ಕರ್ನಾಟಕದಲ್ಲಿ ಗ್ರಾಮ ಲೆಕ್ಕಾಧಿಕಾರಿ(Village Accountant), ಸರ್ವೇಯರ್(Surveyor) ಹಾಗೂ ಎಡಿಎಲ್ಆರ್ (ADLR) ಹುದ್ದೆಗಳ ಭರ್ತಿಗೆ ಭರವಸೆ. ಈ ಹುದ್ದೆಗಳಿಗೆ ಸೇರಿದಂತೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸರ್ಕಾರಿ ಭರ್ಜರಿ ನೇಮಕಾತಿ:
ಕರ್ನಾಟಕದಲ್ಲಿ ಸರ್ಕಾರಿ ನೌಕರಿ ಹುಡುಕುತ್ತಿರುವ ದ್ವಿತೀಯ ಪಿಯುಸಿ, ಡಿಪ್ಲೊಮ, ಐಟಿಐ, ಬಿಇ, ಬಿ.ಟೆಕ್ ಪಾಸಾದವರಿಗೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ(Good news) ಬರಲಿದೆ. ಕರ್ನಾಟಕ ಕಂದಾಯ ಇಲಾಖೆ(Revenue Department)ಯಲ್ಲಿ ಖಾಲಿ ಇರುವ 1500 ಗ್ರಾಮ ಲೆಕ್ಕಾಧಿಕಾರಿ, 500 ಸರ್ವೇಯರ್ ಮತ್ತು 60 ಎಡಿಎಲ್ಆರ್ ಹುದ್ದೆಗಳ ಭರ್ತಿಗೆ ಬಜೆಟ್ನಲ್ಲಿ ಒಪ್ಪಿಗೆ ಸಿಗುವ ಸಾಧ್ಯತೆ ಇದೆ. ಈ ವಿಷಯದ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ(Revenue Minister Krishna Byre Gowda) ಅವರು ಭರವಸೆಯನ್ನು ನೀಡಿದ್ದಾರೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ ಪ್ರಕಾರ, ಬಜೆಟ್ನಲ್ಲಿ ಎಷ್ಟು ಹುದ್ದೆಗಳ ಭರ್ತಿಗೆ ಅನುಮತಿ ಸಿಗುತ್ತದೆಯೋ ಅಷ್ಟೂ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು. ಈ ಹುದ್ದೆಗಳ ಭರ್ತಿಯು ರಾಜ್ಯದ ಕಂದಾಯ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡಲಿದೆ. ಜೊತೆಗೆ, ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸಲಿದೆ.
ವಿದ್ಯಾರ್ಹತೆ(Educational Qualification):
ಗ್ರಾಮ ಲೆಕ್ಕಾಧಿಕಾರಿ(Village Accountant) ಹುದ್ದೆಗಳಿಗೆ ದ್ವಿತೀಯ ಪಿಯುಸಿ(2nd PUC) ಪಾಸಾದವರು ಅರ್ಜಿ ಸಲ್ಲಿಸಬಹುದು.
ADLR (Assistant Director of Land Records & Survey Settlement) ಹುದ್ದೆಗಳಿಗೆ ಡಿಪ್ಲೊಮ(Diploma), ಐಟಿಐ(ITI), ಬಿಇ(BE), ಬಿ.ಟೆಕ್(B-Tech) ಅಥವಾ ದ್ವಿತೀಯ ಪಿಯುಸಿ ವಿಜ್ಞಾನ (2nd PUC science)ವಿಭಾಗದಲ್ಲಿ ಪಾಸಾದವರು ಅರ್ಹರಾಗಿರುತ್ತಾರೆ
ಸರ್ವೇಯರ್(Surveyor) ಹುದ್ದೆಗಳಿಗೆ ಡಿಪ್ಲೊಮ, ಐಟಿಐ, ಬಿಇ, ಬಿ.ಟೆಕ್ ಅಥವಾ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪಾಸಾದವರು ಅರ್ಹರಾಗಿರುತ್ತಾರೆ.
