ರಾಜ್ಯ ಸರ್ಕಾರವು ಟ್ರಾಫಿಕ್ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ದಂಡವನ್ನು ರಿಯಾಯಿತಿ ದರದಲ್ಲಿ ಪಾವತಿಸಲು ವಾಹನ ಚಾಲಕರಿಗೆ ಮತ್ತೊಮ್ಮೆ ಅವಕಾಶ ನೀಡಿದೆ. ಪೊಲೀಸ್ ಇಲಾಖೆಯ ‘ಸಂಚಾರಿ ಇ-ಚಲನ್’ ವ್ಯವಸ್ಥೆಯ ಮೂಲಕ ವಿಧಿಸಲಾದ ಈ ದಂಡಗಳನ್ನು ಶೇಕಡಾ 50 ರಷ್ಟು ರಿಯಾಯಿತಿಯೊಂದಿಗೆ ಪಾವತಿಸಬಹುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ರಿಯಾಯಿತಿ ಯೋಜನೆಯು ಮೂಲತಃ ಫೆಬ್ರವರಿ 11, 2023ರೊಳಗೆ ದಾಖಲಾಗಿದ್ದ ಮತ್ತು ಸೆಪ್ಟೆಂಬರ್ 09, 2023ರ ವೇಳೆಗೆ ಇತ್ಯರ್ಥವಾಗದಿದ್ದ ಪುಕರಣಗಳಿಗೆ (ಚಲನ್) ಅನ್ವಯಿಸುವಂತೆ ಆದೇಶಿಸಲಾಗಿತ್ತು. ನಂತರ, ಈ ಬಾಕಿ ದಂಡಗಳನ್ನು ಪಾವತಿಸಲು ಚಾಲಕರಿಗೆ ಸಮಯ ಕೊಡುವ ಉದ್ದೇಶದಿಂದ ಈ ಅವಧಿಯನ್ನು ಮುಂದೂಡಲಾಗಿತ್ತು.
ಈಗ, ಈ ರಿಯಾಯಿತಿ ಯೋಜನೆಯ ಅಂತಿಮ ತೀರ್ಮಾನದ ಅವಧಿಯನ್ನು ನಿಗದಿಪಡಿಸಲಾಗಿದೆ. ಬಾಕಿ ಉಳಿದಿರುವ ದಂಡವನ್ನು ರಿಯಾಯಿತಿಯೊಂದಿಗೆ ಪಾವತಿಸಲು ಆಗಸ್ಟ್ 23, 2025 ರಿಂದ ಸೆಪ್ಟೆಂಬರ್ 12, 2025 ರ ವರೆಗಿನ ಕಾಲಾವಧಿ ನೀಡಲಾಗಿದೆ. ಈ ಅವಧಿಯ ನಂತರ ದಂಡವನ್ನು ಪೂರ್ಣ ಮೊತ್ತದಲ್ಲಿ ಮಾತ್ರ ಪಾವತಿಸಬೇಕಾಗುತ್ತದೆ.
ಬಾಕಿ ದಂಡವನ್ನು ರಿಯಾಯಿತಿಯೊಂದಿಗೆ ಪಾವತಿಸುವ ವಿಧಾನ:
ವಾಹನ ಚಾಲಕರು ತಮ್ಮ ಬಾಕಿ ದಂಡವನ್ನು ಈ ಕೆಳಗಿನ ಯಾವುದೇ ವಿಧಾನದಿಂದ ಸುಲಭವಾಗಿ ಪಾವತಿಸಬಹುದು:
ಮೊಬೈಲ್ ಅಪ್ಲಿಕೇಶನ್ ಮೂಲಕ (ಆನ್ಲೈನ್ ಪಾವತಿ):
ಕರ್ನಾಟಕ ರಾಜ್ಯ ಪೊಲೀಸ್ ಆಪ್ ಅಥವಾ ಆಸ್ಟಮ್ (BTP/ಟ್ರಾಫಿಕ್ ಉಲ್ಲಂಘನೆ ವ್ಯವಸ್ಥೆ) ಆಪ್ಗಳನ್ನು ಪ್ಲೇ ಸ್ಟೋರ್ ಅಥವಾ ಆಪಲ್ ಸ್ಟೋರ್ನಿಂದ ಡೌನ್ಲೋಡ್ ಮಾಡಿ.
ಅಪ್ಲಿಕೇಶನ್ನಲ್ಲಿ ನಿಮ್ಮ ವಾಹನದ ನೋಂದಣಿ ಸಂಖ್ಯೆಯನ್ನು (ವಾಹನ ನಂಬರ್) ನಮೂದಿಸಿ.
