ರಾಜ್ಯ ಸರ್ಕಾರಿ ನೌಕರರ ಸೇವಾ ಅವಧಿಯಲ್ಲಿ ವೇತನ ವೃದ್ಧಿ ಮತ್ತು ಬಡ್ತಿಗಳು ಅವರ ವೃತ್ತಿಜೀವನದ ಪ್ರಮುಖ ಭಾಗವಾಗಿರುತ್ತವೆ. ಸಾಮಾನ್ಯವಾಗಿ ನೌಕರರು ನಿರ್ದಿಷ್ಟ ಸಮಯಾವಧಿಯ ನಂತರ ತಮ್ಮ ಹುದ್ದೆಯ ವೇತನ ಶ್ರೇಣಿಯೊಳಗೆ ವಾರ್ಷಿಕ ವೇತನ ಬಡ್ತಿ ಪಡೆಯುತ್ತಾರೆ. ಆದರೆ, ಕೆಲವರು ತಮ್ಮ ಕಾಲಿಕ ವೇತನ ಶ್ರೇಣಿಯ ಗರಿಷ್ಠ ಹಂತವನ್ನು ತಲುಪಿದ ನಂತರವೂ ಹಲವು ವರ್ಷಗಳ ಕಾಲ ಸೇವೆ ಮುಂದುವರಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಅವರು ಮುಂದಿನ ವೇತನ ವೃದ್ಧಿ ಅಥವಾ ಬಡ್ತಿಗೆ ಅರ್ಹರಾಗದ ಕಾರಣದಿಂದಾಗಿ, ಅವರ ವೇತನದಲ್ಲಿ ಯಾವುದೇ ಹೆಚ್ಚಳವಾಗದೆ ಉಳಿಯುವ ಪರಿಸ್ಥಿತಿ ಉಂಟಾಗುತ್ತದೆ. ಈ ರೀತಿಯ ಸ್ಥಿತಿಗೆ ಪರಿಹಾರವಾಗಿ, ಸ್ಥಗಿತ ವೇತನ ಬಡ್ತಿ ಸೌಲಭ್ಯ (Stagnation Increment) ಎಂಬ ವಿಶೇಷ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕ ಸರ್ಕಾರವು ಈ ಸೌಲಭ್ಯವನ್ನು ಮಂಜೂರು ಮಾಡುವ ಕುರಿತು ನಿಗದಿತ ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ಆದೇಶವನ್ನು ಹೊರಡಿಸಿದೆ. ಈ ಕ್ರಮದಿಂದ ರಾಜ್ಯ ಸರ್ಕಾರಿ ನೌಕರರ ವೇತನ ವೃದ್ಧಿಯ ಹಕ್ಕು, ಪಾರದರ್ಶಕತೆ ಮತ್ತು ಸೇವಾ ದಾಖಲೆಗಳ ಶುದ್ಧತೆ ಖಚಿತವಾಗಲಿದೆ.
ಸ್ಥಗಿತ ವೇತನ ಬಡ್ತಿ ಸೌಲಭ್ಯದ ಹಿನ್ನೆಲೆ:
ಉಲ್ಲೇಖ (1) ರ ದಿನಾಂಕ: 18.03.1996ರ ಸರ್ಕಾರಿ ಆದೇಶದನ್ವಯ, ಕಾಲಿಕ ವೇತನ ಶ್ರೇಣಿಯ ಗರಿಷ್ಠ ಹಂತ ತಲುಪಿದ ನೌಕರರಿಗೆ ಗರಿಷ್ಠ 5 ಸ್ಥಗಿತ ವೇತನ ಬಡ್ತಿಗಳು ಮಂಜೂರಾಗುವ ವ್ಯವಸ್ಥೆ ಇರಲಿತ್ತು.
ನಂತರ, 2011ರ ಅಧಿಕಾರಿ ವೇತನ ಸಮಿತಿ ಶಿಫಾರಸ್ಸಿನ ಮೇರೆಗೆ, ಉಲ್ಲೇಖ (2) ರ ದಿನಾಂಕ: 14.06.2012ರ ಸರ್ಕಾರಿ ಆದೇಶದನ್ವಯ ಈ ಸಂಖ್ಯೆಯನ್ನು 5ರಿಂದ 8ಕ್ಕೆ ಹೆಚ್ಚಿಸಲಾಯಿತು. ಈ ಪರಿಷ್ಕರಣೆ 01.04.2012vರಿಂದ ಜಾರಿಗೆ ಬಂತು.
