ಕರ್ನಾಟಕ ಸರ್ಕಾರದ ನೂತನ ಸೇವೆ: ಆನ್ಲೈನ್ ಮೂಲಕ ನಿಮ್ಮ ಭೂಮಿಯ ಸಂಪೂರ್ಣ ವಿವರ ಪಡೆಯಲು ಸುಲಭ ವಿಧಾನ!
ರಾಜ್ಯದ ರೈತರು, ಭೂಮಾಲಿಕರು, ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ, ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ (Revenue Department, Government of Karnataka) ಆಧುನಿಕ ತಂತ್ರಜ್ಞಾನವನ್ನು ಬಳಸಿ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ವ್ಯವಸ್ಥೆಯ ಮೂಲಕ ನೀವು ಮನೆಯಲ್ಲೇ ಕುಳಿತು ನಿಮ್ಮ ಜಮೀನಿನ ಭೌಗೋಳಿಕ ಮತ್ತು ಕಂದಾಯ ಸಂಬಂಧಿತ ಮಾಹಿತಿ ಪಡೆದುಕೊಳ್ಳಬಹುದು. ಜಮೀನಿಗೆ ಸಂಬಂಧಪಟ್ಟ ಈ ನಕ್ಷೆಯನ್ನು ನೋಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಈ ವ್ಯವಸ್ಥೆಯಲ್ಲಿ ಪ್ರಮುಖವಾಗಿ, ನಿಮ್ಮ ಊರಿನ ಕಂದಾಯ ನಕ್ಷೆಗಳನ್ನು (Revenue Map) ಡೌನ್ಲೋಡ್ (Download) ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ನಕ್ಷೆಗಳು ಜಮೀನಿನ ಗಡಿ, ಕಾಲುದಾರಿ, ಬಂಡಿದಾರಿ, ಕಾಲುವೆ, ತೆರೆದ ಬಾವಿ, ಗುಡ್ಡ, ಮನೆ ಮುಂತಾದವುಗಳ ಕುರಿತ ಸಂಪೂರ್ಣ ಚಿತ್ರಣವನ್ನು ನೀಡುತ್ತದೆ. ಇದರಿಂದ ಭೂಮಿಯ ಮಾಲಿಕತ್ವ, ನಕ್ಷಾ ಮತ್ತು ಹಕ್ಕುಗಳಿಗೆ ಸಂಬಂಧಿಸಿದ ವಿವಾದಗಳನ್ನು ಪರಿಹರಿಸಿಕೊಳ್ಳಲು ಸಹಾಯವಾಗುತ್ತದೆ.
ಪ್ರಾಚೀನ ಕಾಲದಿಂದಲೂ (Ancient period) ಯಾವುದೇ ಆಡಳಿತ ವ್ಯವಸ್ಥೆಯಲ್ಲಾಗಲಿ, ಭೂನಿರ್ವಹಣೆ ಅತ್ಯಂತ ಪ್ರಾಧಾನ್ಯ ಪಡೆದಿದ್ದು, ಚಕ್ರವರ್ತಿ ರಾಜರು, ಸಾಮ್ರಾಜ್ಯ ಆಡಳಿತಗಾರರು ಹಾಗೂ ಪ್ರಜಾಪ್ರಭುತ್ವ ಸರ್ಕಾರಗಳ ಅವಧಿಯಲ್ಲಿಯೂ ಭೂಮಿಯ ಮೇಲಿನ ಆಡಳಿತ ಮುಖ್ಯಭಾಗವಾಗಿತ್ತು.ಇನ್ನು, ಭೂನಿರ್ವಹಣೆ, ಭೂಕಂದಾಯ ಸಂಗ್ರಹಣೆ, ಭೂಮಾಲಿಕತ್ವ ನಿರ್ಬಂಧನೆ, ಮತ್ತು ಭೂಸ್ವಾಧೀನ ಹಕ್ಕುಗಳು ಇತಿಹಾಸದಲ್ಲಿಯೇ ಸರ್ಕಾರದ (Government) ಪ್ರಮುಖ ಜವಾಬ್ದಾರಿಗಳಾಗಿವೆ. ಹಾಗೆ ಪ್ರಾಚೀನ ಭಾರತದಲ್ಲಿ ಕೇವಲ ಎರಡು ಪ್ರಮುಖ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದವು:
ಭೂನಿರ್ವಹಣೆ ಮತ್ತು ಭೂಕಂದಾಯ ಇಲಾಖೆ :
ಇದು ರಾಜ್ಯದ ಆಂತರಿಕ ಆಡಳಿತ, ರಾಜಸ್ವ ಸಂಗ್ರಹಣೆ, ಮತ್ತು ಭೂಮಿಯನ್ನು ನಿರ್ವಹಿಸುವ ಕೆಲಸ ನಿರ್ವಹಿಸುತ್ತಿತ್ತು.
