ಆರೋಗ್ಯ ಸೇವೆಗಳು (Health services) ಇಂದಿನ ಜಗತ್ತಿನಲ್ಲಿ ಅತ್ಯಂತ ಅಗತ್ಯವಾಗಿದ್ದರೂ, ಅದನ್ನು ಪಡೆಯುವುದು ಸಾಮಾನ್ಯ ಜನತೆಗೆ ದುಬಾರಿ ವ್ಯವಹಾರವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ವೆಚ್ಚ, ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆ, ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಅಭಾವ ಇವುಗಳ ನಡುವೆ ಜನರು ಆರೋಗ್ಯ ಸೇವೆಗಾಗಿ ಹೋರಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ “ಆರೋಗ್ಯ ಸೇವೆ ಒಂದು ಹಕ್ಕು, ಅದು ಸವಲತ್ತು ಅಲ್ಲ” (Healthcare is a right, not a privilege) ಎಂಬ ಧ್ಯೇಯದೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಜಗತ್ತಿನಲ್ಲೇ ಅತಿದೊಡ್ಡ ಉಚಿತ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಆಸ್ಪತ್ರೆಯ ವೈಶಿಷ್ಟ್ಯವೆಂದರೆ ಇಲ್ಲಿ ಬಿಲ್ಲಿಂಗ್ ಕೌಂಟರ್ಗಳೇ (Billing Counter’s) ಇರುವುದಿಲ್ಲ. ಅಂದರೆ ಯಾರೇ ಆಗಿರಲಿ, ಯಾವ ದೇಶದಿಂದ ಬಂದವರೇ ಆಗಿರಲಿ, ಯಾವುದೇ ಶುಲ್ಕವಿಲ್ಲದೆ ಸಮಗ್ರ ವೈದ್ಯಕೀಯ ಸೇವೆಯನ್ನು ಪಡೆಯಲು ಸಾಧ್ಯ. ಇದು ಕೇವಲ ಆರೋಗ್ಯ ಸೇವೆ ನೀಡುವ ಕೇಂದ್ರವಲ್ಲ, ಮಾನವೀಯತೆಯ ಮೂಲತತ್ವವನ್ನು ಪ್ರತಿಬಿಂಬಿಸುವ, ಆರೈಕೆ ಮತ್ತು ಕರುಣೆಯ ದೇವಾಲಯ.
ಭವ್ಯ ಆಸ್ಪತ್ರೆಯ ನಿರ್ಮಾಣ:
ಸುಮಾರು 6,50,000 ಚದುರ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಈ ಆಸ್ಪತ್ರೆ, ನೆಲಮಹಡಿ, ತಳಮಹಡಿ ಹಾಗೂ ಐದು ಮಹಡಿಗಳೊಂದಿಗೆ ಅಲಂಕರಿಸಲ್ಪಡುತ್ತಿದೆ. ಸುಮಾರು 5 ಎಕರೆ ಪ್ರದೇಶವನ್ನು ಆವರಿಸಿರುವ ಈ ಕಟ್ಟಡದಲ್ಲಿ ಆಧುನಿಕ ವೈದ್ಯಕೀಯ ಸೌಲಭ್ಯಗಳೊಂದಿಗೆ, ಉಚಿತ ಚಿಕಿತ್ಸೆಗಾಗಿ (Modern medical facilities, for free treatment) ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ.
600 ಹಾಸಿಗೆಗಳ ಸಾಮರ್ಥ್ಯ
100 ಐಸಿಯು ಬೆಡ್ಗಳು
11 ಆಪರೇಷನ್ ಥಿಯೇಟರ್ಗಳು
28 ವೈದ್ಯಕೀಯ ವಿಭಾಗಗಳು ಕಾರ್ಯನಿರ್ವಹಿಸಲಿವೆ
ಈ ಎಲ್ಲ ಸೌಲಭ್ಯಗಳು ಯಾವುದೇ ಶುಲ್ಕವಿಲ್ಲದೆ ಲಭ್ಯವಾಗಲಿವೆ.
ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆ(Medical education and research) :
2023ರಲ್ಲಿ ಉದ್ಘಾಟನೆಯಾದ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಈಗಾಗಲೇ ಭಾರತದ ಮೊದಲ ಉಚಿತ ಗ್ರಾಮೀಣ ವೈದ್ಯಕೀಯ ಕಾಲೇಜು (India’s first free rural medical college) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಈ ಸಂಸ್ಥೆಯು, ನವೆಂಬರ್ 2025ರಲ್ಲಿ ಬೋಧನಾ ಆಸ್ಪತ್ರೆಯ ರೂಪದಲ್ಲಿ ಮತ್ತಷ್ಟು ವಿಸ್ತಾರವಾಗಿ, 600 ಹಾಸಿಗೆಗಳೊಂದಿಗೆ ಅತ್ಯಾಧುನಿಕ ಆರೋಗ್ಯ ಸೇವೆಗಳನ್ನು ಒದಗಿಸಲು ಸಜ್ಜಾಗಿದೆ.
ಧನ್ವಂತರಿ ಪ್ರತಿಮೆಯ(Dhanvantari statue) ವೈಶಿಷ್ಟ್ಯ :
ಈ ಆಸ್ಪತ್ರೆಯ ಗೋಪುರದ ಮೇಲೆ ಆರೋಗ್ಯದ ದೇವತೆ ಧನ್ವಂತರಿ ಅವರ ಪ್ರತಿಮೆ ಪ್ರತಿಷ್ಠಾಪನೆಗೊಳ್ಳುತ್ತಿದೆ. ಸುಮಾರು 20 ಅಡಿ ಎತ್ತರದ ಧನ್ವಂತರಿ ಮೂರ್ತಿ ಕೇವಲ ಸಂಕೇತವಲ್ಲ, ಅದು ಆರೋಗ್ಯ ಸೇವೆಯ ರಕ್ಷಣೆಯ ಪ್ರತೀಕವಾಗಿದೆ. “ಆರೋಗ್ಯ ದೇವತೆಯ ಕೃಪೆಯಿಂದ ಜನರಿಗೆ ನಿರಂತರ ಸೇವೆ ಸಿಗಲಿ” ಎಂಬ ಉದ್ದೇಶದೊಂದಿಗೆ ಈ ಮೂರ್ತಿ ಸ್ಥಾಪಿಸಲಾಗುತ್ತಿದೆ.
ಮಾನವೀಯತೆಯ ಸಂಕೇತ(A symbol of humanity) :
ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಪ್ರೇರಣೆಯಿಂದ ಈ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು, ಅದು ಕೇವಲ ಕಟ್ಟಡವಲ್ಲ, ಮಾನವೀಯತೆಗೆ ನೀಡಿದ ಭರವಸೆಯ ಪ್ರತೀಕ.
ಇಲ್ಲಿ ರೋಗಿಗಳನ್ನು ಹಣಕಾಸು, ಜಾತಿ, ಧರ್ಮ, ರಾಷ್ಟ್ರಗಳ ವ್ಯತ್ಯಾಸವಿಲ್ಲದೆ, ಆರೈಕೆ, ಕರುಣೆ ಮತ್ತು ಬದ್ಧತೆಯಿಂದ ಚಿಕಿತ್ಸೆ ನೀಡಲಾಗುತ್ತದೆ. “ಆರೋಗ್ಯ ರಕ್ಷಣೆ ಒಂದು ಸವಲತ್ತು ಅಲ್ಲ, ಅದು ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕು”ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳುತ್ತಾರೆ.
ಒಟ್ಟಾರೆಯಾಗಿ, ಜಗತ್ತಿನಲ್ಲೇ ಅತಿದೊಡ್ಡ ಉಚಿತ ಆಸ್ಪತ್ರೆ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ (Free hospital in Muddenahalli, Chikkaballapur)ತಲೆ ಎತ್ತುತ್ತಿರುವುದು, ಭಾರತ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯುತ್ತಿರುವುದಕ್ಕೆ ಸಾಕ್ಷಿ. ಇದು ಕೇವಲ ಕರ್ನಾಟಕಕ್ಕಲ್ಲ, ಇಡೀ ಜಗತ್ತಿಗೆ “ಆರೋಗ್ಯವೇ ಧರ್ಮ, ಸೇವೆಯೇ ಕರ್ಮ” ಎಂಬ ಸಂದೇಶವನ್ನು ಸಾರುತ್ತಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




