ಬೆಂಗಳೂರು: ರೈತರಿಗೆ ಹಗಲು ಹೊತ್ತಿನಲ್ಲಿ ಕರೆಂಟ್ ಸಿಗುತ್ತಿಲ್ಲವೇ? ರಾತ್ರಿ ಪೂರ್ತಿ ಜಮೀನಿನಲ್ಲಿ ನಿದ್ದೆಗೆಟ್ಟು ನೀರು ಹಾಯಿಸಬೇಕೇ? ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರವೇ ‘ಪಿಎಂ ಕುಸುಮ್-ಬಿ’ (PM KUSUM-B) ಯೋಜನೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ರೈತರಿಗೆ ಶೇ.80 ರಷ್ಟು ಸಬ್ಸಿಡಿಯಲ್ಲಿ ಸೋಲಾರ್ ಪಂಪ್ಸೆಟ್ಗಳನ್ನು ನೀಡಲಾಗುತ್ತಿದೆ. ಆದರೆ ಅರ್ಜಿ ಹಾಕುವಾಗ ‘ವೆಂಡರ್ ಆಯ್ಕೆ’ (Vendor Selection) ಮಾಡುವುದು ಹೇಗೆ ಎಂಬ ಗೊಂದಲ ಹಲವರಿಗಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಅಷ್ಟೇ ಅಲ್ಲದೆ ಹಲವಾರು ಜನರು ಫೇಕ್ ವೆಬ್ ಸೈಟ್ ಮೂಲಕ ಮೋಸ ಹೋಗುತ್ತಿದ್ದಾರೆ, ಮತ್ತು ಈ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದ ಅಡಿಯಲ್ಲಿ ಬರುತ್ತೆ, ಹಾಗಾಗಿ ಈ ಯೋಜನೆ ಬಗ್ಗೆ ಯಾವುದೇ ಅನುಮಾನ ಬೇಡ, ಹೌದು 80% ಸರ್ಕಾರದ ಸಹಾಯಧನ ಸಿಗುತ್ತೆ, ಇನ್ನುಳಿದ 20 ಪರ್ಸೆಂಟ್ ನೀವು ನೇರವಾಗಿ ಸರ್ಕಾರಕ್ಕೆ ಪಾವತಿಸಬೇಕು ಬೇರೆ ಯಾವುದೇ ವ್ಯಕ್ತಿಯ ಹತ್ತಿರ ಕೊಡುವುದು ಬೇಕಾಗಿಲ್ಲ, 20 ಪರ್ಸೆಂಟ್ ಹಣದ ಪಾವತಿ ನೇರವಾಗಿ ಆನ್ಲೈನ್ ಮೂಲಕವೇ ಇರುತ್ತೆ. ಹಾಗಾಗಿ ಈ ಯೋಜನೆಗೆ ನೀವು ಧೈರ್ಯವಾಗಿ ಅರ್ಜಿ ಸಲ್ಲಿಸಬಹುದು, ಈ ಕುರಿತು ಸಂಪೂರ್ಣವಾದ ಹಂತ ಹಂತದ ಮಾಹಿತಿ ಕೆಳಗೆ ನಾವು ಕೊಟ್ಟಿದ್ದೇನೆ, ತಪ್ಪದೇ ಅಂಕಣವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ.
ಸಬ್ಸಿಡಿ ಲೆಕ್ಕಾಚಾರ (Subsidy Break-up)
ಸರ್ಕಾರವು ರೈತರಿಗೆ ದೊಡ್ಡ ಮಟ್ಟದ ಆರ್ಥಿಕ ನೆರವು ನೀಡುತ್ತಿದೆ. ಉದಾಹರಣೆಗೆ ಒಂದು ಪಂಪ್ಸೆಟ್ ಬೆಲೆ ₹2 ಲಕ್ಷ ಇದ್ದರೆ:
- ಕೇಂದ್ರ ಸರ್ಕಾರ: 30%
- ರಾಜ್ಯ ಸರ್ಕಾರ: 50%
- ರೈತರ ಪಾಲು: ಕೇವಲ 20% (ಅಂದಾಜು ₹40,000 – ₹50,000) ಕಟ್ಟಿದರೆ ಸಾಕು.
ವೆಂಡರ್ ಆಯ್ಕೆ (Referral/Vendor Selection) – ಬಹಳ ಮುಖ್ಯ!
