ಮಹಿಳೆಯ ಆರ್ಥಿಕ ಸ್ವಾವಲಂಬನೆಗೆ ದಾರಿದೀಪವಾಗುತ್ತಿರುವ ಗೃಹಲಕ್ಷ್ಮಿ ಯೋಜನೆ(Gruhalakshmi Yojana): 16ನೇ ಕಂತಿನ ಘೋಷಣೆ!
ರಾಜ್ಯ ಸರ್ಕಾರದ(State Government) ಐದು ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ, ಇಂದು ಕರ್ನಾಟಕದ ಅನೇಕ ಮಹಿಳೆಯರ ಜೀವನದಲ್ಲಿ ಆರ್ಥಿಕ ಸ್ವಾವಲಂಬನೆಗೆ ಹಾಸುಹೊಕ್ಕಾಗಿದೆ. ಈ ಯೋಜನೆಯಡಿ ಮನೆ ಮುಖ್ಯಸ್ಥೆಯರಾಗಿ ಇರುವ ಮಹಿಳೆಯರಿಗೆ ಪ್ರತಿ ತಿಂಗಳು ₹2,000 ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ(bank account) ಜಮೆ ಮಾಡುವ ಮೂಲಕ ಆರ್ಥಿಕ ಸಾಯವನ್ನು ನೀಡಲಾಗುತ್ತಿದೆ.
ಗೃಹಲಕ್ಷ್ಮಿಯ 16ನೇ ಕಂತಿನ ಹಣವನ್ನು ಜನವರಿ 14 ರಿಂದ ಫಲಾನುಭವಿಗಳ ಖಾತೆಗೆ ಜಮೆ ಮಾಡುವುದಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ(C.S. Chandrabhupal) ರವರು ಘೋಷಿಸಿದ್ದಾರೆ. ಇದು ಸಂಕ್ರಾಂತಿ ಹಬ್ಬದ(Sankranti festival) ವೇಳೆಗೆ ಮಹಿಳೆಯರಿಗೆ ವಿಶೇಷ ಉಡುಗೊರೆಯಾಗಿದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
15 ಕಂತುಗಳ ಹಣ ಪಡೆದುಕೊಂಡ ಮಹಿಳೆಯರು :
ಈಗಾಗಲೇ 15 ಕಂತುಗಳಲ್ಲಿ ಒಟ್ಟು ₹30,000 ರೂಪಾಯಿಯನ್ನು ಫಲಾನುಭವಿಗಳು ಪಡೆದಿದ್ದಾರೆ. ಡಿಸೆಂಬರ್ ಮಾಸದ ಹಣವನ್ನು ಜನವರಿ 14 (January 14)ರಿಂದ ಜಮೆ ಮಾಡಲು ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಈ ಸಂಬಂಧ ಆರ್ಥಿಕ ಇಲಾಖೆ ಮೂಲಕ ಹಣವನ್ನು ಮೊದಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.
ಫಲಾನುಭವಿಗಳು ಇ-ಕೆವೈಸಿ ಮಾಡಿಸುವುದು ಕಡ್ಡಾಯ:
ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡಲು, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್(Adhar link) ಮಾಡುವುದು ಮತ್ತು ಇ-ಕೆವೈಸಿ (e- kyc)ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಈ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನೂ ಸರ್ಕಾರ ಈಗಾಗಲೇ ಮಾಡುತ್ತಿದೆ.
ಯೋಜನೆಯಿಂದ ಆಗಿರುವ ಅನುಕೂಲಗಳು :
ಶಿವಮೊಗ್ಗ ಜಿಲ್ಲೆಯಲ್ಲಿ(Shivamogha district) ಈ ಯೋಜನೆ ಶೇಕಡಾ 90ರಷ್ಟು ಮಹಿಳೆಯರನ್ನು ಆವರಿಸಿದ್ದು, ಅನೇಕರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಉಪಯೋಗಿಸಿಕೊಂಡು ತಮ್ಮ ವೃತ್ತಿಗಳನ್ನು ಪ್ರಾರಂಭಿಸಿರುವುದರಿಂದ ಈ ಯೋಜನೆಯ ಪರಿಣಾಮವು ಮಹಿಳೆಯ ಆರ್ಥಿಕ ಹಿತಕ್ಕಾಗಿ ದೊಡ್ಡ ಪ್ರಭಾವವನ್ನು ಉಂಟುಮಾಡಿದೆ.
ಗೃಹಲಕ್ಷ್ಮಿ ಯೋಜನೆ ಮಹಿಳೆಯ ಆರ್ಥಿಕ ಅಭಿವೃದ್ಧಿಗೆ ಮಹತ್ವದ ದಾರಿದೀಪವಾಗಿದ್ದು, ಸಾಮಾಜಿಕ ಮತ್ತು ಆರ್ಥಿಕ(social and economic) ಸ್ಥಿತಿಗತಿಗಳಲ್ಲಿ ಬದಲಾವಣೆಯನ್ನು ತರಲು ಯಶಸ್ವಿಯಾಗಿದೆ. ಇದರಿಂದಾಗಿ ಕುಟುಂಬಗಳ ಹಿತಾಸಕ್ತಿಗೆ ಯೋಜನೆಯು ಹೊಸ ದಾರಿ ತೆರೆದಿದೆ ಎಂಬುದು ಸಿ.ಎಸ್. ಚಂದ್ರಭೂಪಾಲ ಅವರ ನಿಲುವಾಗಿದೆ.
ಮುಖ್ಯಮಂತ್ರೀಯ 5 ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖತೆಯನ್ನಾಗಿಸಿಕೊಂಡಿರುವ ಗೃಹಲಕ್ಷ್ಮಿ ಯೋಜನೆ, ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಪ್ರಗತಿಯ ದಶೆಯನ್ನು ಬದಲಾಯಿಸುತ್ತಿರುವ ಶಕ್ತಿಯ ಚಿಹ್ನೆಯಾಗಿಯೇ ಕಾಣಿಸುತ್ತಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




