ಭಾರತವು ಕೃಷಿಪ್ರಧಾನ ದೇಶ. ಸುಮಾರು 60% ಜನರು ನೇರವಾಗಿ ಅಥವಾ ಪರೋಕ್ಷವಾಗಿ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಕಳೆದ ಕೆಲವು ದಶಕಗಳಲ್ಲಿ, ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಅವಲಂಬನೆಯಿಂದ ಮಣ್ಣಿನ ಆರೋಗ್ಯ ಹಾಳಾಗಿದ್ದು, ಕೃಷಿ ಉತ್ಪಾದನಾ ವೆಚ್ಚ ಗಗನಕ್ಕೇರಿದೆ. ಪರಿಸರ ಮಾಲಿನ್ಯ, ಹವಾಮಾನ ಬದಲಾವಣೆ ಮತ್ತು ರೈತರ ಸಾಲದ ಬಾಧ್ಯತೆಗಳು ಕೃಷಿಯನ್ನು ಸಂಕಷ್ಟದ ಹಾದಿಗೆ ತಳ್ಳಿವೆ.
ಈ ಹಿನ್ನಲೆಯಲ್ಲಿ, ಪರಿಸರ ಸ್ನೇಹಿ ಮತ್ತು ದೀರ್ಘಕಾಲೀನ ಕೃಷಿ ಪದ್ಧತಿಗಳತ್ತ ಹಿಂದಿರುಗುವ ಅಗತ್ಯತೆಯು ತುರ್ತಾಗಿದೆ. ಈ ಸಂದರ್ಭದಲ್ಲೇ, ಭಾರತ ಸರ್ಕಾರವು ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ (National Mission on Natural Farming – NMNF) ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು 2024ರ ನವೆಂಬರ್ 25ರಂದು ಅನುಮೋದಿಸಿದೆ.
ಈ ಮಿಷನ್ನ ಉದ್ದೇಶ, ರಾಸಾಯನಿಕ ಮುಕ್ತ, ಹವಾಮಾನ-ಸ್ಥಿರ ಮತ್ತು ರೈತ-ಕೇಂದ್ರಿತ ಕೃಷಿ ಪದ್ಧತಿಯನ್ನು ದೇಶದಾದ್ಯಂತ ಪ್ರೋತ್ಸಾಹಿಸುವುದು.
NMNF ಮಿಷನ್ನ ಗುರಿ ಏನು?:
ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ನ ಪ್ರಮುಖ ಗುರಿಗಳು ಕೆಳಗಿನಂತಿವೆ,
ಮಣ್ಣಿನ ಆರೋಗ್ಯ ಪುನರುಜ್ಜೀವನ:
ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಿ, ಮಣ್ಣಿನ ಜೀವಸಂಕುಲ (ಮೈಕ್ರೋಬಯೋಮ್) ಅನ್ನು ಪುನರುಜ್ಜೀವನಗೊಳಿಸುವುದು.
ಉತ್ಪಾದನಾ ವೆಚ್ಚ ಕಡಿತ:
ಜೀವಾಮೃತ, ಬೀಜಾಮೃತ, ಸ್ಥಳೀಯ ಬೀಜ ಬಳಕೆ ಮುಂತಾದ ಸ್ಥಳೀಯ ಸಂಪನ್ಮೂಲಗಳಿಂದ ಕೃಷಿ ವೆಚ್ಚವನ್ನು ಇಳಿಸುವುದು.
ಹವಾಮಾನ ಸ್ಥಿತಿಸ್ಥಾಪಕ ಕೃಷಿ:
ಕಡಿಮೆ ನೀರಿನ ಬಳಕೆ, ಸ್ಥಳೀಯ ಬೆಳೆಗಳು ಮತ್ತು ಸಾವಯವ ವಿಧಾನಗಳ ಮೂಲಕ ಹವಾಮಾನ ಬದಲಾವಣೆಯ ಸವಾಲುಗಳಿಗೆ ಪ್ರತಿರೋಧಕ ಶಕ್ತಿ ಪಡೆಯುವುದು.
ರಾಸಾಯನಿಕ ಮುಕ್ತ ಆಹಾರ ಉತ್ಪಾದನೆ:
ಗ್ರಾಹಕರಿಗೆ ಸುರಕ್ಷಿತ, ಪೌಷ್ಟಿಕ ಮತ್ತು ಪರಿಸರ ಸ್ನೇಹಿ ಆಹಾರ ಒದಗಿಸುವುದು.
ಮಿಷನ್ನಡಿ, 7.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಲು ಹಾಗೂ 15,000 ಕ್ಲಸ್ಟರ್ಗಳು ನಿರ್ಮಿಸಲು ಯೋಜನೆ ಇದೆ. ಅಲ್ಲದೆ, 1 ಕೋಟಿ ರೈತರಲ್ಲಿ ಜಾಗೃತಿ ಮೂಡಿಸುವುದು ಈ ಯೋಜನೆಯ ಪ್ರಮುಖ ಅಂಶವಾಗಿದೆ.
