ನಾವು ಯಾವ ತರಕಾರಿಗಳನ್ನು ಖರೀದಿಸುತ್ತೇವೆ? ಯಾವ ಮಸಾಲೆಗಳನ್ನು ಬಳಸುತ್ತೇವೆ? ಯಾವ ಎಣ್ಣೆ ಆರೋಗ್ಯಕರ? – ಇವೆಲ್ಲದರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇವೆ. ಆದರೆ ಅಡುಗೆ ಮಾಡುವ ಪಾತ್ರೆಗಳ(Utensils) ಬಗ್ಗೆ ಅಷ್ಟು ಗಮನಕೊಡುವುದಿಲ್ಲ. ಅಡುಗೆ ಪಾತ್ರೆಗಳೂ ಆಹಾರದ ಗುಣಮಟ್ಟ ಮತ್ತು ಪೌಷ್ಟಿಕತೆಗೆ ನೇರವಾಗಿ ಸಂಬಂಧಿಸಿದ್ದವೆಂಬುದು ಅನೇಕರಿಗೆ ಗೊತ್ತಿಲ್ಲ. ಪೌಷ್ಟಿಕತಜ್ಞೆ ಲಿಮಾ ಮಹಾಜನ್ ಅವರು ಇತ್ತೀಚೆಗೆ ಹಂಚಿಕೊಂಡ ಮಾಹಿತಿಯ ಪ್ರಕಾರ, ಪಾತ್ರೆಗಳ ಆಯ್ಕೆ ಸರಿಯಾದ್ದಾದರೆ ನಾವು ಅಡುಗೆ ಮಾಡುವ ಆಹಾರದ ಗುಣಮಟ್ಟವನ್ನು ಮತ್ತಷ್ಟು ಆರೋಗ್ಯಕರವಾಗಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ..
ಸ್ಟೇನ್ಲೆಸ್ ಸ್ಟೀಲ್ (Stainless Steel) – ಅತ್ಯಂತ ಸುರಕ್ಷಿತ ಆಯ್ಕೆ
ಭಾರತದ ಹೆಚ್ಚಿನ ಮನೆಗಳಲ್ಲಿ ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳು ಅಡುಗೆಗೆ ಬಳಸಲಾಗುತ್ತವೆ. ಇದರ ಪ್ರಮುಖ ಗುಣವೆಂದರೆ ಇದು ಯಾವುದೇ ಆಹಾರದೊಂದಿಗೆ ಪ್ರತಿಕ್ರಿಯೆ ಮಾಡದು. ಟೊಮೆಟೊ, ಹುಳಿ, ಎಣ್ಣೆ – ಯಾವುದನ್ನೇ ಬೇಯಿಸಿದರೂ ಪಾತ್ರೆಯಿಂದ ಹಾನಿಕಾರಕ ರಾಸಾಯನಿಕಗಳು ಆಹಾರಕ್ಕೆ ಸೇರುವುದಿಲ್ಲ. ಹಾರ್ಮೋನ್ ಸಮತೋಲನಕ್ಕೂ ಸಹಕಾರಿ. ಆದ್ದರಿಂದ ಪ್ರತಿ ದಿನದ ಅಡುಗೆಗೆ ಇದು ಅತ್ಯುತ್ತಮ ಮತ್ತು ದೀರ್ಘಕಾಲಿಕ ಆಯ್ಕೆ.
ಅಲ್ಯೂಮಿನಿಯಂ (Aluminium) – ಬಳಸುವುದರಲ್ಲಿ ಎಚ್ಚರಿಕೆ ಅಗತ್ಯ
ಅಲ್ಯೂಮಿನಿಯಂ ಪಾತ್ರೆಗಳು ಹಗುರವಾಗಿರುತ್ತವೆ, ಬೆಲೆ ಕಡಿಮೆ. ಆದ್ದರಿಂದ ಬಹಳ ಜನರು ಇವನ್ನು ಬಳಸುತ್ತಾರೆ. ಆದರೆ ಸಮಸ್ಯೆ ಏನೆಂದರೆ ಇದು ಹುಳಿ ಪದಾರ್ಥಗಳೊಂದಿಗೆ ಪ್ರತಿಕ್ರಿಯಿಸುತ್ತದೆ. ಟೊಮೆಟೊ ಸಾರು, ನಿಂಬೆ ಹಣ್ಣಿನ ಆಹಾರಗಳನ್ನು ಇವುಗಳಲ್ಲಿ ಬೇಯಿಸಿದರೆ ಅಲ್ಯೂಮಿನಿಯಂ ಆಹಾರಕ್ಕೆ ಸೇರುವ ಸಾಧ್ಯತೆ ಹೆಚ್ಚು. ದೀರ್ಘಕಾಲ ಬಳಸಿದರೆ ದೇಹದಲ್ಲಿ ಅಲ್ಯೂಮಿನಿಯಂ ಮಟ್ಟ ಹೆಚ್ಚಾಗಿ ನರವ್ಯೂಹಕ್ಕೆ(Nervous system) ಹಾನಿ ಉಂಟುಮಾಡಬಹುದು. ಆದ್ದರಿಂದ ದಿನನಿತ್ಯದ ಅಡುಗೆಗೆ ಇದು ಸೂಕ್ತವಲ್ಲ.
