ಭಾರತದ ಅತ್ಯಂತ ವೈಭವಶಾಲಿ ಮತ್ತು ಜನಪ್ರಿಯ ಹಬ್ಬಗಳಲ್ಲಿ ಒಂದಾದ ಬೆಳಕಿನ ಹಬ್ಬ ದೀಪಾವಳಿ ಸಂತೋಷ, ಮತ್ತು ಹೊಸ ಆರಂಭಗಳ ಪ್ರತೀಕವಾಗಿದೆ. ಅಂಧಕಾರದ ಮೇಲೆ ಬೆಳಕಿನ ಜಯವನ್ನು ಪ್ರತಿನಿಧಿಸುವ ಈ ಹಬ್ಬವನ್ನು ದೇಶದಾದ್ಯಂತ ಭಕ್ತಿಭಾವದಿಂದ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ದೀಪಾವಳಿಯಂದು ಮನೆ ಮನೆಗಳಲ್ಲಿ ದೀಪಗಳನ್ನು ಬೆಳಗಿಸಿ, ಅಲಂಕಾರಗಳಿಂದ ಕಂಗೊಳಿಸುತ್ತಾರೆ. ಕುಟುಂಬದ ಸದಸ್ಯರು ಹೊಸ ಬಟ್ಟೆಗಳನ್ನು ಧರಿಸಿ, ಸಿಹಿ ತಿಂಡಿಗಳನ್ನು ಹಂಚಿಕೊಳ್ಳುತ್ತಾ ಶ್ರೀ ಲಕ್ಷ್ಮೀ ಮತ್ತು ಗಣೇಶ ದೇವರನ್ನು ಆರಾಧಿಸುತ್ತಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಪಾರಂಪರಿಕ ನಂಬಿಕೆಯ ಪ್ರಕಾರ, ದೀಪಾವಳಿಯ ರಾತ್ರಿ ಲಕ್ಷ್ಮೀ ದೇವಿ ಭೂಮಿಗೆ ಬಂದು ತನ್ನ ಭಕ್ತರ ಮನೆಗೆ ಪ್ರವೇಶಿಸಿ, ಸಮೃದ್ಧಿ ಮತ್ತು ಸೌಭಾಗ್ಯವನ್ನು ನೀಡುತ್ತಾಳೆ. ಅದಕ್ಕಾಗಿ ಜನರು ತಮ್ಮ ಮನೆಗಳನ್ನು ಶುದ್ಧಗೊಳಿಸಿ, ಬಣ್ಣ ಬಣ್ಣದ ರಂಗೋಲಿಗಳಿಂದ ಅಲಂಕರಿಸುತ್ತಾರೆ ಮತ್ತು ಹೊಸ ಬಟ್ಟೆಗಳನ್ನು ಧರಿಸಿ ದೇವಿಯನ್ನು ಸ್ವಾಗತಿಸುತ್ತಾರೆ.
ಆದರೆ ದೀಪಾವಳಿಯಂದು ಧರಿಸುವ ಬಟ್ಟೆಯ ಬಣ್ಣಕ್ಕೂ ಲಕ್ಷ್ಮಿ ಪೂಜೆಯಲ್ಲಿಯೂ ಹಾಗೂ ಶುಭಶಕ್ತಿಯನ್ನು ಆಕರ್ಷಿಸುವಲ್ಲಿಯೂ ವಿಶೇಷ ಮಹತ್ವವಿದೆ. ಜ್ಯೋತಿಷ್ಯ ಹಾಗೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಕೆಲವು ಬಣ್ಣಗಳು ಶುಭಕಾರಿಯಾಗಿದ್ದು, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯನ್ನು ತರಲಿವೆ. ಮತ್ತೊಂದೆಡೆ, ಕೆಲವು ಬಣ್ಣಗಳನ್ನು ದೀಪಾವಳಿ ರಾತ್ರಿ ಧರಿಸುವುದನ್ನು ಅಶುಭವೆಂದು ಪರಿಗಣಿಸಲಾಗಿದೆ. ಹಾಗಾದರೆ ದೀಪಾವಳಿ 2025ರ ಪ್ರಯುಕ್ತ ಯಾವ ಯಾವ ಬಣ್ಣಗಳ ಬಟ್ಟೆಗಳನ್ನು ಧರಿಸಬೇಕು ಮತ್ತು ಯಾವನ್ನು ತಪ್ಪಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಲಕ್ಷ್ಮೀ ದೇವಿಯ ನೆಚ್ಚಿನ ಬಣ್ಣವೆಂದರೆ ಹಳದಿ ಮತ್ತು ಚಿನ್ನದ ಬಣ್ಣ(Yellow and gold color):
ಹಳದಿ ಹಾಗೂ ಚಿನ್ನದ ಬಣ್ಣವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಸೂರ್ಯ ಮತ್ತು ಅಗ್ನಿಯ ಅಂಶಗಳನ್ನು ಪ್ರತಿನಿಧಿಸುವ ಈ ಬಣ್ಣಗಳು ಜೀವನದಲ್ಲಿ ಹೊಳಪು, ಯಶಸ್ಸು ಮತ್ತು ಸಂಪತ್ತನ್ನು ತರುತ್ತವೆ. ದೀಪಾವಳಿಯ ರಾತ್ರಿ ಹಳದಿ ಅಥವಾ ಚಿನ್ನದ ಬಟ್ಟೆ ಧರಿಸುವುದರಿಂದ ಮನೆಯೊಳಗೆ ಸಕಾರಾತ್ಮಕ ಶಕ್ತಿ ಮತ್ತು ಲಕ್ಷ್ಮೀ ದೇವಿಯ ಕೃಪೆ ಬರುತ್ತದೆ ಎಂದು ನಂಬಲಾಗಿದೆ.
ಶಕ್ತಿ ಮತ್ತು ಅದೃಷ್ಟದ ಸಂಕೇತವೆಂದರೆ ಕೆಂಪು ಬಣ್ಣ(Red color):
ಕೆಂಪು ಬಣ್ಣವು ಮಂಗಳ ಗ್ರಹಕ್ಕೆ ಸಂಬಂಧಿಸಿದೆ ಮತ್ತು ದೈವಿಕ ಶಕ್ತಿಯ ಪ್ರತೀಕವಾಗಿದೆ. ಇದು ಆತ್ಮವಿಶ್ವಾಸ, ಉತ್ಸಾಹ ಹಾಗೂ ಅದೃಷ್ಟವನ್ನು ಹೆಚ್ಚಿಸುತ್ತದೆ.
ದೀಪಾವಳಿಯಂದು ಕೆಂಪು ಸೀರೆ ಅಥವಾ ಕುರ್ತಾ ಧರಿಸುವುದರಿಂದ ಪ್ರೀತಿ ಮತ್ತು ಅದೃಷ್ಟ ಹೆಚ್ಚಿ, ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳಬಹುದು.
ಬೆಳವಣಿಗೆ ಮತ್ತು ಆರ್ಥಿಕ ಪ್ರಗತಿ ಹಸಿರು ಬಣ್ಣ(Green color) ಸೂಕ್ತ:
ಹಸಿರು ಬಣ್ಣವು ಬುಧ ಗ್ರಹಕ್ಕೆ ಸಂಬಂಧಿಸಿದೆ. ಇದು ಬೆಳವಣಿಗೆ, ಬುದ್ದಿವಂತಿಕೆ ಮತ್ತು ಆರ್ಥಿಕ ಸ್ಥಿರತೆಯ ಸಂಕೇತವಾಗಿದೆ. ಹಸಿರು ಬಟ್ಟೆ ಧರಿಸುವುದರಿಂದ ವ್ಯಾಪಾರದಲ್ಲಿ ಅಭಿವೃದ್ಧಿ ಮತ್ತು ಹೊಸ ಅವಕಾಶಗಳ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಇದೆ.
