ಉಪ್ಪಾರ ಅಭಿವೃದ್ದಿ ನಿಗಮದಿಂದ 2025-26 ನೇ ಸಾಲಿಗೆ ಗಂಗಾ ಕಲ್ಯಾಣ ಹಾಗೂ ಇತರ ಯೋಜನೆಗಳಿಗೆ ಅರ್ಜಿ ಆಹ್ವಾನ: ಆರ್ಥಿಕ ಸದೃಢತೆ ಹಾಗೂ ಶಿಕ್ಷಣೋನ್ನತಿಗೆ ಮಹತ್ತರ ಅವಕಾಶ
ಕರ್ನಾಟಕದಲ್ಲಿ (In karnataka) ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಅತೀವ ಪ್ರಾಮುಖ್ಯತೆ ನೀಡುತ್ತಿರುವ ರಾಜ್ಯ ಸರ್ಕಾರ, ಹಿಂದುಳಿದ ಜಾತಿಗಳ ಏಳಿಗೆಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿಕೊಂಡಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಉಪ್ಪಾರ ಅಭಿವೃದ್ದಿ ನಿಗಮವು (Karnataka Uppara Development Corporation) 2025–26 ನೇ ಸಾಲಿಗೆ ಬೇರೆ ಬೇರೆ ಸಹಾಯಧನ ಮತ್ತು ಸಾಲ ಆಧಾರಿತ ಯೋಜನೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಕರ್ನಾಟಕ ಸರ್ಕಾರದ ಉಪ್ಪಾರ ಸಮುದಾಯದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಯನ್ನು (Social and Educational development) ಗುರಿಯಾಗಿಟ್ಟುಕೊಂಡಿರುವ ಕರ್ನಾಟಕ ರಾಜ್ಯ ಉಪ್ಪಾರ ಅಭಿವೃದ್ದಿ ನಿಗಮವು 2025-26 ನೇ ಸಾಲಿಗೆ ನಾನಾ ಸಹಾಯಧನ ಮತ್ತು ನೇರಸಾಲ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದೆ. ರಾಜ್ಯದ ಉಪ್ಪಾರ ಸಮುದಾಯ ಮತ್ತು ಅದರ ಉಪಜಾತಿಗಳಿಗೆ ಮೀಸಲಾಗಿರುವ ಈ ಯೋಜನೆಗಳು ಸ್ವ ಉದ್ಯೋಗ, ಶಿಕ್ಷಣ, ಕೃಷಿ ಮತ್ತು ವಿದೇಶಿ ವ್ಯಾಸಂಗದಂತಹ ವಿವಿಧ ಕ್ಷೇತ್ರಗಳನ್ನು ಒಳಗೊಂಡಿವೆ. ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್ (Seva sindhu Portal) ಮುಖಾಂತರ ಜುಲೈ 3, 2025 ರೊಳಗೆ ಸಲ್ಲಿಸಬಹುದಾಗಿದೆ. ಹಾಗಿದ್ದರೆ ಲಭ್ಯವಿರುವ ಪ್ರಮುಖ ಯೋಜನೆಗಳು (Important schemes) ಯಾವುವು? ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಲಭ್ಯವಿರುವ ಪ್ರಮುಖ ಯೋಜನೆಗಳು (Important schemes) ಯಾವುವು?:
1. ಸ್ವಯಂ ಉದ್ಯೋಗ ನೇರಸಾಲ ಯೋಜನೆ (Self-employment Direct Loan Scheme) : ಬ್ಯಾಂಕ್ಗಳ ಸಹಯೋಗದಲ್ಲಿ ಬಡತನ ರೇಖೆಗೆ ಕೆಳಗಿನ ಹಾಗೂ ಮಧ್ಯಮವರ್ಗದ ಯುವಕರಿಗೆ ಸ್ವ ಉದ್ಯೋಗ ಸ್ಥಾಪನೆಗೆ ಹಣಕಾಸು ನೆರವು.
