ಹಿಂದುಳಿದ ವರ್ಗದವರ ಅಭಿವೃದ್ಧಿಗೆ ನೂತನ ಯೋಜನೆಗಳು: ಜೂನ್ 30ರೊಳಗೆ ‘ಸ್ವಾವಲಂಬಿ ಸಾರಥಿ’ ಸೇರಿದಂತೆ ದೇವರಾಜ ಅರಸು ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಿ
ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು 2025-26 ನೇ ಸಾಲಿಗೆ ಅನೇಕ ಸಬ್ಸಿಡಿ ಹಾಗೂ ಸಾಲ ಯೋಜನೆಗಳನ್ನು ಘೋಷಿಸಿದೆ. ಈ ಯೋಜನೆಗಳ ಮೂಲ ಉದ್ದೇಶ ಹಿಂದುಳಿದ ಸಮುದಾಯದ ಜನರಿಗೆ ಆರ್ಥಿಕವಾಗಿ ಸ್ವಾವಲಂಬಿಯಾಗಲು ಪ್ರೋತ್ಸಾಹಿಸುವುದು. ಅಂತಹ ಹಲವು ಜನಪರ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಜೂನ್ 30, 2025 ಕೊನೆಯ ದಿನವಾಗಿದೆ. ಹಾಗಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ರಾಜ್ಯ ಸರ್ಕಾರದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು 2025-26 ನೇ ಆರ್ಥಿಕ ವರ್ಷದ ಅನುದಾನ ಯೋಜನೆಗಳಡಿ, ಹಿಂದುಳಿದ ವರ್ಗದ ಜನರಿಗೆ ಸ್ವಾವಲಂಬನೆ, ಉದ್ಯೋಗಾವಕಾಶ ಹಾಗೂ ಶೈಕ್ಷಣಿಕ ಉನ್ನತಿಗೆ ನಾನಾ ರೀತಿಯ ನೆರವು ಒದಗಿಸಲು ವಿವಿಧ ಯೋಜನೆಗಳನ್ನು ಘೋಷಿಸಿದೆ. ಈ ಎಲ್ಲಾ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಜೂನ್ 30, 2025 ಕೊನೆಯ ದಿನವಾಗಿದ್ದು, ಅರ್ಹ ಫಲಾಪೇಕ್ಷಿಗಳು ಸೇವಾ ಸಿಂಧು ಪೋರ್ಟಲ್ ಅಥವಾ ನಿಕಟದ ಸೇವಾ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ವೈಶಿಷ್ಟ್ಯಯುಕ್ತ ಯೋಜನೆ – “ಸ್ವಾವಲಂಬಿ ಸಾರಥಿ ಯೋಜನೆ”
ಈ ಯೋಜನೆಗಳ ಉದ್ದೇಶ ಹಿಂದುಳಿದ ವರ್ಗದ ಯುವಕರು ಹಾಗೂ ಕುಟುಂಬಗಳಿಗೆ ಸ್ವಾವಲಂಬನೆಯ ಅವಕಾಶಗಳನ್ನು ನೀಡುವುದು, ಉದ್ಯೋಗ ನಿರ್ಮಾಣ ಮಾಡುವುದು, ಮತ್ತು ಅವರ ಆರ್ಥಿಕ ಸ್ವಾವಲಂಬನೆಯನ್ನು ಬಲಪಡಿಸುವುದಾಗಿದೆ. ಈ ಯೋಜನೆಯು ತಾವು ಖುದ್ದಾಗಿ ವಾಹನ ಓಡಿಸಿ ಜೀವನೋಪಾಯ ಮಾಡಿಕೊಳ್ಳಲು ಇಚ್ಛಿಸುವವರಿಗೆ ವಿಶೇಷ ಸಹಾಯಧನವನ್ನು ಒದಗಿಸುತ್ತದೆ. ಈ ಯೋಜನೆಯಡಿಯಲ್ಲಿ ಅರ್ಹ ವ್ಯಕ್ತಿಗೆ ಹೊಸ ಲಘು ವಾಹನ (ಟ್ಯಾಕ್ಸಿ, ಲಾರಿ ಇತ್ಯಾದಿ) ಖರೀದಿಗೆ ₹3 ಲಕ್ಷದವರೆಗೆ ಸಹಾಯಧನ ಒದಗಿಸಲಾಗುತ್ತದೆ. ಇದು ಉದ್ಯೋಗ ನಿರ್ಮಾಣಕ್ಕೆ ದಾರಿ ಹೂಡುವ ಮಹತ್ವದ ಯೋಜನೆಯಾಗಿದೆ.
ಅರ್ಹತಾ ಮಾನದಂಡಗಳು ಹೀಗಿವೆ:
ವಯಸ್ಸು: ಕನಿಷ್ಠ 21 ರಿಂದ ಗರಿಷ್ಠ 45 ವರ್ಷದೊಳಗೆ.