ಅಧಿಕೃತ ಮಾಹಿತಿಗಾಗಿ: naturalfarming.dac.gov.in
ಇನ್ನು, ನೈಸರ್ಗಿಕ ಕೃಷಿ ಕೇವಲ ವಿಧಾನವಲ್ಲ, ಅದು ಜ್ಞಾನ ಆಧಾರಿತ ಜೀವನ ಶೈಲಿ ಆಗಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರವು ರೈತರ ಶಕ್ತಿ ಮತ್ತು ಸ್ಥಳೀಯ ಜ್ಞಾನವನ್ನು ಬಲಪಡಿಸುವ ಹಲವು ಹಂತಗಳನ್ನು ರೂಪಿಸಿದೆ.
ಜ್ಞಾನ ಮತ್ತು ತಾಂತ್ರಿಕ ಬೆಂಬಲ:
ರೈತರಿಂದಲೇ ಕಲಿಯುವ ಫಾರ್ಮ್ ಟು ಫಾರ್ಮರ್ ಮಾದರಿ.
ನೈಸರ್ಗಿಕ ಕೃಷಿ ಅನುಭವ ಹೊಂದಿದ ರೈತರ ಜ್ಞಾನವನ್ನು ಇತರರಿಗೂ ಹಂಚಿಕೊಳ್ಳುವ ವ್ಯವಸ್ಥೆ.
ಸತತ ಮಾರ್ಗದರ್ಶನಕ್ಕಾಗಿ ಕೃಷಿ ಇಲಾಖೆ ಮತ್ತು ವಿಜ್ಞಾನ ಕೇಂದ್ರಗಳಿಂದ ತಾಂತ್ರಿಕ ಬೆಂಬಲ.
ತರಬೇತಿ ಮತ್ತು ಮಾದರಿ ಪ್ರಾತ್ಯಕ್ಷಿಕೆ ಫಾರ್ಮ್ಗಳು:
ದೇಶಾದ್ಯಂತ 2,000 ಮಾದರಿ ನೈಸರ್ಗಿಕ ಫಾರ್ಮ್ಗಳು KVK ಹಾಗೂ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪನೆ.
18.75 ಲಕ್ಷ ರೈತರಿಗೆ ತರಬೇತಿ ನೀಡುವ ಗುರಿ.
ಸಮುದಾಯದ ಪಾತ್ರ:
30,000 ಕೃಷಿ ಸಖಿಯರು / ಸಮುದಾಯ ಸಂಪನ್ಮೂಲ ವ್ಯಕ್ತಿಗಳು (CRPs) ನಿಯೋಜನೆ.
ರೈತರಿಗೆ ಜಾಗೃತಿ, ತಾಂತ್ರಿಕ ಮಾರ್ಗದರ್ಶನ ಮತ್ತು ಸ್ಥಳೀಯ ಅನುಷ್ಠಾನದಲ್ಲಿ ನೆರವು.
ಮಾರುಕಟ್ಟೆ ಮತ್ತು ಪ್ರಮಾಣೀಕರಣ:
ರೈತ-ಸ್ನೇಹಿ ಪ್ರಮಾಣೀಕರಣ ವಿಧಾನ.
ನೈಸರ್ಗಿಕ ಕೃಷಿ ಉತ್ಪನ್ನಗಳಿಗೆ ಏಕೈಕ ರಾಷ್ಟ್ರೀಯ ಬ್ರ್ಯಾಂಡ್ ರಚನೆ.
ರೈತರಿಗೆ ಹೆಚ್ಚು ಬೆಲೆ ಹಾಗೂ ಗ್ರಾಹಕರಿಗೆ ವಿಶ್ವಾಸಾರ್ಹ ಉತ್ಪನ್ನಗಳ ಖಾತರಿ.
ಹಣಕಾಸು ನೆರವು ಮತ್ತು ಪ್ರೋತ್ಸಾಹಧನ:
NMNF ಯೋಜನೆಯಡಿ ರೈತರಿಗೆ ನೇರ ಆರ್ಥಿಕ ನೆರವು ನೀಡಲಾಗುತ್ತಿದೆ.
ಪ್ರತಿ ಎಕರೆಗೆ ₹4,000 ನೆರವು, ಎರಡು ವರ್ಷಗಳವರೆಗೆ.
ಈ ಹಣವನ್ನು ಜೀವಾಮೃತ, ಬೀಜಾಮೃತ, ಗನಜೀವಾಮೃತ ಮುಂತಾದ ಸಾವಯವ ಒಳಹರಿವುಗಳ ತಯಾರಿಕೆಗೆ ಬಳಸಬಹುದು.