2. ಅರಿವು – ಶೈಕ್ಷಣಿಕ ನೇರಸಾಲ ಯೋಜನೆ (Knowledge – Educational Direct Loan Scheme) ಹೊಸದು ಮತ್ತು ನವೀಕರಣ) : ವ್ಯಾಸಂಗಕ್ಕೆ ಸಾಲ ಸಹಾಯ. ನವೀಕರಣದ ಮೂಲಕ ಹಿಂದಿನ ಸಾಲದ ಮುಂದುವರಿಕೆಯ ಅವಕಾಶ.
3. ಗಂಗಾ ಕಲ್ಯಾಣ ಯೋಜನೆ (Ganga Welfare Scheme) : ಕೃಷಿ ಚಟುವಟಿಕೆಗಳಿಗಾಗಿ ನೇರ ನೀರಾವರಿ ಸೌಲಭ್ಯ (ಪಂಪ್ಸೆಟ್) ವಿತರಣೆಯ ಯೋಜನೆ.
ದ. ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು.
ಇತರೆ ಜಿಲ್ಲೆಗಳಲ್ಲಿ ಕನಿಷ್ಠ 2 ಎಕರೆ ಜಮೀನು ಹೊಂದಿರುವವರಿಗೆ ಮಾತ್ರ ಅರ್ಹತೆ.
4. ಸ್ವಾವಲಂಬಿ ಸಾರಥಿ ಯೋಜನೆ(Self-reliant Sarathi scheme) : ತಮ್ಮದೇ ವಾಹನದ ಮೂಲಕ ಜೀವನೋಪಾಯ ಕಲ್ಪಿಸಿಕೊಳ್ಳಲು ಬಯಸುವವರಿಗೆ ಸಹಾಯಧನ.
5. ವಿದೇಶಿ ವ್ಯಾಸಂಗ ಯೋಜನೆ(Foreign Study Scheme) : ವಾರ್ಷಿಕ ಕುಟುಂಬ ಆದಾಯ 15 ಲಕ್ಷಕ್ಕೆ ಮಿತಿಗೊಳಿಸಿ ವಿದೇಶದಲ್ಲಿ ಪದವಿ, ಸ್ನಾತಕೋತ್ತರ ಅಥವಾ ಪಿಎಚ್ಡಿ ವ್ಯಾಸಂಗ ಮಾಡಲು ನೆರವು.
ವಯೋಮಿತಿ: ಸ್ನಾತಕೋತ್ತರರಿಗೆ 25 ವರ್ಷ, ಪಿಎಚ್ಡಿ ಅಭ್ಯರ್ಥಿಗಳಿಗೆ 27 ವರ್ಷ.
6. ಸ್ವತಂತ್ರ ಅಮೃತ ಮುನ್ನಡೆ ಯೋಜನೆ (Independent Amrit Advancement Project) : ಉದ್ಯಮಶೀಲತೆಯನ್ನು ಉತ್ತೇಜಿಸುವ ನವೀನ ಯೋಜನೆ.
ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು (Qualifications) ಯಾವುವು?:
ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು.
ಉಪ್ಪಾರ ಅಥವಾ ಉಪಜಾತಿಗಳಿಗೇ ಮೀಸಲಾದ ಯೋಜನೆಗಳು.
ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರ ಕಡ್ಡಾಯ.
ವಯೋಮಿತಿ: ಸಾಮಾನ್ಯ ಯೋಜನೆಗಳಿಗೆ 18 ರಿಂದ 55 ವರ್ಷ,
ಅರಿವು ಯೋಜನೆಗೆ: 18 ರಿಂದ 30 ವರ್ಷ (ಆದಾಯ ಮಿತಿ: ₹3.5 ಲಕ್ಷ).
ಸ್ವಾವಲಂಬಿ ಸಾರಥಿಗೆ: 21 ರಿಂದ 45 ವರ್ಷ (ಆದಾಯ ಮಿತಿ: ಗ್ರಾಮಾಂತರ ₹98 ಸಾವಿರ, ನಗರ ₹1.20 ಲಕ್ಷ).
