ಆರ್ಬಿಐ(RBI) ಹೊಸ ನಿಯಮ: ಗ್ರಾಹಕರ ಹಣಕಾಸು ಭದ್ರತೆಗೆ ಟೆಲಿಕಾಂ ಕಾಲ್ಗಳಿಗೆ(telecom calls) ಸ್ಪಷ್ಟ ಮಾರ್ಗಸೂಚಿ
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಸೈಬರ್ ಕ್ರೈಂ(Cybercrime) ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿವೆ. ಖಾಸಗಿ ಮಾಹಿತಿಯನ್ನು ಕದಿಯುವ ಫೋನ್ ಕರೆಗಳು, ಸ್ಪ್ಯಾಮ್ ಮೆಸೇಜುಗಳು ಮತ್ತು ಬ್ಯಾಂಕ್ ನಕಲಿ ನಂಬರಿಂದ ಬರುವ ಮೋಸದ ಕರೆಗಳು ಜನಸಾಮಾನ್ಯರ ನಿದ್ರೆ ಕೆಡಿಸುತ್ತಿವೆ. ಈ ಹಿನ್ನಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರ ಹಣಕಾಸು ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇನ್ನುಮುಂದೆ ಎಸ್ಬಿಐ ಗ್ರಾಹಕರಿಗೆ ಬ್ಯಾಂಕ್ನಿಂದ ಬರುವ ಯಾವುದೇ ಅಧಿಕೃತ ಫೋನ್ ಕರೆಗಳು ಕೇವಲ +91-1600 ಸರಣಿಯ ನಂಬರುಗಳಿಂದ ಮಾತ್ರ ಆಗಿರುತ್ತವೆ. ಬ್ಯಾಂಕ್ ಇದನ್ನು ಸ್ಪಷ್ಟವಾಗಿ ತಿಳಿಸಿದ್ದು, ಇತರ ಯಾವುದೇ ನಂಬರಿಂದ ಬರುವ ಕರೆಗಳನ್ನು ಗ್ರಾಹಕರು ನಂಬಬಾರದು. ಹಾಗಿದ್ದರೆ ಆರ್ಬಿಐ ನ ಹೊಸ ಮಾರ್ಗಸೂಚಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಗ್ರಾಹಕರಿಗೆ ಆರ್ಬಿಐನಿಂದ ಹೊಸ ಮಾರ್ಗಸೂಚಿ:
ಜನವರಿ 2025ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಎಲ್ಲಾ ಬ್ಯಾಂಕುಗಳಿಗೆ ಹಾಗೂ ಹಣಕಾಸು ಸಂಸ್ಥೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಈ ಮಾರ್ಗಸೂಚಿಯ ಪ್ರಕಾರ,
1600 ಸರಣಿ ನಂಬರ್ಗಳು: ಅಧಿಕೃತ ಮತ್ತು ನಂಬಿಕೆಯಾಗುವ ಗ್ರಾಹಕ ಸಂಪರ್ಕಕ್ಕಾಗಿ ಮಾತ್ರ.
1400 ಸರಣಿ ನಂಬರ್ಗಳು: ಕೇವಲ ಪ್ರಚಾರಾತ್ಮಕ ಮತ್ತು ಮಾರ್ಕೆಟಿಂಗ್ ಕರೆಗಳಿಗೆ ಮಾತ್ರ.
ಒಟ್ಟಾರೆಯಾಗಿ, ನೀವು ಬ್ಯಾಂಕಿನಿಂದ ಫೋನ್ ಕರೆ ನಿರೀಕ್ಷಿಸುತ್ತಿದ್ದರೆ, ಅದು 1600 ನಿಂದ ಬಂದರೆ ಮಾತ್ರ ನಂಬಿ ಮಾತನಾಡಿ.
ಗ್ರಾಹಕರಿಗೆ ಎಸ್ಬಿಐ ಮನವಿ: ಎಚ್ಚರಿಕೆಯಿಂದಿರಿ!
ಎಸ್ಬಿಐ ತನ್ನ ಎಲ್ಲಾ ಗ್ರಾಹಕರಿಗೆ ಮನವಿ ಮಾಡಿದ್ದು, ನೀವು ಒಬ್ಬ ಎಸ್ಬಿಐ ಖಾತೆದಾರರಾಗಿದ್ದರೆ ಈ ನಿಯಮವನ್ನು ತಪ್ಪದೇ ಗಮನದಲ್ಲಿಡಿ,
ಯಾವುದೇ ಅನಾಮಿಕ ನಂಬರ್ನಿಂದ ಬರುವ ಕರೆ ಅಥವಾ OTP ಕೇಳುವ ಕರೆಗಳಿಗೆ ಪ್ರತಿಕ್ರಿಯಿಸಬೇಡಿ.
ಯಾವಾಗಲೂ ಕರೆ ಮಾಡಿದ ನಂಬರ್ ಪರಿಶೀಲಿಸಿ,ಅದು 1600 ಸರಣಿಯದ್ದೇ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ಯಾವುದೇ ರೀತಿಯ ಖಾಸಗಿ ಬ್ಯಾಂಕಿಂಗ್ ಮಾಹಿತಿ, ಪಿನ್, ಪಾಸ್ವರ್ಡ್, OTP ಹಂಚಿಕೊಳ್ಳಬೇಡಿ.
ನಿಯಮ ಪಾಲನೆ ಏಕೆ ಅಗತ್ಯ?:
ಈ ಹೊಸ ನಿಯಮದ ಹಿನ್ನಲೆಯಲ್ಲಿ, ಎಸ್ಬಿಐ(SBIw) ಗ್ರಾಹಕರಿಗೆ ಸ್ಪಷ್ಟವಾದ ಕರೆ ಗುರುತನ್ನು ಒದಗಿಸುತ್ತಿದೆ. ಇದು ಸ್ಪ್ಯಾಮ್ ಅಥವಾ ಫ್ರಾಡ್ ಕರೆಗಳಿಂದ ದೂರವಿರಲು ಸಹಾಯ ಮಾಡುತ್ತಿದ್ದು, ನಿಮ್ಮ ಹಣದ ಸುರಕ್ಷತೆಗೆ ಬಲವಾದ ಕ್ರಮವಾಗಿದೆ. ಇಂತಹ ನಿಯಮಗಳು ಸೈಬರ್ ಭದ್ರತೆಯ ದೃಷ್ಟಿಕೋನದಿಂದ ಉತ್ತಮ ಕ್ರಮವಾಗಿದೆ.
ಒಟ್ಟಾರೆಯಾಗಿ, ಡಿಜಿಟಲ್(digital) ಯುಗದಲ್ಲಿ ಭದ್ರತೆ ಎಂದರೆ ಕೇವಲ ಪಾಸ್ವರ್ಡ್ ಅಲ್ಲ, ಎಂದು ನಾವು ಭಾವಿಸಬೇಕು. ಎಸ್ಬಿಐ ನಿಮ್ಮ ಹಣದ ಭದ್ರತೆಗೆ ಹೆಜ್ಜೆ ಇಡುತ್ತಿದ್ದರೆ, ನೀವು ಕೂಡಾ ಒಂದು ಹೆಜ್ಜೆ ಮುಂದೆ ಇಟ್ಟು,ಈ ಹೊಸ ನಿಯಮವನ್ನು ಪಾಲಿಸಿ, ಅನುಸರಿಸಿ. ನಿಮ್ಮ ಹಣ ನಿಮ್ಮ ಕೈಯಲ್ಲಿರಲಿ, ಮೋಸಗಾರರ ಕೈಯಲ್ಲಲ್ಲ!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




