ಕಳೆದ ಎರಡು ವರ್ಷಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ ಸಮೀಕ್ಷೆ) ರಾಜ್ಯದ ಅತಿ ದೊಡ್ಡ ಆಡಳಿತಾತ್ಮಕ ಕಾರ್ಯಗಳಲ್ಲಿ ಒಂದಾಗಿದೆ. ಮನೆ ಮನೆಗೆ ಭೇಟಿ ನೀಡಿ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿದ ಸಮೀಕ್ಷಾದಾರರು, ಅವರ ಮೇಲ್ವಿಚಾರಕರು, ಹಾಗೆಯೇ ಇವರಿಗೆ ತರಬೇತಿ ನೀಡುವ ಮಾಸ್ಟರ್ ಟ್ರೈನರ್ಗಳು ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಇದೀಗ, ಈ ಪರಿಶ್ರಮಕ್ಕೆ ಸರ್ಕಾರದಿಂದ ಬಹಳ ದಿನಗಳಿಂದ ನಿರೀಕ್ಷಿಸಲಾಗಿದ್ದ ಒಂದು ಶುಭ ಸುದ್ದಿ ತಿಳಿದುಬಂದಿದೆ. ರಾಜ್ಯ ಸರ್ಕಾರ ಮಾಸ್ಟರ್ ಟ್ರೈನರ್ಗಳಿಗೆ ಗೌರವಧನ ಬಿಡುಗಡೆ ಮಾಡುವ ಕುರಿತು ಅಧಿಕೃತ ಆದೇಶ ಹೊರಡಿಸಿದೆ.
ಆದೇಶದ ಹಿನ್ನೆಲೆ ಮತ್ತು ಮಹತ್ವ ಹೀಗಿದೆ:
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಲಾಗಿದೆ. ಈ ಸಮೀಕ್ಷೆಯ ಶುದ್ಧತೆ, ನಿಖರತೆ ಮತ್ತು ಪರಿಣಾಮಕಾರಿತ್ವವನ್ನು ಖಾತ್ರಿ ಪಡಿಸುವ ಕೆಲಸವನ್ನು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್ಗಳು ನಿರ್ವಹಿಸಿದ್ದರು.
ಸಮೀಕ್ಷಾದಾರರು ಮತ್ತು ಮೇಲ್ವಿಚಾರಕರಿಗೆ ತರಬೇತಿ ನೀಡುವ ಕೆಲಸ ಅತ್ಯಂತ ತಾಂತ್ರಿಕವಾಗಿರುವುದರಿಂದ, ಸರ್ಕಾರ ಇವರಿಗೆ ಗೌರವಧನ ನಿಗದಿಪಡಿಸಿ ಬಿಡುಗಡೆ ಮಾಡಿದೆ.
ಆದೇಶದಲ್ಲಿ ಏನಿದೆ?:
ಹಿಂದುಳಿದ ವರ್ಗಗಳ ಆಯೋಗ ಹೊರಡಿಸಿರುವ ವಿವಿಧ ಉಲ್ಲೇಖ ಆದೇಶಗಳನ್ನು ಆಧರಿಸಿ, ಸರ್ಕಾರ ಈ ಕೆಳಗಿನಂತೆ ಗೌರವಧನವನ್ನು ನಿಗದಿ ಮಾಡಿದೆ,
ಮಾಸ್ಟರ್ ಟ್ರೈನರ್ಗಳ ಸಂಖ್ಯೆ
ರಾಜ್ಯ ಮಟ್ಟದ ಟ್ರೈನರ್ಗಳು : 168 ಜನ
ಜಿಲ್ಲಾ ಮಟ್ಟದ ಟ್ರೈನರ್ಗಳು : 2,563 ಜನ
ಒಟ್ಟು : 2,731 ಜನ
ಗೌರವಧನ (Honorarium):
ರಾಜ್ಯ ಮಟ್ಟದ ಮಾಸ್ಟರ್ ಟ್ರೈನರ್ : ₹7,500/-
ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್ : ₹5,000/-
ಒಟ್ಟು ಬಿಡುಗಡೆ ಮಾಡಿರುವ ಮೊತ್ತ:
₹1,40,75,000/-
(ಒಂದು ಕೋಟಿ ನಲವತ್ತು ಲಕ್ಷ ಎಪ್ಪತ್ತೈದು ಸಾವಿರ ರೂಪಾಯಿ). ಈ ಮೊತ್ತವನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ (DC) ಪಿ.ಡಿ. ಖಾತೆಗೆ ವರ್ಗಾವಣೆ ಮಾಡಲಾಗಿದೆ.
ಬಿಡುಗಡೆಗೊಂಡ ಅನುದಾನದ ಬಳಕೆ ಕುರಿತ ನಿಬಂಧನೆಗಳು :
ಅನುದಾನವನ್ನು ಕೇವಲ ಮಾಸ್ಟರ್ ಟ್ರೈನರ್ಗಳ ಗೌರವಧನ ಪಾವತಿಸಲು ಮಾತ್ರ ಬಳಸಬೇಕು.
ಸಮೀಕ್ಷೆಗೆ ಸಂಬಂಧಿಸಿದ ಖರ್ಚಿನ ವಿವರಗಳನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು.
ಖರ್ಚಿನ ನಂತರ ಹಣ ವಿನಿಯೋಗ ಪ್ರಮಾಣ ಪತ್ರವನ್ನು ಆಯೋಗಕ್ಕೆ ಸಲ್ಲಿಸಬೇಕು.
ಈ ವೆಚ್ಚವನ್ನು ಆಯೋಗದ ಠೇವಣಿ ಲೆಕ್ಕ ಶೀರ್ಷಿಕೆ: 8449-00-120-0-18-677 ಮತ್ತು ಠೇವಣಿ ಸಂಖ್ಯೆ 26572A010 ನಿಂದ ಭರಿಸಬೇಕಾಗಿದೆ.
ಈ ಆದೇಶದಿಂದ ಯಾರಿಗೆ ನೇರ ಲಾಭ?:
ಈ ಆದೇಶದಿಂದ, ಕಳೆದ ಕೆಲವು ತಿಂಗಳುಗಳಲ್ಲಿ ಸಮೀಕ್ಷೆಗಾಗಿ ಶ್ರಮಿಸಿದ ರಾಜ್ಯ ಮಟ್ಟದ ಟ್ರೈನರ್ಗಳು, ಜಿಲ್ಲಾ ಮಟ್ಟದ ಟ್ರೈನರ್ಗಳು ಅವರಿಗೆ ನೇರವಾಗಿ ಹಣ ಜಮಾ ಆಗಲಿದೆ. ಸರಕಾರದಿಂದ ಬಿಡುಗಡೆ ಆದ ಆದೇಶವು ಈ ಬಾರಿ ಯಾವುದೇ ವಿಳಂಬವಿಲ್ಲದೆ ಗೌರವಧನ ಪಾವತಿಗೆ ದಾರಿಮಾಡಿಕೊಟ್ಟಿದೆ.
ಆದೇಶದಲ್ಲಿ ಏನಿದೆ?:
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕರ್ನಾಟಕದಲ್ಲಿ ಬಹು ನಿರೀಕ್ಷಿತ ಯೋಜನೆಯಾಗಿದ್ದು, ಹಿಂದುಳಿದ ವರ್ಗಗಳ ನಿಜವಾದ ಸ್ಥಿತಿ ಶಿಕ್ಷಣ, ಉದ್ಯೋಗ, ಸಮಾಜ ಆರ್ಥಿಕ ಬೆಳವಣಿಗೆಯ ಬೇಕಾಗುವ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




