ಇತ್ತೀಚಿನ ವರ್ಷಗಳಲ್ಲಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗಳು ಕಂಡುಬರುತ್ತಿವೆ. ರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಕರ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಕಡ್ಡಾಯಗೊಳಿಸುವ ಚಟುವಟಿಕೆಗಳು ವೇಗ ಪಡೆದಿವೆ. ಆದರೆ, ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಟಿಇಟಿಯನ್ನು ಕಡ್ಡಾಯಗೊಳಿಸುವ ನ್ಯಾಯಾಲಯದ ತೀರ್ಪು ಕರ್ನಾಟಕದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸೇವಾನಿರತ ಶಿಕ್ಷಕರಿಗೆ ಹೊಸ ಅರ್ಹತಾ ಪರೀಕ್ಷೆಯನ್ನು ಏರಿಕೆ ಮಾಡುವುದು ಎಷ್ಟು ನ್ಯಾಯಸಮ್ಮತ? ಈಗಾಗಲೇ ಶಿಕ್ಷಕರ ಕೊರತೆ ಎದುರಿಸುತ್ತಿರುವ ರಾಜ್ಯದಲ್ಲಿ ಈ ತೀರ್ಪನ್ನು ಜಾರಿಗೊಳಿಸಿದರೆ ತೊಂದರೆಗಳು ಉಂಟಾಗುತ್ತವೆ? ಇಂತಹ ಪ್ರಶ್ನೆಗಳು ಶಿಕ್ಷಕರ ಸಂಘ, ಶಿಕ್ಷಣ ತಜ್ಞರು ಮತ್ತು ಸಾವಿರಾರು ಶಿಕ್ಷಕರಿಂದ ಏಕಕಾಲದಲ್ಲಿ ಕೇಳಿಬರುತ್ತಿದ್ದವು. ಆ ಗೊಂದಲಕ್ಕೆ ಈಗ ತೆರೆಬಿದ್ದಿದೆ. ಕರ್ನಾಟಕ ಸರ್ಕಾರ ಶಿಕ್ಷಕರ ಪರ ನಿಂತುಕೊಂಡು ಮಹತ್ವದ ತೀರ್ಮಾನ ಕೈಗೊಂಡಿದೆ.
ಟಿಇಟಿ ಕಡ್ಡಾಯಕ್ಕೆ ವಿರೋಧ ಸರ್ಕಾರದಿಂದ ಕಾನೂನು ಹೋರಾಟ ಆರಂಭ:
ಶಿಕ್ಷಕರ ಪದೋನ್ನತಿ ಮತ್ತು ಸೇವಾ ಮುಂದುವರಿಕೆಗೆ TET ಕಡ್ಡಾಯಗೊಳಿಸುವ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ), ಬೆಂಗಳೂರು, ಸರ್ಕಾರವನ್ನು ಮರುಪರಿಶೀಲನಾ ಅರ್ಜಿ ಸಲ್ಲಿಸಲು ಮನವಿ ಮಾಡಿತ್ತು. ಈ ಒತ್ತಡ ಮತ್ತು ಚರ್ಚೆಗಳ ನಡುವೆ, ಸರ್ಕಾರವು ಶಿಕ್ಷಕರ ಪರವಾಗಿ ನಿಂತಿದೆ.
ದಿನಾಂಕ 04-09-2025 ರ ಸಚಿವ ಸಂಪುಟ ತೀರ್ಮಾನದಂತೆ, ಟಿಇಟಿ ಕಡ್ಡಾಯಗೊಳಿಸಿದ ತೀರ್ಪಿನದ ವಿರುದ್ಧ ಮರುಪರಿಶೀಲನೆ ಅರ್ಜಿ ಸಲ್ಲಿಸಲು ಕಾನೂನು ಇಲಾಖೆ ಅನುಮೋದನೆ ನೀಡಿದೆ. ಈ ಅನುಮೋದನೆ ಅಧಿಕೃತವಾಗಿ ಶಿಕ್ಷಣ ಇಲಾಖೆಗೆ ಸಲ್ಲಿಕೆಯಾಗಿದೆ. ಅಂದರೆ, ರಾಜ್ಯ ಸರ್ಕಾರವೇ ಸುಪ್ರೀಂಕೋರ್ಟ್ನಲ್ಲಿ ಶಿಕ್ಷಕರ ಪರ ವಕಾಲತ್ತು ನಡೆಸಲಿದೆ. ಇದು ರಾಜ್ಯದ 1.68 ಲಕ್ಷಕ್ಕೂ ಹೆಚ್ಚು ಶಿಕ್ಷಕರಿಗೆ ಭದ್ರತೆ ನೀಡುವ ಐತಿಹಾಸಿಕ ನಿರ್ಧಾರವೆಂದು ಸಂಘ ತಿಳಿಸಿದೆ.
