧನವಾಗಬಹುದು.
ಆರ್ಥಿಕವಾಗಿ, ವಾಸ್ತುವಾಗಿ ಅಥವಾ ಜಾತಕದ ತೊಂದರೆಗಳಿಂದ ಸ್ವಂತ ಮನೆ ಕನಸು ದೂರವಿದ್ದರೂ ಭಕ್ತಿಯಿಂದ ದೇವಾಲಯಗಳಿಗೆ (Temple’s) ಹೋಗಿ ನಿಸ್ವಾರ್ಥವಾದ ಪೂಜೆ ಮಾಡಿದರೆ, ಮನಸ್ಸಿಗೆ ನೆಮ್ಮದಿ, ಮನೆಗೆ ನೆಲೆ ದೊರೆಯುವುದು ಖಂಡಿತ. ಮಂಗಳದ ಅನುಗ್ರಹ, ಗಣೇಶನ ಕೃಪೆ, ಮುರುಗನ ಭಕ್ತಿಗೆ ಪ್ರತಿಫಲ ಸಿಕ್ಕದ ಉದಾಹರಣೆಗಳು ವಿರಳ. ನೀವು ಮನೆ ಕಟ್ಟುವ ಕನಸು ಹೊಂದಿದ್ದರೆ, ಈ ದೇವಾಲಯಗಳಿಗೆ ಭೇಟಿ ನೀಡಿ, ಪ್ರಾರ್ಥಿಸಿ, ಶ್ರದ್ಧೆಯಿಂದ ಧೈರ್ಯದಿಂದ ಬದುಕನ್ನು ಸಾಗಿಸಿ. ದೇವರ ಅನುಗ್ರಹವೂ ಖಂಡಿತ ನಿಮಗೆ ಇದ್ದೇ ಇರುತ್ತದೆ.
ಮನೆ ಕಟ್ಟೋ ಕನಸು ಇದೆ ಅಂದ್ರೆ, ಈ ದೇವಸ್ಥಾನಗಳಿಗೆ ಹೋಗಿ ಭಕ್ತಿಯಿಂದ ಪ್ರಾರ್ಥಿಸಿ. ಕನಸು ಕೂಡ ನಿಶ್ಚಿತವಾಗಿಯೇ ನನಸು ಆಗುತ್ತದೆ!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