ಎರಕಹೊಯ್ದ ಕಬ್ಬಿಣ (Cast Iron) – ಕಬ್ಬಿಣದ ಪೂರೈಕೆ ಮಾಡುವ ಪಾತ್ರೆ
ಕಬ್ಬಿಣದ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ಆಹಾರದಲ್ಲಿ ಸ್ವಲ್ಪ ಪ್ರಮಾಣದ ಕಬ್ಬಿಣ ಸೇರಿ ದೇಹಕ್ಕೆ ಪೂರೈಕೆ ಆಗುತ್ತದೆ. ಇದು ವಿಶೇಷವಾಗಿ ಅನೀಮಿಯಾ ಇರುವವರಿಗೆ ಬಹಳ ಸಹಕಾರಿ. ಜೊತೆಗೆ ಕಬ್ಬಿಣದ ಪಾತ್ರೆಗಳು ದೀರ್ಘಕಾಲ ಶಾಖವನ್ನು ಉಳಿಸಿಕೊಳ್ಳುತ್ತವೆ. ಆದರೆ ಹುಳಿ ಆಹಾರಗಳನ್ನು ಹೆಚ್ಚು ಹೊತ್ತು ಬೇಯಿಸುವುದರಿಂದ ಪಾತ್ರೆ ಹಾನಿಯಾಗಬಹುದು. ಜೊತೆಗೆ ಬಳಸುವ ಮೊದಲು ಪಾತ್ರೆಯನ್ನು ಸ್ವಲ್ಪ ಎಣ್ಣೆಯಿಂದ ಲೇಪಿಸುವುದು ಮುಖ್ಯ. ಸರಿಯಾಗಿ ಬಳಸಿದರೆ ಕಬ್ಬಿಣದ ಪಾತ್ರೆಗಳು ಆರೋಗ್ಯಕರ ಹಾಗೂ ದೀರ್ಘಕಾಲ ಬಾಳಿಕೆ ಬರುವಂತಹವು.
ತಾಮ್ರ (Copper) – ಶೀಘ್ರ ಅಡುಗೆಯ ಪಾತ್ರೆ
ತಾಮ್ರ ಶಾಖವನ್ನು ಅತ್ಯಂತ ವೇಗವಾಗಿ ಹೀರಿಕೊಳ್ಳುತ್ತದೆ. ಆದ್ದರಿಂದ ತಾಮ್ರದ ಪಾತ್ರೆಗಳಲ್ಲಿ ಆಹಾರ ಬೇಗನೆ ಬೇಯುತ್ತದೆ. ಆದರೆ ಕಚ್ಚಾ ತಾಮ್ರವು ನೇರವಾಗಿ ಆಹಾರದೊಂದಿಗೆ ಸಂಪರ್ಕಿಸಿದರೆ ವಿಷಕಾರಿ ಪರಿಣಾಮ ಉಂಟುಮಾಡಬಹುದು. ಹೀಗಾಗಿ ತಾಮ್ರದ ಪಾತ್ರೆಗಳನ್ನು ಯಾವಾಗಲೂ ಒಳಗೆ ತವರ ಅಥವಾ ಉಕ್ಕಿನ ಲೇಪನ ಮಾಡಿಸಿ ಮಾತ್ರ ಬಳಸಬೇಕು. ಲೇಪನ ಹಾಳಾದರೆ ಮತ್ತೆ ಮಾಡಿಸಿಕೊಳ್ಳುವುದು ಅನಿವಾರ್ಯ.
ಹಿತ್ತಾಳೆ (Brass) – ಸಾಂಪ್ರದಾಯಿಕ ಆಯ್ಕೆ
ಹಿತ್ತಾಳೆಯ ಪಾತ್ರೆಗಳು ನಮ್ಮ ಅಜ್ಜ-ಅಜ್ಜಿಯ ಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವವು. ಹಿತ್ತಾಳೆ ದೇಹದ ಶಕ್ತಿಸಮತೋಲನವನ್ನು ಕಾಯ್ದುಕೊಳ್ಳುತ್ತದೆ ಎಂದು ನಂಬಲಾಗುತ್ತದೆ. ಆದರೆ ಇದು ಕೂಡ ತಾಮ್ರದಂತೆ ಲೇಪನ ಅಗತ್ಯವಿದೆ. ವಿಶೇಷವಾಗಿ ಹುಳಿ ಪದಾರ್ಥಗಳನ್ನು ಬೇಯಿಸಲು ಇದನ್ನು ಬಳಸಬಾರದು.
