ರಾಜ್ಯದಲ್ಲಿ ನಾಳೆ ಮೇ. 21 ಮಧ್ಯ ಮಾರಾಟ ಬಂದ್..! ಮುಂದುವರೆಯುವ ಸಾಧ್ಯತೆ

WhatsApp Image 2025 05 20 at 10.07.04 AM

WhatsApp Group Telegram Group

ಕರ್ನಾಟಕದಲ್ಲಿ ಮದ್ಯದ ಬೆಲೆ ನಿರಂತರವಾಗಿ ಏರುತ್ತಿದ್ದು, ರಾಜ್ಯದಲ್ಲಿ ಮದ್ಯದ ದರ ದುಬಾರಿಯಾಗುತ್ತಿದೆ. ಇದರ ಜೊತೆಗೆ, ವೈನ್ ಶಾಪ್ಗಳು ಮತ್ತು ಅಬಕಾರಿ ಲೈಸೆನ್ಸ್ಗಳ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ನಡುವೆ, ಕಳೆದ ಎರಡು ವರ್ಷಗಳಿಂದ ಮದ್ಯದ ಬೆಲೆ ಮತ್ತು ಲೈಸೆನ್ಸ್ ಶುಲ್ಕ ಏರಿಕೆಗೆ ವಿರೋಧವಾಗಿ ಮದ್ಯ ಮಾರಾಟಗಾರರು ಮೇ 21ರಂದು ರಾಜ್ಯಾದ್ಯಂತ ಮದ್ಯ ಮಾರಾಟದ ಬಂದ್ ಘೋಷಿಸಿದ್ದಾರೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮೇ 21ರಂದು ಮದ್ಯ ಲಭ್ಯವಾಗುವುದಿಲ್ಲ

ಮಾರಾಟಗಾರರು ಮೇ 20ರಿಂದ ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟನೆ ಆರಂಭಿಸಲಿದ್ದು, ಮೇ 21ರಂದು ಸಂಪೂರ್ಣ ಮಾರಾಟವನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ. ಕರ್ನಾಟಕ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್, ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಮತ್ತು ಕರ್ನಾಟಕ ಬ್ರೂವರೀಸ್ ಅಂಡ್ ಡಿಸ್ಟಿಲರೀಸ್ ಅಸೋಸಿಯೇಷನ್ ಸೇರಿದಂತೆ ಹಲವು ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ನೀಡಿವೆ. ಇದರಿಂದಾಗಿ, ಪ್ರತಿಭಟನೆ ತೀವ್ರ ಸ್ವರೂಪ ತಾಳುವ ಸಾಧ್ಯತೆ ಇದೆ.

ಲೈಸೆನ್ಸ್ ಶುಲ್ಕ 90 ಲಕ್ಷಕ್ಕೆ ಏರಿಕೆ – ಉದ್ಯಮಿಗಳ ಮೇಲೆ ಒತ್ತಡ

ಮದ್ಯದ ಬೆಲೆ ಏರಿಕೆಯ ಜೊತೆಗೆ, ಸರ್ಕಾರವು ಲೈಸೆನ್ಸ್ ಶುಲ್ಕವನ್ನು ದುಪ್ಪಟ್ಟಿಗೆ ಹೆಚ್ಚಿಸುವ ಕರಡು ಅಧಿಸೂಚನೆ ಹೊರಡಿಸಿದೆ. ಬ್ರೂವರಿಗಳ ವಾರ್ಷಿಕ ಲೈಸೆನ್ಸ್ ಶುಲ್ಕ 27 ಲಕ್ಷದಿಂದ 54 ಲಕ್ಷಕ್ಕೆ ಮತ್ತು ಡಿಸ್ಟಿಲರಿಗಳು ಮತ್ತು ವೇರ್ಹೌಸ್ಗಳ ಶುಲ್ಕ 45 ಲಕ್ಷದಿಂದ 90 ಲಕ್ಷಕ್ಕೆ ಏರಿಕೆಯಾಗಲಿದೆ. ಈ ಹೊಸ ದರಗಳು ಜುಲೈ 1ರಿಂದ ಜಾರಿಗೆ ಬರಲಿವೆ. ಇದರ ವಿರುದ್ಧ ಮದ್ಯ ವ್ಯಾಪಾರಿಗಳು ಪ್ರತಿಭಟಿಸುತ್ತಿದ್ದಾರೆ.

