ಎಲ್ಲರಿಗೂ ನಮಸ್ಕಾರ. ಇಂದಿನ ಲೇಖನದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರ ಖಾತೆಗೆ ನೇರವಾಗಿ 2000 ರೂ ಸಹಾಯಧನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದರು. ಅಂತೆಯೇ ಈಗಾಗಲೇ 11 ಕಂತುಗಳಲ್ಲಿ ರೈತರು ಹಣವನ್ನು ಪಡೆದಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಇಲ್ಲಿಯವರೆಗೂ ರೈತರು ಇ-ಕೆವೈಸಿ ಮಾಡಿಸಿಲ್ಲ.ಈ ರೈತರು ಇ-ಕೆವೈಸಿ ಮಾಡಿಸದಿದ್ದರೆ ಅವರಿಗೆಲ್ಲಾ ಪಿಎಂ ಕಿಸಾನ್ ಸಮ್ಮಾನ ಯೋಜನೆಯಿಂದ ಬರುವ 2000 ರೂಪಾಯಿ ಇನ್ನು ಮುಂದೆ ಬರುವುದಿಲ್ಲ. ಅದಕ್ಕಾಗಿ ತಕ್ಷಣ ಇ-ಕೆವೈಸಿ ಮಾಡಿಸಿ ಎಂದು ಕೃಷಿ ಇಲಾಖೆ ಪ್ರಕಟಣಿಯಲ್ಲಿ ತಿಳಿಸಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರ ಖಾತೆಗೆ ನೇರವಾಗಿ 2000 ರೂ ಸಹಾಯಧನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದರು. ಅಂತೆಯೇ ಈಗಾಗಲೇ 11 ಕಂತುಗಳಲ್ಲಿ ರೈತರು ಹಣವನ್ನು ಪಡೆದಿದ್ದಾರೆ. 12ನೇ ಕಂತು October 17 ರಂದು ರೈತರ ಖಾತೆಗೆ ಜಮೆಯಾಗದೆ.
ಇನ್ನು ಮುಂದೆ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ಇ-ಕೆವೈಸಿ ವಹಿಸಿ ಮಾಡುವುದು ಅತ್ಯಂತ ಅವಶ್ಯಕವಾಗಿರುತ್ತದೆ. ಹಾಗೂ ಪ್ರತಿ ಫಲಾನುಭವಿ ರೈತನು ಇ-ಕೆವೈಸಿ ಮಾಡಿಸಬೇಕಾಗಿ ಇರುತ್ತದೆ. ಈ ಸಂಬಂಧ ಇ-ಕೆವೈಸಿ ಕುರಿತಾದ ಕೈಪಿಡಿಯನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊಸದಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಒನ್ ಸೇವಾ ಕೇಂದ್ರಗಳಲ್ಲಿಯೂ ಈ ಕೆವೈಸಿ ಮಾಡಲು ಅವಕಾಶ ಒದಗಿಸಿರುತ್ತಾರೆ. ಆದ್ದರಿಂದ ಪ್ರತಿ ಜಿಲ್ಲೆಯಲ್ಲಿ ಪಿಎಂ ಕಿಸಾನ್ ಯೋಜನೆಯಡಿ ಫಲಾನುಭವಿಯಾಗಿ ರೈತರು ಗ್ರಾಮ ಒನ್ ಕೇಂದ್ರಗಳಲ್ಲಿಯೂ ಸಹ ಇ-ಕೆವೈಸಿ ಮಾಡುವ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಲು ಕೃಷಿ ಇಲಾಖೆ ಸೂಚಿಸಿದೆ.
pm-kisan ಫಲಾನುಭವಿಗಳು pmkisan.gov.in ಗೆ ಭೇಟಿ ನೀಡಿ ಆಧಾರ್ ಸಂಖ್ಯೆ ಮೊಬೈಲ್ ಸಂಖ್ಯೆ ನಮೂದಿಸಬೇಕು. ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ ಉಚಿತವಾಗಿ ಇ-ಕೆವೈಸಿ ಮಾಡಬಹುದು ಮತ್ತು ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ಜೋಡಣೆಯಾಗದ ರೈತರು ಅಥವಾ ಓಟಿಪಿ ಸೃಜನೆಯಾಗದ ರೈತರು ಹತ್ತಿರದ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮಒನ್ ಸೇವಾ ಕೇಂದ್ರಗಳಲ್ಲಿ ಇ-ಕೆವೈಸಿ ಮಾಡಲು ಅವಕಾಶವಿರುತ್ತದೆ ಆದಕಾರಣ ಪ್ರತಿಯೊಬ್ಬ ರೈತರುಇ-ಕೆವೈಸಿ ಮಾಡಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.