ಆದಾಯ ಮಿತಿ,
ಗ್ರಾಮಾಂತರ ಪ್ರದೇಶ: ವಾರ್ಷಿಕ ₹98,000 ಒಳಗೆ
ನಗರ ಪ್ರದೇಶ: ವಾರ್ಷಿಕ ₹1,20,000 ಒಳಗೆ
ಚಾಲನಾ ಪರವಾನಗಿ: ಲಘು ವಾಹನ ಚಾಲನಾ ಪರವಾನಗಿ ಕಡ್ಡಾಯ. ಈ ಹಿಂದೆ ಸರ್ಕಾರದ ಯಾವುದೇ ವಾಹನ ಯೋಜನೆಯ ಲಾಭ ಪಡೆದಿಲ್ಲದವರಾಗಿರಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:
1. ಜಾತಿ ಮತ್ತು ಆದಾಯ ಪ್ರಮಾಣಪತ್ರ.
2. ಆಧಾರ್ ಕಾರ್ಡ್.
3. ಚಾಲನಾ ಪರವಾನಗಿ (DL) ಪ್ರತಿಲಿಪಿ.
4. ಬ್ಯಾಂಕ್ ಪಾಸ್ ಬುಕ್ ನಕಲು.
5. ವಾಹನದ ಬೆಲೆಪಟ್ಟಿ ಅಥವಾ ಕೋಟೇಶನ್.
6. ಸ್ವಯಂ ಘೋಷಣಾ ಪತ್ರ.
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?:
ಆನ್ಲೈನ್ ಮೂಲಕ:
https://sevasindhu.karnataka.gov.in ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಆಫ್ಲೈನ್ ಮೂಲಕ: ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ. ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಕರೆ ಮಾಡಿ:
080-22374832 / 8050770004 / 8050770005
ವೆಬ್ಸೈಟ್: www.dbcdc.karnataka.gov.in
ಡಿ.ದೇವರಾಜ ಅರಸು ನಿಗಮದ ವಿವಿಧ ಯೋಜನೆಗಳು ಹೀಗಿವೆ:
ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ.
ಗಂಗಾ ಕಲ್ಯಾಣ ನೀರಾವರಿ ಯೋಜನೆ.
ಅರಿವು – ಶೈಕ್ಷಣಿಕ ಸಾಲ ಯೋಜನೆ.
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ.
ಸ್ವಾತಂತ್ರ್ಯ ಅಮೃತ ಮಹೋತ್ಸವ ಮುನ್ನಡೆ ಯೋಜನೆ.
ಹೊಲಿಗೆ ಯಂತ್ರ ವಿತರಣೆ ಯೋಜನೆ.
ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಯೋಜನೆ.
ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?:
ಹಿಂದುಳಿದ ವರ್ಗದ ಪ್ರವರ್ಗ 1, 2A, 3A, 3B ಮಾತ್ರ ಅರ್ಹ.
ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ, ಅರೆ ಅಲೆಮಾರಿ, ಒಕ್ಕಲಿಗ, ಲಿಂಗಾಯತ, ಕಾಡುಗೊಲ್ಲ, ಮರಾಠ ಹಾಗೂ ಇವುಗಳ ಉಪಸಮುದಾಯಗಳವರಿಗೆ ಈ ಯೋಜನೆ ಅನ್ವಯವಾಗದು.
ಈಗಾಗಲೇ ನಿಗಮದ ಯಾವುದೇ ಯೋಜನೆಯ ಲಾಭ ಪಡೆದಿರುವ ವ್ಯಕ್ತಿಗಳು ಅಥವಾ ಅವರ ಕುಟುಂಬದವರು ಅರ್ಹರಾಗಿರುವುದಿಲ್ಲ.
2023-24 ಮತ್ತು 2024-25ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯದೆ ನಿರಾಕೃತರಾದ ಅರ್ಜಿದಾರರಿಗೆ ಮತ್ತೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ.
ಗಮನಿಸಿ:
ಅರ್ಜಿದಾರರು ತಮ್ಮ ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು.
ಎಲ್ಲ ದಾಖಲೆಗಳಲ್ಲಿ ಇರುವ ಹೆಸರು, ಶ್ರೀ/ಶ್ರೀಮತಿ/ಕುಮಾರಿ ಮೊದಲಾದ ಪ್ರತ್ಯೇಕತೆಗಳು ಹೊಂದಾಣಿಕೆಯಾಗಿರಬೇಕು.
ಈಗಾಗಲೇ ನಿಗಮದ ಯಾವುದೇ ಯೋಜನೆಯ ಲಾಭ ಪಡೆದಿರುವವರು ಅಥವಾ ಅವರ ಕುಟುಂಬದವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
2023-24 ಅಥವಾ 2024-25 ರಲ್ಲಿ ಅರ್ಜಿ ಸಲ್ಲಿಸಿದರೂ ಲಾಭ ಪಡೆಯದವರನ್ನು ಮರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.
ಒಟ್ಟಾರೆಯಾಗಿ, ಸರ್ಕಾರದ ಈ ಮಹತ್ವದ ಯೋಜನೆಗಳು ಹಿಂದುಳಿದ ವರ್ಗದ ಜನತೆಗೆ ಉದ್ಯೋಗಾವಕಾಶ ಹಾಗೂ ಆರ್ಥಿಕ ಸ್ವಾವಲಂಬನೆ ಸಾಧಿಸಲು ನಿಜವಾಗಿಯೂ ಉತ್ತಮ ಅವಕಾಶವನ್ನು ಒದಗಿಸುತ್ತವೆ. ಅರ್ಹರು ಜೂನ್ 30ರೊಳಗೆ ಅರ್ಜಿ ಸಲ್ಲಿಸುವುದು ಅನಿವಾರ್ಯ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