ಸೆರಾಮಿಕ್ (Ceramic) – ಸುರಕ್ಷಿತ ಆದರೆ ದುರ್ಬಲ
100% ಸೀಸ-ಮುಕ್ತ ಸೆರಾಮಿಕ್ ಪಾತ್ರೆಗಳು ಆರೋಗ್ಯದ ದೃಷ್ಟಿಯಿಂದ ಸುರಕ್ಷಿತ. ನಿಧಾನವಾಗಿ ಬೇಯಿಸುವ ಅಡುಗೆಗೆ ಇದು ಸೂಕ್ತ. ಆದರೆ ಇದರ ದೋಷವೆಂದರೆ ಇದು ಸುಲಭವಾಗಿ ಮುರಿಯುವುದು. ಆದ್ದರಿಂದ ಇದನ್ನು ಬಳಸುವಾಗ ಹೆಚ್ಚಿನ ಜಾಗ್ರತೆ ಅಗತ್ಯ.
ನಾನ್ಸ್ಟಿಕ್ / ಟೆಫ್ಲಾನ್ (Nonstick / Teflon) – ಕಡಿಮೆ ಎಣ್ಣೆಯ ಅಡುಗೆಗೆ ಸೂಕ್ತ
ಕಡಿಮೆ ಎಣ್ಣೆ ಬಳಸಿ ಅಡುಗೆ ಮಾಡಲು ನಾನ್ಸ್ಟಿಕ್ ಪಾತ್ರೆಗಳು ಬಹಳ ಉಪಯುಕ್ತ. ಆದರೆ ಅವುಗಳನ್ನು ಖಾಲಿಯಾಗಿ ಬಿಸಿ ಮಾಡಬಾರದು ಮತ್ತು ಹೆಚ್ಚಿನ ಶಾಖದಲ್ಲಿ ಬಳಸಬಾರದು. ಪಾತ್ರೆಯ ಲೇಪನಕ್ಕೆ ಗೀರು ಬಿದ್ದರೆ ಹಾನಿಕಾರಕ ಕಣಗಳು ಆಹಾರದಲ್ಲಿ ಬೆರೆತು ಹೋಗುವ ಅಪಾಯ ಇದೆ. ಇಂತಹ ಸಂದರ್ಭದಲ್ಲಿ ಪಾತ್ರೆಯನ್ನು ತಕ್ಷಣವೇ ಬದಲಾಯಿಸಬೇಕು.
ಕೊನೆಯದಾಗಿ ಹೇಳುವುದಾದರೆ, ಯಾವುದೇ ಒಂದು ಅಡುಗೆ ಪಾತ್ರೆಯನ್ನೇ ಅತ್ಯುತ್ತಮವೆಂದು ಹೇಳಲು ಸಾಧ್ಯವಿಲ್ಲ, ಏಕೆಂದರೆ ಪ್ರತಿಯೊಂದಕ್ಕೂ
ತನ್ನದೇ ಆದ ಉತ್ತಮ-ಕೆಟ್ಟ ಗುಣಗಳಿವೆ. ಸರಿಯಾದ ರೀತಿಯಲ್ಲಿ ಉಪಯೋಗಿಸಿದಾಗ ಮಾತ್ರ ಅದು ಆರೋಗ್ಯಕ್ಕೆ ಒಳ್ಳೆಯದು. ದಿನನಿತ್ಯದ ಬಳಕೆಗೆ ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳು ಹೆಚ್ಚು ಸುರಕ್ಷಿತವಾಗಿದ್ದು, ದೀರ್ಘಾವಧಿಯ ನಂಬಿಕೆಗೆ ತಕ್ಕಂತಿವೆ. ದೇಹದಲ್ಲಿ ಕಬ್ಬಿಣದ ಕೊರತೆ ಕಂಡುಬರುವವರಿಗೆ ಎರಕಹೊಯ್ದ ಕಬ್ಬಿಣದ ಪಾತ್ರೆಗಳು ಉತ್ತಮ ಆಯ್ಕೆಯಾಗಬಹುದು, ಏಕೆಂದರೆ ಅವು ಆಹಾರದಲ್ಲಿ ಸ್ವಾಭಾವಿಕವಾಗಿ ಕಬ್ಬಿಣವನ್ನು ಸೇರಿಸುತ್ತವೆ. ಇತರೆ ಪಾತ್ರೆಗಳನ್ನು ವಿಶೇಷ ಸಂದರ್ಭಗಳಲ್ಲಿ ಅಥವಾ ಎಚ್ಚರಿಕೆಯಿಂದ ಮಾತ್ರ ಬಳಕೆ ಮಾಡುವುದೇ ಉತ್ತಮ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