ಅರ್ಜಿದಾರರು ತಮ್ಮ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯನ್ನು ಆಧಾರ್ ಸಂಖ್ಯೆಗೆ ಲಿಂಕ್ (Adhar Number link) ಮಾಡಿರಬೇಕು.
ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಸೌಲಭ್ಯ ಲಭ್ಯ.
ಅಭ್ಯರ್ಥಿಗಳು ಈ ಹಿಂದೆ ಸರ್ಕಾರದ ಅಥವಾ ನಿಗಮದ ಯಾವುದೇ ಯೋಜನೆಯಡಿ ಸೌಲಭ್ಯ ಪಡೆದುಕೊಂಡಿರಬಾರದು.
ಮೀಸಲಾತಿ: ಮಹಿಳೆಗಳಿಗೆ 33%, ವಿಕಲಚೇತನರಿಗೆ 5%, ತೃತೀಯ ಲಿಂಗಿಗಳಿಗೆ 1%.
ಮೀಸಲಾತಿ ನಿಗದಿಗಳು ಹೀಗಿವೆ:
ಮಹಿಳೆಗಳಿಗೆ: 33%
ವಿಕಲಚೇತನರಿಗೆ: 5%
ತೃತೀಯ ಲಿಂಗಿಗಳಿಗೆ: 1%
ಅರ್ಜಿ ಸಲ್ಲಿಸುವ ವಿಧಾನ(Steps for Applying Application) :
ಅರ್ಜಿ ಸಲ್ಲಿಕೆಗೆ ಅರ್ಜಿದಾರರು Seva Sindhu ಪೋರ್ಟಲ್ ಮೂಲಕ ಅಥವಾ www.kaushalkar.comನಲ್ಲಿ ಲಾಗಿನ್ ಆಗಿ ತಮ್ಮ ವಿವರಗಳನ್ನು ನಮೂದಿಸಬೇಕು. ಅರ್ಜಿ ಸಲ್ಲಿಸಲು ಇಚ್ಛಿಸುವವರು ಬ್ಯಾಂಕ್ ಪಾಸ್ ಬುಕ್, ಆಧಾರ್, ಜಾತಿ, ಆದಾಯ ಪ್ರಮಾಣ ಪತ್ರಗಳಲ್ಲಿ ವಿವರಗಳು ಹೋಲಿಕೆಯಾಗುವಂತೆ ನೋಡಿಕೊಳ್ಳಬೇಕು.
ಅರ್ಜಿ ಸಲ್ಲಿಸಬಹುದಾದ ಕೇಂದ್ರಗಳು:
ಬೆಂಗಳೂರು-ಒನ್
ಕರ್ನಾಟಕ-ಒನ್
ಅಟಲ್ ಜನಸ್ನೇಹಿ ಕೇಂದ್ರಗಳು
ನಾಗರೀಕ ಸೇವಾ ಕೇಂದ್ರಗಳು
ಅಂತಿಮ ದಿನಾಂಕ(Last date) :
ಜುಲೈ 3, 2025 – ಅರ್ಜಿ ಸಲ್ಲಿಸಲು ಕೊನೆಯ ದಿನ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ನಿಗಮದ ಅಧಿಕೃತ ವೆಬ್ಸೈಟ್: https://upparadevelopment.karnataka.gov.in
ಜಿಲ್ಲಾ ಕಚೇರಿ ದೂರವಾಣಿ: 08182–229634
ಸಂಪರ್ಕ ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 5:30 ರವರೆಗೆ.
ಉಪ್ಪಾರ ಸಮುದಾಯದ ಪ್ರಗತಿ ಮತ್ತು ಸಬಲೀಕರಣದತ್ತ ಈ ಯೋಜನೆಗಳು ನಿಶ್ಚಿತವಾಗಿ ಬೆಳಕಿನ ದಾರಿ ತೋರಲಿವೆ. ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಿ, ಸರ್ಕಾರದ ಸೌಲಭ್ಯಗಳನ್ನು (Government facilities) ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.