ರಾಜ್ಯದ ಬಿಪಿಎಲ್(BPL) ಮತ್ತು ಎಪಿಎಲ್ ಪಡಿತರ ಚೀಟಿದಾರರಿಗೆ(APL ration card) ಮತ್ತೊಮ್ಮೆ ಸಿಹಿ ಸುದ್ದಿ: ತಿದ್ದುಪಡಿ ಅವಧಿ ವಿಸ್ತರಣೆ!
ರಾಜ್ಯದಲ್ಲಿ ಪಡಿತರ ಚೀಟಿಯು ಜನ ಸಾಮಾನ್ಯರ ಜೀವನದಲ್ಲಿ ಅತಿಯಾದ ಮಹತ್ವ ಹೊಂದಿದ್ದು, ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಅವು ಅತ್ಯಗತ್ಯವಾಗಿವೆ. ಆದ್ದರಿಂದ ಪಡಿತರ ಚೀಟಿಯಲ್ಲಿ ಯಾವುದೇ ರೀತಿಯ ತಪ್ಪುಗಳು ಇದ್ದರೆ, ಆ ಅರ್ಜಿ ತಕ್ಷಣವೇ ನಿರಾಕರಿಸಬಹುದು. ಈ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ(Department of Food and Civil Supplies) ಪಡಿತರ ಚೀಟಿ ತಿದ್ದುಪಡಿ ಪ್ರಕ್ರಿಯೆಯನ್ನು ಪುನಶ್ಚೇತನಗೊಳಿಸಿದ್ದು, ಅದರ ಕೊನೆಯ ದಿನಾಂಕವನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ. ಹಾಗಿದ್ದರೆ ಕೊನೆಯ ದಿನಾಂಕ ಯಾವಾಗ? ಯಾವೆಲ್ಲ ದಾಖಲೆಗಳು ಬೇಕು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಕರ್ನಾಟಕ ಸರ್ಕಾರದ(Karnataka government) ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ರಾಜ್ಯದ ಲಕ್ಷಾಂತರ ಪಡಿತರ ಚೀಟಿದಾರರಿಗೆ ಮತ್ತೊಮ್ಮೆ ಸಕಾರಾತ್ಮಕ ಸುದ್ದಿ ದೊರೆತಿದೆ. ರಾಜ್ಯದಲ್ಲಿ ಬಿಪಿಎಲ್ ಮತ್ತು ಎಪಿಎಲ್ (BPL and APL)ಪಡಿತರ ಚೀಟಿಗಳ ತಿದ್ದುಪಡಿ ಪ್ರಕ್ರಿಯೆಗೆ ನೀಡಲಾಗಿರುವ ಕೊನೆಯ ದಿನಾಂಕವನ್ನು ಮತ್ತೊಮ್ಮೆ ಮುಂದೂಡಲಾಗಿದೆ. ಇದು ಪಡಿತರ ಚೀಟಿಗಳ ಸರಿ-ತಿದ್ದುಪಡಿ ಮಾಡಿಕೊಳ್ಳಬೇಕೆಂಬ ಇಚ್ಛೆಯುಳ್ಳವರಿಗೆ ಅಮೂಲ್ಯ ಅವಕಾಶವಾಗಿದೆ. ಈಗಾಗಲೇ ಹಲವು ಬಾರಿ ವಿಸ್ತರಿಸಿಕೊಂಡಿರುವ ಈ ಅವಧಿಯನ್ನು, ಈ ಮೊದಲು 2024ರ ಮಾರ್ಚ್ 31ರ ವರೆಗೆ ಮುಂದೂಡಲಾಗಿತ್ತು. ಇದೀಗ ಮತ್ತೊಮ್ಮೆ ಮುಂದೂಡಿಕೆ ನೀಡಿ, 2025ರ ಜೂನ್ 30ರವರೆಗೆ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ. ಈ ಸೌಲಭ್ಯವು ಪಡಿತರ ಚೀಟಿ ಹೊಂದಿರುವ ಎಲ್ಲ ಗ್ರಾಹಕರಿಗೆ ಮಹತ್ತರವಾದ ಅವಕಾಶವಾಗಿದೆ.
ಪಡಿತರ ಚೀಟಿ ಎಂಬುದು ಸರ್ಕಾರದಿಂದ ಸಿಗುವ ಹಲವಾರು ಸೌಲಭ್ಯಗಳು, ಸಬ್ಸಿಡಿ(Subsidy), ಮತ್ತು ಯೋಜನೆಗಳಿಗೆ ಅರ್ಜಿ ಹಾಕುವಾಗ ಮೂಲ ದಾಖಲೆ ಆಗಿದ್ದು, ಯಾವುದೇ ತಪ್ಪು ಅಥವಾ ಮಾಹಿತಿಯ ಕೊರತೆ ಇದರಲ್ಲಿ ಇರುವುದರಿಂದ ಫಲಾನುಭವಿಗಳಿಗೆ ಅನೇಕ ಸಮಸ್ಯೆಗಳು ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ಸರಕಾರ ಪಡಿತರ ಚೀಟಿ ತಿದ್ದುಪಡಿ ಸೇವೆಗಳನ್ನು ಪುನಃ ತೆರೆಯಲಾಗಿದೆ.