ಭೂಸೇನೆಯ ರಕ್ಷಣಾ ಇಲಾಖೆ (Army Department of Defense) :
ರಾಜ್ಯವನ್ನು ಬಾಹ್ಯ ದಾಳಿಯ ವಿರುದ್ಧ ರಕ್ಷಿಸುವ ಜವಾಬ್ದಾರಿಯನ್ನು ಹೊಂದಿತ್ತು.
ಕಾಲಕ್ರಮೇಣ ರಾಜ್ಯ ಆಡಳಿತ ಹೆಚ್ಚು ಸಂಕೀರ್ಣಗೊಂಡಂತೆ ಹಲವು ವಿಭಜಿತ ಇಲಾಖೆಗಳು (Divided departments) ಉದ್ಭವಿಸಿದರೂ, ಕಂದಾಯ ಇಲಾಖೆ ಇಂದಿಗೂ ಆಡಳಿತ ವ್ಯವಸ್ಥೆಯ ಮೂಲಭೂತ ಅಂಗವಾಗಿದೆ. ಇದು ಜನ ಸಾಮಾನ್ಯರ ಭೂಸ್ವಾಮ್ಯ, ಕೃಷಿ, ಮತ್ತು ಆರ್ಥಿಕ ಬೆಳವಣಿಗೆಗೆ ನೇರ ಸಂಬಂಧ ಹೊಂದಿರುವುದರಿಂದ, “ಮಾತೃ ಇಲಾಖೆ”ಯೆಂದು ಕರೆಯಲಾಗುತ್ತದೆ.
ಕರ್ನಾಟಕದ ಜನರಿಗೆ ಪ್ರತಿ ಹಳ್ಳಿಯ ಕಂದಾಯ ನಕ್ಷೆಯನ್ನು ಆನ್ ಲೈನ್ (Online) ಮೂಲಕವೇ ಡೌನ್ ಲೋಡ್ ಮಾಡಿಕೊಳ್ಳುವುದಕ್ಕೆ ಕಂದಾಯ ಇಲಾಖೆಯು ಅವಕಾಶ ನೀಡಿದೆ.
ಹಾಗಿದ್ದರೆ,ಆನ್ಲೈನ್ ಕಂದಾಯ ನಕ್ಷೆ ಪಡೆಯುವುದು ಹೇಗೆ?:
ಈ ಸೇವೆಯನ್ನು ಬಳಸಲು ನೀವು ಕೆಳಗಿನ ಹಂತಗಳನ್ನು ಅನುಸರಿಸಬೇಕು.
ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಈ ಲಿಂಕ್ ಕ್ಲಿಕ್ ಮಾಡಿ, https://landrecords.karnataka.gov.in/service3/
ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಮತ್ತು ಗ್ರಾಮ ಆಯ್ಕೆ ಮಾಡಿ.
ಗ್ರಾಮದ ಸಂಪೂರ್ಣ ಕಂದಾಯ ನಕ್ಷೆಯನ್ನು ಪಿಡಿಎಫ್ ರೂಪದಲ್ಲಿ ಪಡೆಯಬಹುದು.