ಈ ನಿರ್ಧಾರಕ್ಕೆ ಕಾರಣರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾನೂನು ಸಚಿವ ಎಚ್.ಕೆ. ಪಾಟೀಲ್, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಸಂಘವು ವಿಶೇಷ ಧನ್ಯವಾದಗಳನ್ನು ಸಲ್ಲಿಸಿದೆ.
ಪೂರ್ವಾನ್ವಯ ತತ್ವ ಉಲ್ಲಂಘನೆ? ಶಿಕ್ಷಕರ ಮಹತ್ವದ ವಾದ:
ಶಿಕ್ಷಕರು ಮತ್ತು ಸಂಘಗಳು ವರ್ಷಗಳಿಂದ ಸರ್ಕಾರದ ಗಮನ ಸೆಳೆಯುತ್ತಿದ್ದ ಕೆಲವು ವಿಷಯಗಳು ಹೀಗಿವೆ:
ಯಾವುದೇ ಕಾನೂನು ಪೂರ್ವಾನ್ವಯವಾಗಿ ಜಾರಿಯಾಗಬಾರದು ಇದು ಸಂವಿಧಾನದ ಸಹಜ ನ್ಯಾಯತತ್ವಕ್ಕೆ ವಿರುದ್ಧ.
ಟಿಇಟಿಯನ್ನು ಜಾರಿಗೊಳಿಸುವ ಮೊದಲು ಸೇವೆಗೆ ಸೇರಿರುವ ಶಿಕ್ಷಕರಿಗೆ ಹಠಾತ್ ಪರೀಕ್ಷೆ ಕಡ್ಡಾಯಗೊಳಿಸುವುದು ಅನ್ಯಾಯ.
ಪದೋನ್ನತಿ ಸೇವಾ ಜೇಷ್ಠತೆ ಆಧಾರವಾಗಿರಬೇಕೇ ಹೊರತು ಹೊಸ ಪರೀಕ್ಷೆಯ ಆಧಾರವಲ್ಲ.
ರಾಜ್ಯದಲ್ಲಿ ಈಗಾಗಲೇ ಶಿಕ್ಷಕರ ಕೊರತೆ ಇದೆ, ಟಿಇಟಿ ತೀರ್ಪನ್ನು ಜಾರಿಗೊಳಿಸಿದರೆ 1.68 ಲಕ್ಷ ಶಿಕ್ಷಕರ ಮೇಲೆ ಪರಿಣಾಮ.
ತರಬೇತಿ ಪಡೆದ, ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಮತ್ತೆ ಪರೀಕ್ಷೆಗೆ ಬಲವಂತಪಡಿಸುವುದು ವೃತ್ತಿಯ ಗೌರವಕ್ಕೂ ಹಾನಿ.
ಒಟ್ಟಾರೆಯಾಗಿ, ಈ ತೀರ್ಮಾನದೊಂದಿಗೆ, ಟಿಇಟಿ ಕಡ್ಡಾಯಗೊಳಿಸುವ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರವೇ ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸಲಿದೆ. ಇದು ಶಿಕ್ಷಕರ ಹಿತಾಸಕ್ತಿಯನ್ನು ರಕ್ಷಿಸಲು ತೆಗೆದುಕೊಳ್ಳಲಾದ ಮಹತ್ವದ ಹೆಜ್ಜೆ. ಹಲವಾರು ವರ್ಷಗಳಿಂದ ಈ ವೃತ್ತಿಯಲ್ಲಿ ಸೇವೆ ನೀಡುತ್ತಿರುವ ಶಿಕ್ಷಕರಿಗೆ ಸಮಾಧಾನ ತಂದುಕೊಟ್ಟಿದೆ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