ಅರ್ಜಿ ಸಲ್ಲಿಸುವಾಗ ‘Vendor Selection’ ಎಂಬ ಆಯ್ಕೆ ಬರುತ್ತದೆ. ಇಲ್ಲಿ ನೀವು ಎಚ್ಚರಿಕೆಯಿಂದ ಕಂಪನಿಯನ್ನು ಆರಿಸಬೇಕು.
- ಏನಿದು ವೆಂಡರ್?: ಸರ್ಕಾರವು ಟಾಟಾ ಸೋಲಾರ್ (Tata Power), ಶಕ್ತಿ ಪಂಪ್ಸ್ (Shakti Pumps) ನಂತಹ ಪ್ರತಿಷ್ಠಿತ ಕಂಪನಿಗಳಿಗೆ ಗುತ್ತಿಗೆ ನೀಡಿದೆ.
- ನಮ್ಮ ಆಯ್ಕೆ: ನಿಮ್ಮ ಏರಿಯಾದಲ್ಲಿ ಯಾವ ಕಂಪನಿಯ ಸರ್ವಿಸ್ ಚೆನ್ನಾಗಿದೆ ಎಂದು ವಿಚಾರಿಸಿ, ಆ ಕಂಪನಿಯನ್ನೇ ನೀವು ಆರಿಸಿಕೊಳ್ಳಬಹುದು.
- ಎಚ್ಚರಿಕೆ: ಇಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಅಥವಾ ದಲ್ಲಾಳಿಗಳಿಗೆ (Referral Agents) ಹಣ ಕೊಡುವ ಅವಶ್ಯಕತೆ ಇಲ್ಲ. ನೀವೇ ನೇರವಾಗಿ ಪೋರ್ಟಲ್ನಲ್ಲಿ ಕಂಪನಿ ಸೆಲೆಕ್ಟ್ ಮಾಡಿ.
ಯಾವೆಲ್ಲಾ ಕಂಪನಿಗಳು ಲಭ್ಯವಿವೆ? (Empanelled Agencies)
ಸೌರಮಿತ್ರ ಪೋರ್ಟಲ್ನಲ್ಲಿ ಈ ಕೆಳಗಿನ ಪ್ರಮುಖ ಕಂಪನಿಗಳು ಲಿಸ್ಟ್ ಆಗಿವೆ:
- Tata Power Solar Systems Ltd.
- Shakti Pumps (India) Ltd.
- CRI Pumps Pvt Ltd.
- Rotomag Motors and Controls.
- Premier Energies Limited. (ಗಮನಿಸಿ: ಲಿಸ್ಟ್ ಜಿಲ್ಲೆಯಿಂದ ಜಿಲ್ಲೆಗೆ ಬದಲಾಗಬಹುದು).
ಎಷ್ಟು ಸಾಮರ್ಥ್ಯದ ಪಂಪ್ ಸಿಗುತ್ತೆ?
ರೈತರಿಗೆ ಗರಿಷ್ಠ 7.5 HP (ಹಾರ್ಸ್ ಪವರ್) ಸಾಮರ್ಥ್ಯದವರೆಗಿನ ಸ್ವತಂತ್ರ ಸೌರ ಕೃಷಿ ಪಂಪ್ಗಳನ್ನು ನೀಡಲಾಗುತ್ತದೆ. ಗ್ರಿಡ್ ಸಂಪರ್ಕವಿಲ್ಲದ ಪ್ರದೇಶದ ರೈತರಿಗೆ ಇದು ವರದಾನವಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ? (Step-by-Step Process)
ಅರ್ಜಿ ಸಲ್ಲಿಸಲು ನೀವು ಕಚೇರಿಗಳಿಗೆ ಅಲೆಯಬೇಕಿಲ್ಲ. ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಅರ್ಜಿ ಹಾಕಬಹುದು:
- ನೋಂದಣಿ: ಅಧಿಕೃತ ವೆಬ್ಸೈಟ್ souramitra.com ಗೆ ಭೇಟಿ ನೀಡಿ, ಆಧಾರ್ ಮತ್ತು ಮೊಬೈಲ್ ನಂಬರ್ ಹಾಕಿ ರಿಜಿಸ್ಟರ್ ಆಗಿ.