ನೀಮಗೆ ಬೇಕಾದ ಹಳ್ಳಿಯ ನಕ್ಷೆಯನ್ನು (Map) ಡೌನ್ಲೋಡ್ ಮಾಡಿಕೊಳ್ಳಿ.
ಈ ಸೇವೆಯ ಪ್ರಯೋಜನಗಳೇನು(Benefits)?:
ಸಾಧಾರಣ ಜನರಿಗೂ ಸುಲಭ ಪ್ರವೇಶ ಸಿಗಲಿದ್ದು, ಭೂಮಿಯ ನಕ್ಷೆ ಮತ್ತು ಮಾಹಿತಿಯನ್ನು ಕೂತಲ್ಲಿಯೇ ಪಡೆದುಕೊಳ್ಳಬಹುದು.
ನೀವು ನಿಮ್ಮ ಜಮೀನಿನ ಗಡಿ, ಅದಕ್ಕೆ ಸೇರಿದ ಕಾಲುದಾರಿ, ಬಂಡಿದಾರಿ, ತೆರೆದ ಬಾವಿ ಮುಂತಾದ ಎಲ್ಲ ವಿವರಗಳನ್ನು ವೀಕ್ಷಿಸಬಹುದು.
ಸರ್ವೆ ಸಂಖ್ಯೆ ಮತ್ತು ಭೌಗೋಳಿಕ ಗಡಿಗಳನ್ನು (Survey number and geographical boundaries) ಸ್ಪಷ್ಟವಾಗಿ ಕಂಡುಕೊಳ್ಳುವುದರಿಂದ ಭೂಮಿಯ ಹಕ್ಕುಗಳಿಗೆ ಸಂಬಂಧಿಸಿದ ವಿವಾದಗಳನ್ನು ಸುಲಭವಾಗಿ ಪರಿಹರಿಸಬಹುದು.
ಇನ್ನು, ಇದರಿಂದ ಕೃಷಿ ಯೋಜನೆಗಳು, ಭೂಮಿಯೋಜನೆ, ಮತ್ತು ಭೂ ಅಭಿವೃದ್ಧಿಯ ಪ್ರಕ್ರಿಯೆ ಸುಗಮಗೊಳ್ಳುತ್ತದೆ.
ನಿಮ್ಮ ಹಿತಕ್ಕಾಗಿ ಸರಕಾರದ ಹೊಸ ಹೆಜ್ಜೆ!
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (State governments) ಭೂ ಮಾಹಿತಿಯನ್ನು ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯಗೊಳಿಸುವ ಮೂಲಕ, ರೈತರ ಅನುಕೂಲಕ್ಕೆ ಹೆಚ್ಚಿನ ಒತ್ತು ನೀಡುತ್ತಿವೆ. ಈ ಸೇವೆಯು ಭೂಮಿಯ ಡಿಜಿಟಲೀಕರಣದ (Digitalization) ಪ್ರಕ್ರಿಯೆಯ ಪ್ರಮುಖ ಭಾಗವಾಗಿದೆ ಮತ್ತು ಮುಂದಿನ ದಿನಗಳಲ್ಲಿ ಕೃಷಿ ಮತ್ತು ಭೂ ಹಕ್ಕು ನಿರ್ವಹಣೆಗೆ ಹೊಸ ದಾರಿ ಮಾಡಿಕೊಡಲಿದೆ.
ಈ ಆಧುನಿಕ ಸೇವೆಯ ಲಾಭವನ್ನು ಪಡೆದುಕೊಳ್ಳಲು ತಡ ಮಾಡದೆ https://landrecords.karnataka.gov.in/service3/ ಗೆ ಭೇಟಿ ನೀಡಿ ಮತ್ತು ನಿಮ್ಮ ಭೂಮಿಯ ಕಂದಾಯ ನಕ್ಷೆಯನ್ನು ಡೌನ್ಲೋಡ್ ಮಾಡಿ.
ನಿಮ್ಮ ಭೂಮಿಯ ಮಾಹಿತಿ ಇದೀಗ ನಿಮ್ಮ ಕೈಯಲ್ಲಿ!.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