ಪಿಎಂ ಕಿಸಾನ್ ಹಣ ಇದ್ದಕ್ಕಿದ್ದಂತೆ ಬರುವುದು ನಿಂತಿದ್ದರೆ, ಅದಕ್ಕೆ ಕಾರಣವನ್ನು ಹೀಗೆ ಚೆಕ್ ಮಾಡಿ
PMkisan.gov ಡಾಟ್ ಕಾಮ್
ನಂತರ “Farmers corner” ನಲ್ಲಿ “Beneficiary status” ಮೇಲೆ ಕ್ಲಿಕ್ ಮಾಡಿ
ನಂತರ “Mobile number” ಮೇಲೆ ಕ್ಲಿಕ್ ಮಾಡಿ,ಮೊಬೈಲ್ ನಂಬರನ್ನು ನಮೂದಿಸಿ
ನಂತರ Captcha Type ಮಾಡಿ “Get Data” ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಇಲ್ಲಿಯವರೆಗೂ ಬಂದಿರುವ ಮತ್ತು ಬರದೇ ಇರುವ ಕಂತಿನ ಕುರಿತ ಮಾಹಿತಿಯನ್ನು ನೋಡಬಹುದು.
ಅಥವಾ ಮೊಬೈಲ್ ನಂಬರ್ ಬದಲು “Farmer Registration” ನಂಬರ್ select ಮಾಡಿ Farmer Registration ನಂಬರ್ ಹಾಕಿ captcha type ಮಾಡಿ “Get Data” ಮೇಲೆ ಕ್ಲಿಕ್ ಮಾಡಿ ನಿಮ್ಮ ಮುಂದಿನ ಸ್ಥಿತಿಗತಿ ತಿಳಿಯಬಹುದು.
ಸೂಚನೆ:ನಿಮಗೆ ನಿಮ್ಮ Farmer Registration ನಂಬರ್ ಗೊತ್ತಿಲ್ಲ ಎಂದರೆ Cick here to know your registration ಮೇಲೆ click ಮಾಡಿ ನಿಮ್ಮ ಮೊಬೈಲ್ ನಂಬರ್ ಹಾಕಿದರೆ ನಿಮ್ಮ Farmer Registration ಸಿಗುತ್ತದೆ.
Farmer registration number ಬಳಸಿ ಕಾರಣವನ್ನು ತಿಳಿದುಕೊಳ್ಳಿ
ಕಾರಣ 1
“Installment payment stopped by state on request of district”ಎಂದು ತೋರಿಸುತ್ತಿದ್ದರೆ,ತಾಲೂಕಿನಲ್ಲಿ Revarification ಮಾಡಿಸಿ,ಜಂಟಿ ಕೃಷಿ ನಿರ್ದೇಶಕರ ಕಛೇರಿಗೆ ಕಳಿಸಿ ಸರಿಪಡಿಸಬೇಕು
ಕಾರಣ 2
“Adhar number is not varified”ಎಂದು ತೋರಿಸುತ್ತಿದ್ದರೆ ಜಂಟಿ ಕೃಷಿ ನಿರ್ದೇಶಕರ login ಮೂಲಕ authentication ಮಾಡಿಸಬೇಕು.
ಕಾರಣ 3
“NPCI is not mapped” ಎಂದು ತೋರಿಸುತ್ತಿದ್ದರೆ, ನಿಮ್ಮ ಆಧಾರ ನಂಬರ್ ಲಿಂಕ್ ಇರುವ ಬ್ಯಾಂಕ್ ಗೆ ಹೋಗಿ ಆಧಾರ ಜೋಡಣಿಯನ್ನು Delink ಮಾಡಿ ನಂತರ Relink ಮಾಡಿಸಬೇಕು
ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತ ಮಿತ್ರರೊಂದಿಗೆ ಶೇರ್ ಮಾಡಿ. ಧನ್ಯವಾದಗಳು.
ಹಾವೇರಿ,ಹಾಸನ,ಗದಗ,ಬೀದರ್ ಜಿಲ್ಲೆಯಲ್ಲಿ ಇಕೆವೈಸಿ ಬಾಕಿ ಇರುವ ಪಟ್ಟಿಯನ್ನು ಇಲ್ಲಿ ಅಪ್ಲೋಡ್ ಮಾಡಲಾಗಿದ್ದು, ನಿಮ್ಮ ಜಿಲ್ಲೆಯ ಪಟ್ಟಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




