ಕರ್ನಾಟಕ ಸರ್ಕಾರಿ ನೌಕರನೊಬ್ಬ ವೃತ್ತಿಯಲ್ಲಿರುವಾಗಲೇ ಅಕಾಲಿಕ ಮರಣ ಹೊಂದಿದರೆ, ಅವಲಂಬಿತ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಗ್ರೂಪ್ ಸಿ ಅಥವಾ ಡಿ ಹುದ್ದೆಯಲ್ಲಿ ನೇಮಕಾತಿ ಮಾಡಿಕೊಡಲಾಗುತ್ತದೆ. ಈ ಸೌಲಭ್ಯ ಪಡೆಯಲು ಮರಣದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಬೇಕು ಮತ್ತು ನಿಗದಿತ ಎಲ್ಲಾ ದಾಖಲೆಗಳನ್ನು ಜೊತೆಯಲ್ಲಿ ಸಲ್ಲಿಸಬೇಕು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಮೊದಲು ತಿಳಿದಿರಲಿ
- ನಿಯಮ 5ರ ಅನ್ವಯ ನಮೂನೆ-1ರಲ್ಲಿ ಅರ್ಜಿ ಸಲ್ಲಿಸಬೇಕು
- ನಮೂನೆ-2ರಲ್ಲಿ ಸಂಪೂರ್ಣ ವರದಿ ಸಲ್ಲಿಸಬೇಕು
- ದಿವಂಗತ ನೌಕರನ ಮರಣ ದಿನಾಂಕ, ಅಭ್ಯರ್ಥಿಯ ಜನ್ಮ ದಿನಾಂಕ ಸೇರಿದಂತೆ ಎಲ್ಲಾ ವಿವರಗಳನ್ನು ಸ್ಪಷ್ಟವಾಗಿ ತುಂಬಬೇಕು
ಅನುಕಂಪದ ನೇಮಕಾತಿಗೆ ಕಡ್ಡಾಯ ದಾಖಲೆಗಳ ಸಂಪೂರ್ಣ ಚೆಕ್ಲಿಸ್ಟ್
- ದಿವಂಗತ ಸರ್ಕಾರಿ ನೌಕರನ ಮರಣ ಪ್ರಮಾಣ ಪತ್ರ (ಒರಿಜಿನಲ್ ಅಥವಾ ದೃಢೀಕೃತ ಪ್ರತಿ)
- ಮೃತ ನೌಕರನ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ (ತಹಶೀಲ್ದಾರ್ ನೀಡಿದ್ದು)
- ಅಭ್ಯರ್ಥಿಯು ಮೃತ ನೌಕರನ ಅವಲಂಬಿತ ಎಂಬುದಕ್ಕೆ ಸಂಬಂಧ ಪತ್ರ (ಜನ್ಮ ಪ್ರಮಾಣ ಪತ್ರ/ಕುಟುಂಬ ರೇಷನ್ ಕಾರ್ಡ್/ಆಧಾರ್)
- ಅಭ್ಯರ್ಥಿಯ ಎಲ್ಲಾ ಶೈಕ್ಷಣಿಕ ಅರ್ಹತಾ ಪ್ರಮಾಣ ಪತ್ರಗಳು (SSLC, PUC, ಪದವಿ ಅಂಕಪಟ್ಟಿಗಳು)
- ನಿಯಮ 4(3) ಅನ್ವಯ ಅಭ್ಯರ್ಥಿಯ ವಿದ್ಯಾರ್ಹತೆಯ ವಿವರ
- ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ (ತಹಶೀಲ್ದಾರ್ ನೀಡಿದ್ದು)
- ಕುಟುಂಬದ ಯಾವ ಸದಸ್ಯರೂ ಸರ್ಕಾರಿ/ಅರೆ ಸರ್ಕಾರಿ ಉದ್ಯೋಗದಲ್ಲಿಲ್ಲ ಎಂಬ ತಹಶೀಲ್ದಾರ್ ಪ್ರಮಾಣ ಪತ್ರ
- ಅಭ್ಯರ್ಥಿಗೆ ಕುಟುಂಬದ ಇತರ ಸದಸ್ಯರಿಂದ ಯಾವುದೇ ಅಭ್ಯಂತರವಿಲ್ಲ ಎಂಬ ಒಪ್ಪಿಗೆ ಪತ್ರ (ಎಲ್ಲಾ ಜೀವಂತ ಸದಸ್ಯರ ಸಹಿ)
- ಅಭ್ಯರ್ಥಿಯ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣವಿಲ್ಲ ಎಂಬ ಪೊಲೀಸ್ ವರದಿ
- ಅಭ್ಯರ್ಥಿ ವಿಧವೆಯಾಗಿದ್ದಲ್ಲಿ ಮರು ಮದುವೆಯಾಗಿಲ್ಲ ಎಂಬ ತಹಶೀಲ್ದಾರ್ ಪ್ರಮಾಣ ಪತ್ರ
- ಅಭ್ಯರ್ಥಿ ಮಗಳು/ಸಹೋದರಿ ಆಗಿದ್ದಲ್ಲಿ ಅವಿವಾಹಿತೆ ಎಂಬ ನಿಯಮ 3(2) ಅನ್ವಯ ತಹಶೀಲ್ದಾರ್ ಪ್ರಮಾಣ ಪತ್ರ
- ಸ್ಥಳೀಯ ಇಬ್ಬರು ಗಣ್ಯ ವ್ಯಕ್ತಿಗಳಿಂದ ನಡವಳಿಕೆ ಪ್ರಮಾಣ ಪತ್ರ
- ದಿವಂಗತ ನೌಕರನ ಸೇವಾ ಪುಸ್ತಕದ ದೃಢೀಕೃತ ಪ್ರತಿ
- ಕುಟುಂಬ ಪಿಂಚಣಿ ಮಂಜೂರಾತಿ ಆದೇಶದ ಪ್ರತಿ (ಇದ್ದಲ್ಲಿ)
- SSLC ಮತ್ತು ಉನ್ನತ ಶಿಕ್ಷಣದಲ್ಲಿ ಕನ್ನಡ ಭಾಷೆಯನ್ನು ಓದಿರುವ ಬಗ್ಗೆ ಪ್ರಮಾಣ ಪತ್ರ (ಕನ್ನಡ ಭಾಷಾ ಪರೀಕ್ಷೆಗೆ)
ಮುಖ್ಯ ಸೂಚನೆಗಳು
- ಎಲ್ಲಾ ದಾಖಲೆಗಳು ದೃಢೀಕೃತ ಪ್ರತಿಗಳಾಗಿರಬೇಕು
- ಅರ್ಜಿ ಸಲ್ಲಿಸುವಾಗ ಮೂಲ ದಾಖಲೆಗಳನ್ನು ಪರಿಶೀಲನೆಗೆ ಹಾಜರುಪಡಿಸಬೇಕು
- ಮರಣದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸದಿದ್ದರೆ ಸೌಲಭ್ಯ ರದ್ದಾಗುವ ಸಾಧ್ಯತೆ
- ಎಲ್ಲಾ ಪ್ರಮಾಣ ಪತ್ರಗಳು ತಹಶೀಲ್ದಾರ್ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದಿರಬೇಕು

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ತುಮಕೂರಿನ ಸರ್ಕಾರಿ ನರ್ಸಿಂಗ್ ಕಾಲೇಜಿನಿಂದ B.Sc (Nursing) ಪದವಿ ಪಡೆದಿರುವ ಇವರು, ಸಾರ್ವಜನಿಕ ಜಾಗೃತಿ ಮತ್ತು ಮಾಹಿತಿ ನೀಡುವ ಆಸಕ್ತಿಯಿಂದಾಗಿ ಡಿಜಿಟಲ್ ಪತ್ರಿಕೋದ್ಯಮ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ಡಿಜಿಟಲ್ ಮಾಧ್ಯಮ ರಂಗದಲ್ಲಿ 3 ವರ್ಷಗಳ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ನೇಮಕಾತಿಗಳು ಮತ್ತು ಶೈಕ್ಷಣಿಕ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ನಿರುದ್ಯೋಗಿ ಯುವಕ-ಯುವತಿಯರಿಗೆ ಯಾವುದೇ ಗೊಂದಲವಿಲ್ಲದೆ, ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (Verified) ನಿಖರ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದೇ ಇವರ ಬರವಣಿಗೆಯ ಶೈಲಿಯಾಗಿದೆ.


WhatsApp Group




Leave a Reply