ಇಂದಿರಾ ಆಹಾರ ಕಿಟ್(Indira Food Kit): ಬಿಪಿಎಲ್ ಕಾರ್ಡ್(BPL card) ಹೊಂದಿರುವವರಿಗೆ ಸಂತಸದ ಸುದ್ದಿ! ಹೆಚ್ಚುವರಿ ಅಕ್ಕಿಗೆ ಬದಲು ಪೌಷ್ಟಿಕಾಂಶ ಆಹಾರ ಕಿಟ್ ನೀಡಲು ಸರ್ಕಾರದ ಮಹತ್ವದ ನಿರ್ಧಾರ
ಕರ್ನಾಟಕ ರಾಜ್ಯದಲ್ಲಿ(State government) ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಆಹಾರದ ಭದ್ರತೆ ನೀಡುವ ದಿಟ್ಟ ಹೆಜ್ಜೆಯೊಂದನ್ನು ಸರ್ಕಾರ ಇಟ್ಟಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ (NFSA) ಮತ್ತು ರಾಜ್ಯ ಸರ್ಕಾರದ “ಅನ್ನಭಾಗ್ಯ” ಯೋಜನೆಯಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಉಚಿತ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಇದುವರೆಗೆ ಪ್ರತಿ ಆದ್ಯತಾ ಕುಟುಂಬ (PHH) ಕಾರ್ಡ್ದಾರರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಕೇಂದ್ರದಿಂದ 5 ಕೆಜಿ ಮತ್ತು ರಾಜ್ಯ ಸರ್ಕಾರದಿಂದ ಹೆಚ್ಚುವರಿ 5 ಕೆಜಿ. ಅಕ್ಕಿ ನೀಡುತಿತ್ತು. ಆದರೆ ಈ ಹೆಚ್ಚುವರಿ ಅಕ್ಕಿ ಪರ್ಯಾಯವಾಗಿ “ಇಂದಿರಾ ಆಹಾರ ಕಿಟ್” ಎಂಬ ಹೊಸ ಪೌಷ್ಟಿಕಾಂಶ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಲಿದೆ. ಹಾಗಿದ್ದರೆ”ಇಂದಿರಾ ಆಹಾರ ಕಿಟ್” ನಲ್ಲಿ ಏನೆಲ್ಲಾ ಇರಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ರಾಜ್ಯ ಸರ್ಕಾರ ವಿವಿಧ ಜನಪರ ಯೋಜನೆಗಳ ಮೂಲಕ ಬಡಜನರ ಜೀವನಮಟ್ಟವನ್ನು ಸುಧಾರಿಸುವ ದಿಸೆಯಲ್ಲಿ ಇದೆ. ಇದರ ಭಾಗವಾಗಿ ಈಗ ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ “ಇಂದಿರಾ ಆಹಾರ ಕಿಟ್” (Indira Food Kit) ನೀಡಲು ಯೋಜನೆ ರೂಪಿಸಲಾಗುತ್ತಿದೆ. ಈ ಕಿಟ್, ಈಗಿರುವ ಅನ್ನಭಾಗ್ಯ ಯೋಜನೆಯು ನೀಡುವ ಹೆಚ್ಚುವರಿ ಐದು ಕೆಜಿ ಅಕ್ಕಿಗೆ ಪರ್ಯಾಯವಾಗಲಿದೆ.