ಬೆಲೆ ಏರಿಕೆಯಿಂದ ಮಾರಾಟದಲ್ಲಿ ಕುಸಿತ

ಕಳೆದ ಒಂದು ವರ್ಷದಲ್ಲಿ ಮದ್ಯದ ಬೆಲೆ ಹೆಚ್ಚಾಗಿದ್ದು, ಇದರಿಂದಾಗಿ ಮಾರಾಟದಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ ಎಂದು ವ್ಯಾಪಾರಿಗಳು ದೂರುತ್ತಿದ್ದಾರೆ. ಮಾರಾಟ ಕುಳಿತುಹೋಗಿದ್ದರಿಂದ, ಅದಾಯವೂ ಕಡಿಮೆಯಾಗಿದೆ. ಇದರ ಜೊತೆಗೆ ಲೈಸೆನ್ಸ್ ಶುಲ್ಕ ಏರಿಕೆಯಿಂದಾಗಿ ವ್ಯಾಪಾರಿಗಳ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಇದಕ್ಕೆ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ ಎಂದು ಅವರು ಹೇಳುತ್ತಿದ್ದಾರೆ.

ಪಬ್‌ಗಳ ಮೇಲೆ ಪರಿಣಾಮ – 40ಕ್ಕೂ ಹೆಚ್ಚು ಸ್ಥಳಗಳು ಮುಚ್ಚಿವೆ

ಶುಲ್ಕ ಏರಿಕೆಯ ಪರಿಣಾಮವಾಗಿ, ಬೆಂಗಳೂರಿನ 40ಕ್ಕೂ ಹೆಚ್ಚು ಪಬ್‌ಗಳು ಕಳೆದ ವರ್ಷ ಮುಚ್ಚಿವೆ. ಹೀಗೆ ಮುಂದುವರೆದರೆ, ರಾಜ್ಯದಾದ್ಯಂತ ಬಾರ್‌ಗಳು ಮತ್ತು ಪಬ್‌ಗಳು ನಡೆಸುವುದು ಕಷ್ಟವಾಗುತ್ತದೆ. ಇದರಿಂದ ಸಾವಿರಾರು ಉದ್ಯೋಗಿಗಳ ಉದ್ಯೋಗಕ್ಕೆ ಅಪಾಯವಾಗಬಹುದು. ಆದ್ದರಿಂದ, ಸರ್ಕಾರವು ಲೈಸೆನ್ಸ್ ಶುಲ್ಕ ಏರಿಕೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ಮದ್ಯದ ಬೆಲೆ ಹೆಚ್ಚಿಸದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಬೇಡಿಕೆ ಸಾರುತ್ತಿದ್ದಾರೆ.

ಹೆಚ್ಚು ಮಾಹಿತಿಗಾಗಿ ನೀವು ನಿಮ್ಮ ಹತ್ತಿರದ ವೃತ್ತಿಪರ ತರಬೇತಿ ಕೇಂದ್ರಗಳು ಅಥವಾ ಸರ್ಕಾರಿ ಮಾನ್ಯತಾ ಸಂಸ್ಥೆಗಳಿಗೆ ಭೇಟಿ ನೀಡಬಹುದು. ಮತ್ತು ಇಂತಹ ಉತ್ತಮವಾದ  ಮಾಹಿತಿಯನ್ನು ನೀವು ತಿಳಿದಮೇಲೆ  ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!