ಸೋಲಾರ್ ಪಂಪ್ಸೆಟ್ಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ:
☀️ ಸೌರಮಿತ್ರ ಲಿಂಕ್ (Apply Online)- ದಾಖಲೆ ಅಪ್ಲೋಡ್: ಜಮೀನಿನ ಪಹಣಿ (RTC), ಆಧಾರ್ ಕಾರ್ಡ್, ಫೋಟೋ ಅಪ್ಲೋಡ್ ಮಾಡಿ.
- ವೆಂಡರ್ ಆಯ್ಕೆ: ಲಿಸ್ಟ್ನಲ್ಲಿರುವ ನಿಮಗೆ ಇಷ್ಟವಾದ ಕಂಪನಿಯನ್ನು (Vendor) ಆಯ್ಕೆ ಮಾಡಿ.
- ಹಣ ಪಾವತಿ: ನಿಮ್ಮ ಪಾಲಿನ 20% ಹಣವನ್ನು ಆನ್ಲೈನ್ ಮೂಲಕ ಅಥವಾ ಚಲನ್ ಮೂಲಕ ಪಾವತಿಸಿ.
- ಅಳವಡಿಕೆ: ಹಣ ಕಟ್ಟಿದ 90 ದಿನಗಳ ಒಳಗೆ ಕಂಪನಿಯವರು ಬಂದು ನಿಮ್ಮ ಜಮೀನಿನಲ್ಲಿ ಸೋಲಾರ್ ಪಂಪ್ ಫಿಟ್ ಮಾಡಿಕೊಡುತ್ತಾರೆ.
ಅರ್ಜಿ ಸಲ್ಲಿಸುವ ವಿಧಾನದ ಕೈಪಿಡಿ (PDF) ಓದಲು ಇಲ್ಲಿ ಕ್ಲಿಕ್ ಮಾಡಿ:
📄 ಕೈಪಿಡಿ ಡೌನ್ಲೋಡ್ ಮಾಡಿ (User Manual)
ಅರ್ಜಿ ಸಲ್ಲಿಸುವ ಲೈವ್ ವಿಡಿಯೋ ಕೆಳಗೆ ನೋಡಿ👇
ಸಹಾಯವಾಣಿ ಸಂಖ್ಯೆಗಳು:
KREDL ಹೆಲ್ಪ್ಲೈನ್: 080-22202100 / 8095132100
CESC ಸಹಾಯವಾಣಿ: 9449598669
ಹೆಚ್ಚುವರಿ ಸಹಾಯಕ್ಕಾಗಿ ಹತ್ತಿರದ ವಿದ್ಯುತ್ ವಿತರಣಾ ಕಚೇರಿಯನ್ನು ಸಂಪರ್ಕಿಸಬಹುದು.
ಬೇಕಾಗುವ ದಾಖಲೆಗಳು (Documents Checklist)
- ಆಧಾರ್ ಕಾರ್ಡ್ (ಮೊಬೈಲ್ ನಂಬರ್ ಲಿಂಕ್ ಆಗಿರಬೇಕು).
- ಇತ್ತೀಚಿನ ಪಹಣಿ (RTC).
- ಬ್ಯಾಂಕ್ ಪಾಸ್ ಬುಕ್.
- ಪಾಸ್ಪೋರ್ಟ್ ಅಳತೆಯ ಫೋಟೋ.
- ಸ್ವಯಂ ಘೋಷಣೆ ಪತ್ರ (Self Declaration).
ಪ್ರಮುಖ ಎಚ್ಚರಿಕೆ (Warning): ಈ ಯೋಜನೆ ಡಿಸೆಂಬರ್ ಅಂತ್ಯದೊಳಗೆ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ತಕ್ಷಣವೇ ಅರ್ಜಿ ಸಲ್ಲಿಸಿ. ಯಾವುದೇ ಕಾರಣಕ್ಕೂ ಅಪರಿಚಿತರಿಗೆ OTP ಶೇರ್ ಮಾಡಬೇಡಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

“Lingaraj is the Editor-in-Chief at NeedsOfPublic.in, where he leads the editorial strategy and content integrity team. With a unique academic background combining Technology (BCA, MCA) and Media (MA in Journalism), Lingaraj brings a data-driven approach to news reporting. Over his 7-year career in digital media, he has specialized in bridging the gap between complex government digital infrastructures and public understanding.
As Editor-in-Chief, Lingaraj oversees all fact-checking processes to ensure that every article meets high journalistic standards. He is passionate about using his technical expertise to combat misinformation in the digital space.”
Connect with Lingaraj:


WhatsApp Group