ಪೌಷ್ಟಿಕ ಆಹಾರ ನೀಡುವ ನೂತನ ಹೆಜ್ಜೆ: ಯೋಜನೆಯ ಹಿನ್ನಲೆ,
ಇತ್ತೀಚಿನ ಅಧ್ಯಯನಗಳು ಮತ್ತು ಸಮೀಕ್ಷೆಗಳ ಪ್ರಕಾರ, ಹಲವಾರು ಕುಟುಂಬಗಳು ಹೆಚ್ಚುವರಿ ಅಕ್ಕಿಯನ್ನು ಕಪ್ಪು ಮಾರುಕಟ್ಟೆಗೆ ಮಾರಾಟ ಮಾಡುತ್ತಿರುವ ಸಂಭವಗಳಿವೆ. ಕೆಲವೊಮ್ಮೆ ಈ ಅಕ್ಕಿ ವಾಸ್ತವವಾಗಿ ಉಪಯೋಗವಾಗದೆ ಪಾರದರ್ಶಕವಲ್ಲದ ಚಟುವಟಿಕೆಗಳಿಗೆ ಒಳಪಡುತ್ತಿದೆ. ಇದರಿಂದಾಗಿ ರಾಜ್ಯ ಸರ್ಕಾರ ಆಯಾ ಕುಟುಂಬಗಳ ಪೌಷ್ಟಿಕತೆಯನ್ನು ಹೆಚ್ಚಿಸುವ ದೃಷ್ಟಿಯಿಂದ, ಜಾಸ್ತಿ ಅಕ್ಕಿಗೆ ಬದಲು ಅಗತ್ಯ ಆಹಾರ ಪದಾರ್ಥಗಳೊಂದಿಗೆ ಸಮತೋಲನದ ಆಹಾರ ಕಿಟ್ ನೀಡಲು ಮುಂದಾಗಿದೆ.
ಇಂದಿರಾ ಆಹಾರ ಕಿಟ್ನಲ್ಲಿ ಏನೆಲ್ಲಾ ಇರಲಿದೆ?:
ಅಕ್ಕಿಯ ಬದಲಿಗೆ ಕಿಟ್ ನೀಡುವುದರಿಂದ ಫಲಾನುಭವಿಗಳಿಗೆ ಹೆಚ್ಚು ಪೌಷ್ಟಿಕ ಆಹಾರ ಲಭಿಸಲಿದೆ. ಸರ್ಕಾರದ ಪ್ರಸ್ತಾವಿತ ಕಿಟ್ನಲ್ಲಿ ಈ ಕೆಳಗಿನ ಆಹಾರ ಪದಾರ್ಥಗಳು ಸೇರಿರುತ್ತವೆ.
1 ಕೆಜಿ ಸಕ್ಕರೆ(1 kg sugar).
1 ಕೆಜಿ ಉಪ್ಪು(1 kg of salt).
1 ಕೆಜಿ ತೊಗರಿ ಬೇಳೆ.
1 ಲೀಟರ್ ಅಡುಗೆ ಎಣ್ಣೆ(1 liter of cooking oil).
100 ಗ್ರಾಂ ಚಹಾ ಪುಡಿ(100 gram tea powder).
50 ಗ್ರಾಂ ಕಾಫಿ ಪುಡಿ(50 gram coffee powder).
2 ಕೆಜಿ ಗೋಧಿ(2 kg of wheat).
ಈ ಕಿಟ್ ಅನ್ನು ಪ್ರತಿಯೊಂದು ಬಿಪಿಎಲ್ ಕುಟುಂಬಕ್ಕೆ ತಿಂಗಳಿಗೆ ಒಮ್ಮೆ ನೀಡುವ ಯೋಜನೆ ರೂಪಿಸಲಾಗಿದೆ. ಲೆಕ್ಕಾಚಾರದ ಪ್ರಕಾರ, ಪ್ರತಿ ಕಿಟ್ಗಾಗಿ ಸರಾಸರಿ ವೆಚ್ಚ ₹400 ಆಗಿದ್ದು, 1.28 ಕೋಟಿ ಫಲಾನುಭವಿ ಕುಟುಂಬಗಳಿಗೆ ಮಾಸಿಕವಾಗಿ ₹512 ಕೋಟಿ ಮತ್ತು ವಾರ್ಷಿಕವಾಗಿ ₹6,144 ಕೋಟಿ ವೆಚ್ಚ ಉಂಟುಮಾಡುತ್ತದೆ. ಅಕ್ಕಿ ವಿತರಣೆಗೆ ಹೋಲಿಸಿದರೆ ವಾರ್ಷಿಕ ₹720 ಕೋಟಿ ಉಳಿತಾಯ ಸಾಧ್ಯವಿದೆ ಎಂಬ ಅಂದಾಜು ಇದೆ.