ಆಯ್ಕೆ ಪ್ರಕ್ರಿಯೆ (Selection Process):
ನೇಮಕಾತಿ ಪ್ರಕ್ರಿಯೆ ಲಿಖಿತ ಪರೀಕ್ಷೆಯ ಮೂಲಕ ನಡೆಯಲಿದೆ. ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(Karnataka Examination Authority)ವು ನಡೆಸಲಿದೆ. ಸರ್ವೇಯರ್ ಮತ್ತು ಎಡಿಎಲ್ಆರ್(ADLR) ಹುದ್ದೆಗಳಿಗೆ ಪರೀಕ್ಷೆಯನ್ನು ಕಂದಾಯ ಇಲಾಖೆಯು ನಡೆಸಲಿದೆ.
ವೇತನ ವಿವರ (Salary details):
ಗ್ರಾಮ ಲೆಕ್ಕಾಧಿಕಾರಿಗಳಿಗೆ ಪ್ರಾರಂಭಿಕ ವೇತನ ಶ್ರೇಣಿ ರೂ.21,400-42,000 ಆಗಿದೆ. ಸರ್ವೇಯರ್ಗಳಿಗೆ ವಾರ್ಷಿಕ ವೇತನ ರೂ.3,60,000 – 4,80,000 ಆಗಿದೆ. ಎಡಿಎಲ್ಆರ್ಗಳಿಗೆ ವಾರ್ಷಿಕ ವೇತನ ರೂ.5 ರಿಂದ 6 ಲಕ್ಷವರೆಗೆ ಆಗಿರಬಹುದು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕಂದಾಯ ಇಲಾಖೆಯ ವೆಬ್ಸೈಟ್ನಲ್ಲಿ ನೀಡಿರುವ ಮಾಹಿತಿಯನ್ನು ಪರಿಶೀಲಿಸಬಹುದು. ಅರ್ಜಿ ಸಲ್ಲಿಕೆಗೆ ನಿರ್ದಿಷ್ಟ ದಿನಾಂಕವನ್ನು ಕಂದಾಯ ಇಲಾಖೆ ಘೋಷಿಸಲಿದೆ.
ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: https://kandaya.karnataka.gov.in/.
ಹಾಗೆಯೇ ಇಂತಹ ಉತ್ತಮ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ನಿಮ್ಮ ಎಲ್ಲಾ ಸ್ನೇಹಿತರಲ್ಲಿ ಮತ್ತು ಬಂಧು-ಭಾಂದವರಲ್ಲಿ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ರಾಜ್ಯದಲ್ಲಿ ಬರೋಬ್ಬರಿ 25 ಸಾವಿರ ಜನಮಿತ್ರರ ನೇಮಕಾತಿ, ಮನೆ ಬಾಗಿಲಲ್ಲೇ ಸಿಗುತ್ತೆ ಎಲ್ಲಾ ಸೇವೆ
- ನಿಮ್ಮ ವಾಹನದ ಫ್ಯಾಸ್ಟ್ ಟ್ಯಾಗ್ e-kyc ಮಾಡಲು ಇಂದೇ ಕೊನೆಯ ದಿನ, ಇಲ್ಲಿದೆ ಮಾಹಿತಿ
- ಮನೆ ಇಲ್ಲದವರಿಗೆ, ಸ್ವಂತ ಮನೆ ಕಟ್ಟಲು ಕೇಂದ್ರ ಸರ್ಕಾರದಿಂದ ಸಾಲ ಮತ್ತು ಸಹಾಯಧನಕ್ಕೆ ಅರ್ಜಿ ಆಹ್ವಾನ
- ಈ ರೈತರಿಗೆ ಬೆಳೆ ಹಾನಿ ಪರಿಹಾರದ 2000/- ರೂ. ಜಮಾ ಆಗಿದೆ, ನಿಮ್ಮ ಖಾತೆ ಹೀಗೆ ಚೆಕ್ ಮಾಡಿ
- ಜಗದೀಶ್ ಶೆಟ್ಟರ್ ಬಿಜೆಪಿಗೆ ಮತ್ತೆ ಸೇರ್ಪಡೆ ; ಇಂದು ದೆಹಲಿಯ ಬಿಜೆಪಿ ಆಫೀಸ್ ನಲ್ಲಿ ಅಧಿಕೃತವಾಗಿ ಘರ್ ವಾಪಾಸ್!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group