ವ್ಯವಸ್ಥೆಯು ನಿಮ್ಮ ವಾಹನದ ವಿವರಗಳು ಮತ್ತು ಬಾಕಿ ಉಳಿದಿರುವ ದಂಡಗಳ ಪಟ್ಟಿಯನ್ನು ತೋರಿಸುತ್ತದೆ. ವಿವರಗಳನ್ನು ಪರಿಶೀಲಿಸಿ.
ರಿಯಾಯಿತಿ ಮೊತ್ತವನ್ನು ಆನ್ಲೈನ್ನೇ ಪಾವತಿಸಿ ದಂಡವನ್ನು ಇತ್ಯರ್ಥಗೊಳಿಸಿ.
ಪೊಲೀಸ್ ಠಾಣೆ ಭೇಟಿ ಮೂಲಕ:
ನಿಮ್ಮ ಸಮೀಪದ ಯಾವುದೇ ಸಂಚಾರ ಪೊಲೀಸ್ ಠಾಣೆಗೆ (Traffic Police Station) ಭೇಟಿ ನೀಡಿ.
ಅಲ್ಲಿ ಅಧಿಕಾರಿಗಳಿಗೆ ನಿಮ್ಮ ವಾಹನದ ವಿವರಗಳನ್ನು ನೀಡಿ ಬಾಕಿ ದಂಡದ ಬಗ್ಗೆ ತಿಳಿಯಲು ಸಾಧ್ಯವಿದೆ.
ಅನಂತರ, ರಿಯಾಯಿತಿ ಮೊತ್ತವನ್ನು ನಗದು ಅಥವಾ ಕಾರ್ಡ್ ಮೂಲಕ ಪಾವತಿಸಬಹುದು.
ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್ (TMC) ನಲ್ಲಿ:
ಸಂಚಾರ ನಿರ್ವಹಣಾ ಕೇಂದ್ರ (Traffic Management Centre – TMC), ಬೆಂಗಳೂರುಗೆ ಭೇಟಿ ನೀಡಿ ಪಾವತಿಸಬಹುದು.
ಸ್ಥಳ: ಇನ್ಸಾಂಟ್ರಿ ರಸ್ತೆ, ಇಂಡಿಯನ್ ಎಕ್ಸ್ಪ್ರೆಸ್ ಕಚೇರಿ ಸಮೀಪ, 1ನೇ ಮಹಡಿ, ಬೆಂಗಳೂರು.
ವಾಹನ ಚಾಲಕರು ಮೇಲ್ಕಂಡ ಯಾವುದೇ ವಿಧಾನವನ್ನು ಆಯ್ದುಕೊಂಡು, ಸೆಪ್ಟೆಂಬರ್ 12ರ ಒಳಗಾಗಿ ದಂಡವನ್ನು ರಿಯಾಯಿತಿಯೊಂದಿಗೆ ಪಾವತಿಸಿ ಕಾನೂನುಬಾಹಿರ ಸಮಸ್ಯೆಗಳಿಂದ ಮುಕ್ತರಾಗಲು ಕೋರಿಕೆಯಿದೆ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ತುಮಕೂರಿನ ಸರ್ಕಾರಿ ನರ್ಸಿಂಗ್ ಕಾಲೇಜಿನಿಂದ B.Sc (Nursing) ಪದವಿ ಪಡೆದಿರುವ ಇವರು, ಸಾರ್ವಜನಿಕ ಜಾಗೃತಿ ಮತ್ತು ಮಾಹಿತಿ ನೀಡುವ ಆಸಕ್ತಿಯಿಂದಾಗಿ ಡಿಜಿಟಲ್ ಪತ್ರಿಕೋದ್ಯಮ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ಡಿಜಿಟಲ್ ಮಾಧ್ಯಮ ರಂಗದಲ್ಲಿ 3 ವರ್ಷಗಳ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ನೇಮಕಾತಿಗಳು ಮತ್ತು ಶೈಕ್ಷಣಿಕ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ನಿರುದ್ಯೋಗಿ ಯುವಕ-ಯುವತಿಯರಿಗೆ ಯಾವುದೇ ಗೊಂದಲವಿಲ್ಲದೆ, ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (Verified) ನಿಖರ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದೇ ಇವರ ಬರವಣಿಗೆಯ ಶೈಲಿಯಾಗಿದೆ.


WhatsApp Group




Leave a Reply