ಪ್ರಧಾನಿ ಶ್ರೀ ನರೇಂದ್ರ ಮೋದಿ(Narendra Modi)ಯವರ ಆಸೆಯಂತೆ ಅಂತ್ಯೋದಯ ಸಾಧನೆಯ ಸಾಧನ ಪಿಎಂ ಸ್ವನಿಧಿ(PM SVANidhi) ಯಿಂದ ಪಿಎಂ ಸುರಕ್ಷ(PM PM SVANidhi) ಎಂಬ ಯೋಜನೆಯು ಜಾರಿಗೊಳ್ಳಲಿದೆ. ಇದು 290 ಪಟ್ಟಣ್ಣಗಳ ಸಣ್ಣ ಪುಟ್ಟ ಕೆಲಸ ಮತ್ತು ವ್ಯಾಪಾರ ಮಾಡುವವರಿಗೆ ಬಹಳ ಉಪಯುಕ್ತವಾಗಲಿದೆ. ಈ ಯೋಜನೆ ಯು ಕೇಂದ್ರ ಸರ್ಕಾರದ ಅಡಿಯಲ್ಲಿ ಜಾರಿಗೊಳ್ಳಲಿದೆ. ಮತ್ತು ಈ ಯೋಜನೆಯ ಅಡಿಯಲ್ಲಿ ಹಲವಾರು ರೀತಿಯ ಸೇವೆಗಳನ್ನು ನೋಡಬಹುದಾಗಿದೆ. ಏನಿದು ಅಂತ ತಿಳಿದುಕೊಳ್ಳಬೀಕೆ ಹಾಗಿದಲ್ಲಿ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಸನ್ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಆಸೆಯಂತೆ ಅಂತ್ಯೋದಯ ಸಾಧನೆಯ ಸಾಧನ “ಪಿ.ಎಂ. ಸ್ವನಿಧಿ ಯಿಂದ ಪಿ. ಎಂ. ಸುರಕ್ಷಾ”ಯೋಜನೆ ರಾಜ್ಯದ 290 ಪಟ್ಟಣಗಳಲ್ಲಿ ಇರುವ ಬೀದಿ ಬದಿ ವ್ಯಾಪಾರಿಗಳು, ತಳ್ಳುಗಾಡಿ ವ್ಯಾಪಾರಿಗಳು, ಸಿಹಿ ತಿನಿಸು, ಚಹಾ ಇತ್ಯಾದಿ ಸಣ್ಣಪುಟ್ಟ ವ್ಯಾಪಾರಗಳಲ್ಲಿ ತೊಡಗಿರಿವವರು, ಸೇವಾ ಕ್ಷೇತ್ರದಲ್ಲಿ ಅಸಂಘಟಿತ ವಲಯದಲ್ಲಿರುವ ಮನೆ ಮನೆಗೆ ದಿನಪತ್ರಿಕೆ ಹಾಕುವವರು, ಹಾಲು ಹಾಕುವವರು,ಬಾರ್ ಬೆಂಡಿಂಗ್ ಮಾಡುವವರು, ಹಳೆ ಕಬ್ಬಿಣ, ಪ್ಲಾಸ್ಟಿಕ್ ಪೇಪರ್ ಸಂಗ್ರಾಹಕರರು, ಚಪ್ಪಲಿ ರಿಪೇರಿ, ಬೆತ್ತ, ಬಿದರಿನ ವ್ಯಾಪಾರ ಮಾಡುವವರು, ದೋಬಿ ( ಇಸ್ತ್ರಿ) ಮಾಡುವವರು, ಸ್ಕೊಟರ್, ಸೈಕಲ್ ಪಂಚರ್ ಮಾಡುವವರು, ಎಳೆ ನೀರು ವ್ಯಾಪಾರ, ಮನೆ ಮನೆಗೆ ಊಟ ತಲುಪಿಸುವವರು, ಕ್ಯಾಟರಿಂಗ್ ವ್ಯವಸ್ಥೆ ಮಾಡುವವರು, ಮಡಿಕೆ, ಬೊಂಬೆ, ಕರಕುಶಲ ಕೆಲಸ ಮಾಡುವವರು ಹೀಗೆ ಸಣ್ಣಪುಟ್ಟ ಕೆಲಸ ಮಾಡುವವರು ಹೀಗೆ ಎಲ್ಲಾ ವ್ಯಾಪಾರ ಮಾಡುವವರಿಗೆ ಕೇಂದ್ರ ಸರ್ಕಾರದ ಯೋಜನೆ ಉಪಯೋಗವಾಗುತ್ತದೆ.