6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನ ಪ್ರಕಾರ 01.07.2017 ರಿಂದ ಹೊಸ ವೇತನ ಪರಿಷ್ಕರಣೆ ಜಾರಿಯಾಗಿದ್ದು, ಅದನ್ನು ಉಲ್ಲೇಖ (3) – 19.04.2018 ರಲ್ಲಿ ಅಧಿಸೂಚಿಸಲಾಯಿತು. ನಂತರ ಉಲ್ಲೇಖ (4) – 17.02.2020ರ ಸುತ್ತೋಲೆಯ ಮೂಲಕ ಸೇವಾ ಪುಸ್ತಕದಲ್ಲಿ ಸೂಕ್ತ ದಾಖಲೆ ಮಾಡಬೇಕೆಂಬ ಸೂಚನೆ ನೀಡಲಾಯಿತು.
ನಿಯಮ ಉಲ್ಲಂಘನೆಗಳ ಬಗ್ಗೆ ಸರ್ಕಾರದ ಗಮನ:
ಸರ್ಕಾರಕ್ಕೆ ಬಂದ ಮಾಹಿತಿಯ ಪ್ರಕಾರ, ಕೆಲವು ನೌಕರರು ತಮ್ಮ ಪದೋನ್ನತಿ ಅವಕಾಶಗಳನ್ನು ಸ್ವಇಚ್ಛೆಯಿಂದ ತ್ಯಜಿಸಿದ ಬಗ್ಗೆ ಸೇವಾ ಪುಸ್ತಕದಲ್ಲಿ ದಾಖಲೆ ಇರದೆ ಇರುವುದು ಕಂಡುಬಂದಿದೆ.
ನಿವೃತ್ತಿಯ ನಂತರ ಸ್ಥಗಿತ ವೇತನ ಬಡ್ತಿ ಸೌಲಭ್ಯಕ್ಕಾಗಿ ಪ್ರಸ್ತಾವನೆ ಸಲ್ಲಿಸುವ ಘಟನೆಗಳು ಹೆಚ್ಚಾಗಿವೆ.
ಕೆಲವು ಸಂದರ್ಭಗಳಲ್ಲಿ ಪದೋನ್ನತಿ ನಿರಾಕರಿಸಿದವರಿಗೂ ಸ್ಥಗಿತ ವೇತನ ಬಡ್ತಿ ಮಂಜೂರು ಮಾಡಿರುವ ನಿಯಮಬಾಹಿರ ಪ್ರಕರಣಗಳು ನಡೆದಿವೆ.
ಈ ಅನಿಯಮಿತ ಮಂಜೂರಾತಿಗಳು ಗೊಂದಲ ಮತ್ತು ನಿರ್ವಹಣಾ ತೊಂದರೆಗಳಿಗೆ ಕಾರಣವಾಗುತ್ತಿರುವುದರಿಂದ, ಸರ್ಕಾರವು ಇದೀಗ ಮಾರ್ಗಸೂಚಿಗಳನ್ನು ಪುನಃ ದೃಢಪಡಿಸಿದೆ.
ಸ್ಥಗಿತ ವೇತನ ಬಡ್ತಿಗೆ ಅನ್ವಯವಾಗುವ ಷರತ್ತುಗಳು ಹೀಗಿವೆ:
ಸ್ಥಗಿತ ವೇತನ ಬಡ್ತಿ ಸೌಲಭ್ಯವನ್ನು ಮಂಜೂರು ಮಾಡಲು ಸರ್ಕಾರಿ ನೌಕರರು ಈ ಕೆಳಗಿನ ಷರತ್ತುಗಳನ್ನು ಪೂರೈಸಿರಬೇಕು,
ನೌಕರರ ಸೇವಾ ದಾಖಲೆಗಳು ಉತ್ತಮವಾಗಿರಬೇಕು.