ಈ ಬಾರಿ ತಿದ್ದುಪಡಿ ಪ್ರಕ್ರಿಯೆಯು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡದಿದ್ದರೂ, ಈಗಾಗಲೇ ಚೀಟಿ ಹೊಂದಿರುವವರು ತಮ್ಮ ಚೀಟಿಯಲ್ಲಿ ಹಲವು ಪ್ರಮುಖ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬಹುದು. ಇದರಲ್ಲಿ ಸದಸ್ಯರ ಸೇರ್ಪಡೆ, ಪೋಟೋ ಬದಲಾವಣೆ(Photo Change), ಹೆಸರು ತಿದ್ದುಪಡಿ, ನ್ಯಾಯಬೆಲೆ ಅಂಗಡಿ ನಂಬರ್ ಬದಲಾವಣೆ ಸೇರಿದಂತೆ ಹಲವು ಆಯ್ಕೆಗಳು ಲಭ್ಯವಿವೆ.
ತಿದ್ದುಪಡಿ ಸೇವೆ ಲಭ್ಯವಿರುವ ಕೇಂದ್ರಗಳು:
ಪಡಿತರ ಚೀಟಿ ತಿದ್ದುಪಡಿಗೆ ಈ ಕೆಳಕಂಡ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು,
ಕರ್ನಾಟಕ ಒನ್(Karnataka One)
ಗ್ರಾಮ ಒನ್(Village One)
ಬೆಂಗಳೂರು ಒನ್(Bangalore One)
ಸೈಬರ್ ಸೆಂಟರ್ಗಳು(Cyber Centers)
ತಿದ್ದುಪಡಿ ಮಾಡಿಸಬಹುದಾದ ವಿವರಗಳು:
ಸದಸ್ಯರ ಸೇರ್ಪಡೆ
ಪೋಟೋ ಬದಲಾವಣೆ
ಹೆಸರು ತೆಗೆದುಹಾಕುವಿಕೆ
ನ್ಯಾಯಬೆಲೆ ಅಂಗಡಿ ನಂಬರ್ ಬದಲಾವಣೆ
ಹೆಸರು ತಿದ್ದುಪಡಿ
ಕುಟುಂಬದ ಮುಖ್ಯಸ್ಥರ ಬದಲಾವಣೆ
ಸದಸ್ಯರ ಫೋಟೋ ಬದಲಾವಣೆ
ಅಗತ್ಯವಿರುವ ದಾಖಲೆಗಳು:
ಸಾಮಾನ್ಯ ತಿದ್ದುಪಡಿ ಸೇವೆಗಾಗಿ,
ಸದಸ್ಯರ ಆಧಾರ್ ಕಾರ್ಡ್(Adhar card) ಕಡ್ಡಾಯ.
6 ವರ್ಷ ಮೇಲ್ಪಟ್ಟ ಸದಸ್ಯರಿಗೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ(Caste and Income Certificate).
6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಜನನ ಪ್ರಮಾಣ ಪತ್ರ(Birth certificate).
ಪತ್ನಿ ಸೇರ್ಪಡೆಗೆ ವಿಶೇಷ ದಾಖಲೆಗಳು:
ಆಧಾರ್ ಕಾರ್ಡ್(Adhar card).
ವಿವಾಹ ಪ್ರಮಾಣ ಪತ್ರ.
ಪೋಷಕರ ಪಡಿತರ ಚೀಟಿ ಪ್ರತಿಲಿಪಿ.
ಮಗುವಿನ ಹೆಸರು ಸೇರ್ಪಡಿಸಲು ಮಗುವಿನ ಜನನ ಪ್ರಮಾಣ ಪತ್ರ ಕಡ್ಡಾಯ
ಪಡಿತರ ಚೀಟಿಯ ತಿದ್ದುಪಡಿ ಮಾಡಿಸಿಕೊಳ್ಳಲು ರಾಜ್ಯ ಸರ್ಕಾರ(State government) ನೀಡಿರುವ ಈ ಅವಕಾಶವು ಬಹುಮುಖ್ಯವಾದದ್ದು. ಇಂದಿನ ಡಿಜಿಟಲ್ ಯುಗದಲ್ಲಿ ಸರಿಯಾದ ದಾಖಲೆಗಳ ಅಗತ್ಯತೆ ಹೆಚ್ಚಾಗಿರುವುದರಿಂದ, ಈ ಅವಕಾಶವನ್ನು ಪ್ರಯೋಜನಪಡಿಸಿಕೊಳ್ಳುವುದು ಸೂಕ್ತ. 2025ರ ಜೂನ್ 30ರ ಒಳಗೆ ತಿದ್ದುಪಡಿ ಪ್ರಕ್ರಿಯೆ ಪೂರ್ಣಗೊಳಿಸಿ, ಸರಕಾರದ ಸೌಲಭ್ಯಗಳನ್ನು ನಿರಂತರವಾಗಿ ಪಡೆಯಿರಿ.
2025ರ ಜೂನ್ 30 ಅಂತಿಮ ದಿನಾಂಕವಾಗಿರುವುದರಿಂದ, ತಡಮಾಡದೆ ನಿಮ್ಮ ಪಡಿತರ ಚೀಟಿಗೆ ತಿದ್ದುಪಡಿ ಸಲ್ಲಿಸಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