ಪ್ರಾಯೋಗಿಕ ಹಂತದಿಂದ ರಾಜ್ಯವ್ಯಾಪಿಯಾಗಿ:
ಯೋಜನೆಯ ಪ್ರಾರಂಭಿಕ ಹಂತದಲ್ಲಿ ಆಯ್ದ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತದೆ. ನಂತರ ಫಲಿತಾಂಶದ ಆಧಾರದ ಮೇಲೆ ರಾಜ್ಯವ್ಯಾಪಿ ಹಂತದ ಜಾರಿಗೆ ಚಿಂತನೆ ನಡೆಯಲಿದೆ. ಈ ಯೋಜನೆಗೆ ಅಗತ್ಯವಾಗುವ ವಸ್ತುಗಳನ್ನು ಕರ್ನಾಟಕ ರಾಜ್ಯ ನಾಗರಿಕ ಸರಬರಾಜು ನಿಗಮ (KSCSC) ಅಥವಾ ಮಾನ್ಯತೆ ಪಡೆದ ಸರಕಾರೀ ಏಜೆನ್ಸಿಗಳ ಮೂಲಕ ಖರೀದಿಸಲಾಗುವುದು.
ಸರ್ಕಾರದ ನಿಲುವೇನು?:
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ(Minister of Food and Civil Supplies) ಕೆ.ಎಚ್. ಮುನಿಯಪ್ಪ(K.H. Muniyappa) ಅವರು ಈ ಕುರಿತು ಸ್ಪಷ್ಟನೆ ನೀಡಿದ್ದು, ಹೆಚ್ಚುವರಿ ಅಕ್ಕಿಯು ಅನೇಕವೇಳೆ ಕಪ್ಪು ಮಾರುಕಟ್ಟೆಗೆ ಹೋಗುತ್ತಿದೆ ಎಂಬ ದೃಷ್ಟಿಯಿಂದ ಈ ಪೌಷ್ಟಿಕಾಂಶ ಕಿಟ್ ಯೋಜನೆಯನ್ನು ಜಾರಿಗೆ ತರಲು ಮುಂದಾಗಲಾಗಿದೆ. ಈ ಪ್ರಸ್ತಾವನೆ ಜುಲೈ 2ರಂದು ನಂದಿಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡನೆಗೆ ಬರಲಿದೆ.
ಒಟ್ಟಾರೆಯಾಗಿ, ರಾಜ್ಯ ಸರ್ಕಾರದ ಈ ಹೊಸ ನಿಲುವು ಕೇವಲ ಆಹಾರ ಭದ್ರತೆಗೆ ಮಾತ್ರವಲ್ಲ, ಪೌಷ್ಟಿಕಾಂಶದ ಸಮತೋಲನಕ್ಕೂ ಹೊಸ ದಿಕ್ಕು ನೀಡಲಿದ್ದು, ಬಿಪಿಎಲ್ ಕುಟುಂಬಗಳ ಜೀವನಮಟ್ಟ ಸುಧಾರಣೆಯತ್ತ ದೃಢ ಹೆಜ್ಜೆಯಾಗಲಿದೆ. ಈ ಯೋಜನೆಯ ಯಶಸ್ಸು ರಾಜ್ಯದ ಸಾಮಾಜಿಕ ಸುರಕ್ಷತಾ ಮಿಷನ್ನಲ್ಲಿ ಮತ್ತೊಂದು ಮೆಟ್ಟಿಲಾಗಿ ನೆಲೆಗೊಳ್ಳುವ ಸಾಧ್ಯತೆ ಇದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