ಮನಸ್ಸಿನ ಶಾಂತಿ ಮತ್ತು ನಕಾರಾತ್ಮಕ ಶಕ್ತಿಯಿಂದ ರಕ್ಷಣೆಗೆ ನೀಲಿ ಬಣ್ಣ(blue color) ಸೂಕ್ತ:
ನೀಲಿ ಬಣ್ಣವು ಶನಿ ಗ್ರಹಕ್ಕೆ ಸಂಬಂಧಿಸಿದೆ. ಇದು ಶಾಂತಿ, ಸ್ಥಿರತೆ ಮತ್ತು ಪ್ರಾಮಾಣಿಕತೆಯ ಸಂಕೇತವಾಗಿದೆ. ದೀಪಾವಳಿ ರಾತ್ರಿ ತಿಳಿ ನೀಲಿ ಬಟ್ಟೆ ಧರಿಸುವುದು ನಕಾರಾತ್ಮಕ ಶಕ್ತಿಯನ್ನು ತಡೆಯಲು ಮತ್ತು ಮನಸ್ಸಿಗೆ ಶಾಂತಿ ನೀಡಲು ಸಹಾಯಕ.
ಆಧ್ಯಾತ್ಮಿಕ ಶಕ್ತಿ ಮತ್ತು ಪರಿಶುದ್ಧತೆಗೆ ಬಿಳಿ ಬಣ್ಣ(White color) :
ಬಿಳಿ ಬಣ್ಣವು ಚಂದ್ರನೊಂದಿಗೆ ಸಂಬಂಧ ಹೊಂದಿದ್ದು, ಶಾಂತಿ ಮತ್ತು ಶುದ್ಧತೆಯ ಸಂಕೇತವಾಗಿದೆ. ಪೂಜೆಯ ಸಮಯದಲ್ಲಿ ಬಿಳಿ ಬಟ್ಟೆ ಧರಿಸುವುದು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.
ಯಾವ ಯಾವ ಬಣ್ಣದ ಬಟ್ಟೆಗಳನ್ನು ಧರಿಸಬಾರದು :
ಹಬ್ಬಗಳು ಮತ್ತು ಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ಕಪ್ಪು ಬಣ್ಣವನ್ನು(Black color) ಧರಿಸುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ದುಃಖ, ನಕಾರಾತ್ಮಕತೆ ಮತ್ತು ಹತಾಶೆಯ ಸಂಕೇತವಾಗಿದೆ. ಹಾಗೆ ಹಳೆಯ ಅಥವಾ ಹರಿದ ಬಟ್ಟೆಗಳನ್ನು ಧರಿಸುವುದನ್ನೂ ತಪ್ಪಿಸಬೇಕು. ದೀಪಾವಳಿಯಂದು ಹೊಸ, ಸ್ವಚ್ಛ ಮತ್ತು ಹೊಳೆಯುವ ಬಟ್ಟೆ ಧರಿಸುವುದು ಅತ್ಯಂತ ಶುಭಕರ.
ಒಟ್ಟಾರೆಯಾಗಿ, ದೀಪಾವಳಿ ಕೇವಲ ಹಬ್ಬವಲ್ಲ, ಅದು ಹೊಸತನ, ಹೊಸ ಆಶೆಯ ಮತ್ತು ಹೊಸ ಆರಂಭಗಳ ಸಂಕೇತ. ಈ ದಿನ ಧರಿಸುವ ಬಟ್ಟೆಯ ಬಣ್ಣವೂ ನಮ್ಮ ಜೀವನದಲ್ಲಿ ಶುಭಶಕ್ತಿ, ಸಮೃದ್ಧಿ ಮತ್ತು ಶಾಂತಿಯನ್ನು ತರಬಲ್ಲದು ಎಂಬ ನಂಬಿಕೆಯಿದೆ. ಆದ್ದರಿಂದ ಈ ದೀಪಾವಳಿಯಲ್ಲಿ ಲಕ್ಷ್ಮಿ ದೇವಿಯ ಕೃಪೆಯನ್ನು ಆಕರ್ಷಿಸಲು ಸೂಕ್ತ ಬಣ್ಣದ ಬಟ್ಟೆ ಧರಿಸಿ, ಬೆಳಕಿನ ಹಬ್ಬವನ್ನು ಭಕ್ತಿಭಾವದಿಂದ ಹಾಗೂ ಸಂತೋಷದಿಂದ ಆಚರಿಸಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