ಬಿ. ಬಿ. ಎಂ. ಪಿ /ಮಹಾನಗರ ಪಾಲಿಕೆ /ನಗರ ಪಾಲಿಕೆ /ನಗರ ಸಭೆ /ಪುರಸಭೆ /ಪಟ್ಟಣ ಪಂಚಾಯತಿಗಳಲ್ಲಿ ಅರ್ಜಿಗಳನ್ನು ಪಡೆದು ನೋಂದಾವಣಿ ಮಾಡಿ (ಎಲ್, ಓ, ಆರ್ ) ಲೆಟರ್ ಅಫ್ ರೇಖಮಂಡೆಷನ್ ಮೂಲಕ ಬ್ಯಾಂಕಿಗೆ ಕಳುಹಿಸುತ್ತಾರೆ. ಬ್ಯಾಂಕಿನಿಂದ ದೂರವಾಣಿ ಬಂದ ನಂತರ ಬ್ಯಾಂಕ್ ಸಂಪರ್ಕ ಮಾಡಬೇಕು.
ಈ ಸೌಲಭ್ಯಗಳ ಪ್ರಯೋಜನಗಳು :
ಮೊದಲ ಹಂತದಲ್ಲಿ 10,000/-, ಎರಡನೇ ಹಂತದಲ್ಲಿ 20,000/-, ಮೂರನೇ ಹಂತದಲ್ಲಿ ರೂ.50,000/-ಮತ್ತು ನಾಲ್ಕನೇ ಹಂತದಲ್ಲಿ ಮುದ್ರಾ ಯೋಜನೆಯಡಿ ರೂ.10.00 ಲಕ್ಷದವರೆಗೆ ಸಾಲ ನೀಡಲಾಗುವುದು.
ಯಾವುದೇ ಗ್ಯಾರಂಟಿ ಇಲ್ಲದೆ ಹಣ ಮಂಜೂರು ಮಾಡಲಾಗುತ್ತದೆ.
ಬಡ್ಡಿಯ ದರದಲ್ಲಿ ಶೇ.7ಹಣವನ್ನು ಕೇಂದ್ರ ಸರ್ಕಾರವೇ ಬ್ಯಾಂಕ್ ಗೆ ಭರಿಸುತ್ತದೆ.
ಡಿಜಿಟಲ್ ವ್ಯವಹಾರಕ್ಕೆ ಸಹಾಯವಾಗುವಂತೆ ಸೌಂಡ್ ಬಾಕ್ಸ್ ನೀಡಲಾಗುವುದು.
ಡಿಜಿಟಲ್ ವ್ಯವಹಾರ ಮಾಡಿದರೆ ಪ್ರತಿ ತಿಂಗಳು ರೂ.100/-ಉತ್ತೇಜನ ಹಣ ನೀಡಲಾಗುತ್ತದೆ.
ಬ್ಯಾಂಕ್ ಕ್ಯೂ. ಆರ್ ಕೋಡ್ ಜೊತೆ ಸ್ಟ್ಯಾಂಡಗಳನ್ನು ನೀಡುತ್ತಾರೆ.
ಪಿ. ಎಂ. ಸ್ವನಿಧಿ ಫಲಾನುಭವುಗಳು ಪಿ. ಎಂ. ಸುರಕ್ಷಾ ಭೀಮಾ ಯೋಜನೆ ಅಡಿಯಲ್ಲಿ ರೂ.20/-ವಾರ್ಷಿಕ ಚಂದಾಕ್ಕೆ 2.00ಲಕ್ಷ ಅಪಘಾತ ಮರಣಕ್ಕೆ 1 ಲಕ್ಷ ಅಪಘಾತದಿಂದಾದ ಅಂಗವಿಕಲತೆಗೆ ನೀಡಲಾಗುತ್ತದೆ.
ಪಿಎಂ ಸ್ವನಿಧಿ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ
https://pmsvanidhi.mohua.gov.in/
ಪಿ. ಎಂ. ಜನ್ ಧನ್ -ಖಾತೆಯನ್ನು (0) ಶೂನ್ಯ ದರದಲ್ಲಿ ಬ್ಯಾಂಕ್ ಖಾತೆ ತೆರೆಯಲಾಗುವುದು.
