ಅಣಬೆ ಕೃಷಿ (Mushroom Farming) ದಿನದಿಂದ ದಿನಕ್ಕೆ ಹೆಚ್ಚು ಬೇಡಿಕೆಯನ್ನು ಹೊಂದುತ್ತಿರುವ ಬೆಳೆಯಾಗಿದೆ. ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದಲ್ಲಿ ಅಣಬೆಯ (Mushroom) ಬೇಡಿಕೆ ತೀವ್ರವಾಗಿ ಏರಿಕೆಯಾಗಿರುವ ಕಾರಣ, ತೋಟಗಾರಿಕೆ ಇಲಾಖೆ ಶೇ. 50 ಸಬ್ಸಿಡಿ ಯೋಜನೆಯನ್ನು(50% Subsidy scheme) ರೈತರಿಗೆ ಪ್ರಾರಂಭಿಸಿದೆ. ಈ ಯೋಜನೆಯಡಿ ಅಣಬೆ ಕೃಷಿಕರು ಶೆಡ್ ನಿರ್ಮಾಣ (shead Construction) ಅಥವಾ ಹಾಲಿ ಖಾಲಿ ಕಟ್ಟಡಗಳನ್ನು ಕೃಷಿ ಉದ್ದೇಶಕ್ಕೆ ಬಳಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ.
ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯೋಜನೆಯ ವೈಶಿಷ್ಟ್ಯಗಳು:
ಅಣಬೆ ಕೃಷಿಯ ಅನುಕೂಲಕ್ಕಾಗಿ ಶೆಡ್ ನಿರ್ಮಾಣಕ್ಕೆ 10 ಲಕ್ಷ ರೂ. ವೆಚ್ಚ ಮಂಜೂರು (Allowance of expenditure) ಮಾಡಲಾಗಿದೆ, ಅದರಲ್ಲಿ 5 ಲಕ್ಷ ರೂ. ಸಬ್ಸಿಡಿ ರೂಪದಲ್ಲಿ ಲಭ್ಯವಿರುತ್ತದೆ. ಹಳೆಯ ಕಟ್ಟಡಗಳನ್ನು ಅಥವಾ ನಿರ್ಜೀವ ಶೆಡ್ಗಳನ್ನು ಸರಿಯಾದ ರೀತಿಯಲ್ಲಿ ವಿನ್ಯಾಸಗೊಳಿಸಿ ಕೃಷಿ ಪ್ರಾರಂಭಿಸಬಹುದು.
ಅನುಮೋದನೆ ಪ್ರಕ್ರಿಯೆ :
ಕೃಷಿಕರು ತಮ್ಮ ಯೋಜನೆಯ ಸವಿವರ ಪ್ಲಾನ್ (Detailed plan) ತೋಟಗಾರಿಕೆ ಇಲಾಖೆಗೆ ಸಲ್ಲಿಸಬೇಕು.
ಅಧಿಕಾರಿಗಳ ಪರಿಶೀಲನೆ ನಂತರವೇ ಅನುಮೋದನೆ ದೊರೆಯುತ್ತದೆ.
ಅಗತ್ಯ ಶ್ರೇಣಿಯ ಕಟ್ಟಡಗಳು :
ಕೃಷಿಗೆ ಪೂರ್ವಭಾವಿಯಾಗಿ ವಿದ್ಯುಚ್ಛಕ್ತಿ, ನೀರಿನ ವ್ಯವಸ್ಥೆ, ತಯಾರಿಕಾ ಘಟಕ, ಬೀಜ ಬಿತ್ತನೆ ಕೊಠಡಿ, ಬೆಳೆ ಉತ್ಪಾದನಾ ಕೋಣೆ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಬೇಕು.
ಪ್ರಾರಂಭದ ಹಂತ :
ಮೊದಲ ಹಂತದ ಖರ್ಚು ಕೃಷಿಕರ ಪಾಲಿನಲ್ಲಿ, ನಂತರ ಸರಕಾರದಿಂದ ಸಬ್ಸಿಡಿ ಮಂಜೂರು.
ಅನುದಾನದ ಪ್ರಯೋಜನಗಳು :
ಅಣಬೆ ಘಟಕ ಮತ್ತು ಎರೆ ಹುಳು ಗೊಬ್ಬರ ಘಟಕಗಳಿಗೂ ಅನುದಾನ ಲಭ್ಯವಿದೆ.
ಯೋಜನೆ ಮೂಲಕ ರೈತರು ಹೊಸ ಶೆಡ್ ನಿರ್ಮಿಸಲು ಅಥವಾ ಹಳೆಯ ಕಟ್ಟಡ ಬಳಸಲು ಸಹಾಯಧನ ಪಡೆಯಬಹುದು.
ಸಮಗ್ರ ಅಭಿವೃದ್ಧಿ ಮಿಷನ್ (MIDH) ಅಡಿಯಲ್ಲಿ ಕೇಂದ್ರ ಸರ್ಕಾರದ ಬೆಂಬಲ ದೊರೆಯುತ್ತದೆ.
ಅರ್ಜಿ ಪ್ರಕ್ರಿಯೆ ಮತ್ತು ದಸ್ತಾವೇಜುಗಳು:
ಅನುಮೋದನೆ ಪಡೆಯಲು ಈ ಮುಖ್ಯ ದಾಖಲೆಗಳು ಅಗತ್ಯ:
ಬಾಕಿ ಬಿಲ್ ಮತ್ತು ಪ್ರಮಾಣಪತ್ರ
ಬ್ಯಾಂಕ್ ಮಂಜೂರಾತಿ ಪತ್ರ
ಹಕ್ಕುಪತ್ರದ ನಕಲು
ಬ್ಯಾಂಕ್ ಖಾತೆಯ ವಿವರ
ಇತ್ತೀಚಿನ ಫೋಟೋ
ಆಧಾರ್ ಕಾರ್ಡ್
ಸಹಾಯವಾಣಿ ಮತ್ತು ಅರ್ಜಿ ಮಾರ್ಗದರ್ಶನ:
ಅರ್ಜಿ ಸಲ್ಲಿಸಲು ಮುಖ್ಯ ವೆಬ್ಸೈಟ್(Official Website ) : https://nhb.gov.in
ನೀಡಿರುವ ನೆರವು:
ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ಅಣಬೆ ಕೃಷಿ ಅಭಿವೃದ್ಧಿಗೆ ಈ ಯೋಜನೆ ಅತ್ಯುತ್ತಮ ಅವಕಾಶವಾಗಿದೆ. ಈ ಯೋಜನೆಯ ಮೂಲಕ ರೈತರು ಅಣಬೆ ಕೃಷಿಯಿಂದ ಆದಾಯ ಹೆಚ್ಚಿಸಲು ಮತ್ತು ದೇಶೀಯ ಬೇಡಿಕೆಯನ್ನು ಪೂರೈಸಲು ಶಕ್ತಿ ಪಡೆಯಬಹುದು.ಬೆಳೆ ಬೆಳೆಯಲು ಆಸಕ್ತಿ ಇರುವ ರೈತರು ಈ ಸಬ್ಸಿಡಿಯನ್ನು ಬಳಸಿಕೊಂಡು ಉತ್ತಮ ಆದಾಯವನ್ನು ಸಾಧಿಸಬಹುದು.ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