ಸ್ಥಗಿತ ವೇತನ ಬಡ್ತಿಯನ್ನು ಮಂಜೂರು ಮಾಡುವಾಗ, ಅದನ್ನು ಪದೋನ್ನತಿಯಂತೆ ಕಠಿಣವಾಗಿ ಪರಿಗಣಿಸಬೇಕು.
ಶ್ರೇಣೀಕೃತ ವ್ಯವಸ್ಥೆಯಲ್ಲಿ ಪದೋನ್ನತಿ ನಿರಾಕರಿಸಿದ ಅಥವಾ ಬಿಟ್ಟುಕೊಟ್ಟ ನೌಕರರಿಗೆ ಸ್ಥಗಿತ ವೇತನ ಬಡ್ತಿ ಸೌಲಭ್ಯ ನೀಡಲಾಗುವುದಿಲ್ಲ.
ಮಂಜೂರಾತಿ ಪ್ರಕ್ರಿಯೆ ಹೇಗೆ?:
ಸರ್ಕಾರಿ ನೌಕರರಿಂದ ಲಿಖಿತ ಮನವಿ ಬಂದ ತಕ್ಷಣ ಸಕ್ಷಮ ಪ್ರಾಧಿಕಾರಿಗಳು ಉಲ್ಲೇಖ (1) ಮತ್ತು (2) ರ ಸರ್ಕಾರಿ ಆದೇಶಗಳ ಪ್ರಕಾರ, ನಿಯಮಾನುಸಾರ ಪರಿಶೀಲನೆ ನಡೆಸಬೇಕು.
ಸೇವಾ ಪುಸ್ತಕದಲ್ಲಿ ಎಲ್ಲಾ ಹಂತಗಳ ದಾಖಲೆ ಸರಿಯಾಗಿ ಇರಬೇಕು.
ಕಾಲಿಕ ವೇತನ ಶ್ರೇಣಿಯ ವಾರ್ಷಿಕ ವೇತನ ಬಡ್ತಿ ಮತ್ತು ಸ್ಥಗಿತ ವೇತನ ಬಡ್ತಿಗಳನ್ನು ಪರಸ್ಪರ ಹೋಲಿಸಲಾಗುವುದಿಲ್ಲ ಇವುಗಳ ಉದ್ದೇಶ ಮತ್ತು ವಿಧಾನ ವಿಭಿನ್ನವಾಗಿದೆ.
ಒಟ್ಟಾರೆಯಾಗಿ, ಸ್ಥಗಿತ ವೇತನ ಬಡ್ತಿ ಸೌಲಭ್ಯವು ಗರಿಷ್ಠ ಹಂತ ತಲುಪಿದ ಸರ್ಕಾರಿ ನೌಕರರಿಗೆ ಹೆಚ್ಚುವರಿ ವೇತನ ವೃದ್ಧಿ ನೀಡುವ ಒಂದು ನ್ಯಾಯಸಮ್ಮತ ಕ್ರಮ. ಆದರೆ, ಇದರ ಮಂಜೂರಾತಿ ಕಟ್ಟುನಿಟ್ಟಿನ ನಿಯಮಗಳು ಮತ್ತು ಪಾರದರ್ಶಕ ದಾಖಲೆಗಳ ಆಧಾರದ ಮೇಲೆ ಮಾತ್ರ ಸಾಧ್ಯ. ಸರ್ಕಾರದ ಇತ್ತೀಚಿನ ಸೂಚನೆಗಳು ನೌಕರರ ವೇತನ ವ್ಯವಸ್ಥೆಯಲ್ಲಿ ಶಿಸ್ತು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶವನ್ನು ಹೊಂದಿವೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಸರ್ಕಾರದಿಂದ ಬಿಗ್ ಅಪ್ಡೇಟ್
- ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ನಗದು ರೂಪದಲ್ಲಿ ಬಿಡುಗಡೆಗೊಳಿಸಲು ಸರ್ಕಾರಕ್ಕೆ ಮನವಿ
- ನೌಕರರು ಮತ್ತು ಪಿಂಚಣಿದಾರರಿಗೆ 3% ತುಟ್ಟಿಭತ್ಯೆ (DA Hike) ಏರಿಕೆ, ದೀಪಾವಳಿಗೆ ಸಿಹಿ ಸುದ್ದಿ.!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