ಪಿ. ಎಂ. ಸುರಕ್ಷಾ ಜೀವನ ಜ್ಯೋತಿ ಯೋಜನೆ ರೂ.330/-ವಾರ್ಷಿಕ ಚಂದಾಕ್ಕೆ ರೂ.2.00 ಲಕ್ಷ ಸಾಧಾರಣ ಸಾವಿಗೆ ನೀಡಲಾಗುವುದು. (ಯಾವುದೇ ವೈದ್ಯಕೀಯ ದಾಖಲೆ ಅವಶ್ಯಕತೆ ಇರುವುದಿಲ್ಲ )
ಪಿ.ಎಂ ಜನನಿ ಸುರಕ್ಷಾ ಯೋಜನೆಯಡಿ – ಬಿಪಿಎಲ್ ಮಹಿಳೆಯರಿಗೆ ಮಕ್ಕಳ ಜನನದ ನಂತರ ಪಾಲನೆಗೆ ರೂ.6000 ( 2 ಮಕ್ಕಳಿಗೆ ಮಾತ್ರ ) ನೀಡಲಾಗುತ್ತದೆ.
ಪಿ.ಎಂ ಮಾತೃವಂದನಾ ಯೋಜನೆಯಡಿ – ಗರ್ಭಿಣಿ ಸ್ತ್ರೀಯರ ಪಾಲನೆಗೆ ರೂ. 5000 ನೀಡಲಾಗುವುದು.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಪಿಎಂ ಶ್ರಮಯೋಗಿ ಮನ್ ಧನ್ ಯೋಜನೆಯಡಿ 60 ವಯಸ್ಸಿನ ನಂತರ ರೂ. 3000 ಪಿಂಚಣಿ ನೀಡುವ ಯೋಜನೆಯಾಗಿದೆ. 18 ರಿಂದ 45 ವಯಸ್ಸಿನವರು ರೂ. 55 ರಿಂದ ವಯೋಮಿತಿ ಆಧಾರದ ಮೇಲೆ ಮಾಸಿಕ ವಂತಿಗೆ ನೀಡಬೇಕು. ಕೆಂದ್ರ ಸರ್ಕಾರ ಕೂಡ ಅಷ್ಟೇ ಮಾಸಿಕ ವಂತಿಕೆಯನ್ನು ಪಾವತಿಸುತ್ತದೆ.
“ಒಂದು ದೇಶ -ಒಂದು ರೇಷನ್ ಕಾರ್ಡ್ “ದೇಶದ ಯಾವುದೇ ರಾಜ್ಯದಲ್ಲಿ ವಲಸೆ ಹೋಗುವ ವ್ಯಕ್ತಿಗಳಿಗೆ ಉಪಯೋಗವಾಗುವಂತೆ ಈ ಸೌಲಭ್ಯವನ್ನು ನೀಡಲಾಗುವುದು.
ಪಿ. ಎಂ. ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ನೋಂದಾವಣೆ -ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿ ಕಾರ್ಡ್ ನೀಡುತ್ತಾರೆ. ಹಲವಾರು ಸೌಲಭ್ಯಗಳು ದೊರೆಯುತ್ತವೆ.
ನಮ್ಮ ನಗರ ಬಿಬಿಎಂಪಿ /ಮಹಾನಗರ ಪಾಲಿಕೆ /ನಗರ ಪಾಲಿಕೆ /ನಗರ ಸಭೆ /ಪುರಸಭೆ /ಪಟ್ಟಣ ಪಂಚಾಯಿತಿ ಕಛೇರಿಯಲ್ಲಿ ಏನ್. ಯು. ಎಲ್. ಎಂ. (Nulm )ಅಧಿಕಾರಿಗಳನ್ನು ಸಂಪರ್ಕಿಸುವುದು.
ಅರ್ಜಿಯನ್ನು ಸಲ್ಲಿಸುವ ವಿಧಾನ ಹಾಗೂ ಬೇಕಾದ ದಾಖಲೆಗಳು :
ಆನ್ಲೈನ್ ನಲ್ಲಿ ನಿಮ್ಮ ಮೊಬೈಲ್ ನಿಂದಲೂ ಅರ್ಜಿಯನ್ನು ಸಲ್ಲಿಸುವುದು.
ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಚುನಾವಣಾ ಗುರುತಿನ ಚೀಟಿ,2-ಪೋಟೋ
“ಸೆಪ್ಟೆಂಬರ್ 16 ರಿಂದ ಅಕ್ಟೊಬರ್ 15ರ ವರೆಗೆ ಪಿ. ಎಂ. ಸ್ವನಿಧಿ ಮಾಸದಲ್ಲಿ “ಪಾಲ್ಗೊಳ್ಳಿ ಹಾಗೂ ಯೋಜನೆ ಪಡೆಯಿರಿ. ನೆಚ್ಚಿನ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಸಂದರ್ಭದಲ್ಲಿ ನಾವು ಬಡವರ ಸಹಾಯಕ್ಕೆ ಯೋಜನೆಗಳ ಅನುಷ್ಠಾನದ ಮೂಲಕವಾಗಿ ಕೊಡುಗೆಯನ್ನು ಕೊಡೋಣ.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