ಗರಿಷ್ಠ ಒಂದು ಎಕರೆ ಮಿತಿ: ಪ್ರಾರಂಭಿಕ ಹಂತದಲ್ಲಿ ರೈತರು ಒಂದು ಎಕರೆ ಭೂಮಿಯಲ್ಲಿ ಪ್ರಯೋಗಾತ್ಮಕವಾಗಿ ನೈಸರ್ಗಿಕ ಕೃಷಿ ಪ್ರಾರಂಭಿಸಬಹುದು.
ಅರ್ಹತಾ ಮಾನದಂಡಗಳು ಹೀಗಿವೆ:
ಭಾರತದ ಎಲ್ಲ ವರ್ಗದ ರೈತರು (ಸಣ್ಣ, ಅತಿ ಸಣ್ಣ, ಮಧ್ಯಮ, ದೊಡ್ಡ) ಅರ್ಹರು.
ಯಾವುದೇ ಶೈಕ್ಷಣಿಕ ಅರ್ಹತೆ ಅಗತ್ಯವಿಲ್ಲ.
ಎನ್ಜಿಒಗಳು, ಸಂಶೋಧನಾ ಸಂಸ್ಥೆಗಳು ಮತ್ತು ಗ್ರಾಮೀಣ ಉದ್ಯಮಿಗಳೂ ಸಹ ಭಾಗವಹಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ:
ಆಫ್ಲೈನ್ ವಿಧಾನ:
ಜಿಲ್ಲಾ/ತಾಲೂಕು ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ.
ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ.
ರಾಜ್ಯ ಕೃಷಿ ಇಲಾಖೆಯಿಂದ ಅನುಮೋದನೆ ನಂತರ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ.
ಆನ್ಲೈನ್ ವಿಧಾನ:
naturalfarming.dac.gov.in ಗೆ ಭೇಟಿ ನೀಡಿ.
ರೈತರ ವಿವರಗಳನ್ನು ನಮೂದಿಸಿ ಅರ್ಜಿ ಸಲ್ಲಿಸಿ.
ಅರ್ಜಿ ಸ್ಥಿತಿ ಮತ್ತು ಪಾವತಿ ಮಾಹಿತಿ ವೆಬ್ಸೈಟ್ ಮೂಲಕ ಲಭ್ಯ.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು ಯಾವುವು?:
ಆಧಾರ್ ಕಾರ್ಡ್
ಭೂಮಿ ದಾಖಲೆ / RTC
ಬ್ಯಾಂಕ್ ಖಾತೆ ವಿವರ
ಪಾಸ್ಪೋರ್ಟ್ ಫೋಟೋ
ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ)
ಭಾರತದ ಕೃಷಿಗೆ ನೂತನ ದಿಕ್ಕು:
ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ (NMNF) ಕೇವಲ ಒಂದು ಯೋಜನೆಯಷ್ಟೇ ಅಲ್ಲ, ಅದು ಭಾರತೀಯ ಕೃಷಿಯಲ್ಲಿ ಕ್ರಾಂತಿಕಾರಿ ಬದಲಾವಣೆಯ ಪ್ರಾರಂಭ.
ಈ ಯೋಜನೆ ರೈತರಿಗೆ ಆರ್ಥಿಕ ಭದ್ರತೆ ನೀಡುವಂತೆಯೇ, ಮಣ್ಣಿನ ಜೀವಂತಿಕೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರವನ್ನು ಖಚಿತಪಡಿಸಲು ಈ ಹೆಜ್ಜೆ ಇಟ್ಟಿದೆ. ಈ ಮುಖಾಂತರ ಸಾವಯವ ಕೃಷಿಯತ್ತ ಹೆಜ್ಜೆ ಇಡುವ ಪ್ರತಿಯೊಬ್ಬ ರೈತರೂ, ಭೂಮಾತೆಯ ರಕ್ಷಣೆಗೆ ಹಾಗೂ ದೇಶದ ಭವಿಷ್ಯಕ್ಕೆ ಕೊಡುಗೆ ನೀಡುತ್ತಿದ್ದಾರೆ.
ಒಟ್ಟಾರೆಯಾಗಿ, NMNF 2025 ಯೋಜನೆ ರೈತರಿಗೆ ಪ್ರತಿ ಎಕರೆಗೆ ₹4,000 ನೆರವು, ತರಬೇತಿ, ಪ್ರಮಾಣೀಕರಣ ಮತ್ತು ಮಾರುಕಟ್ಟೆ ಪ್ರವೇಶದ ಮೂಲಕ ಸ್ವಯಂನಿರ್ಭರ ಮತ್ತು ಪರಿಸರ ಸ್ನೇಹಿ ಕೃಷಿಯತ್ತ ಭಾರತವನ್ನು ಕೊಂಡೊಯ್ಯುವ ಉದ್ದೇಶ ಹೊಂದಿದೆ

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




