2024-25ನೇ ಸಾಲಿನ ಮುಂಗಾರು ಮಳೆಗಾಲದಲ್ಲಿ ಬೆಳೆಗಳಿಗಾದ ಹಾನಿಗೆ ಸಂಬಂಧಿಸಿದಂತೆ ಕರ್ನಾಟಕದ ರೈತರಿಗೆ 1,449ಕೋಟಿ ರೂಪಾಯಿ ಬೆಳೆ ಪರಿಹಾರವನ್ನು ಕೇಂದ್ರ ಸರ್ಕಾರವು ಮಂಜೂರು ಮಾಡಿದೆ. ಈ ಹಣವು ಶೀಘ್ರದಲ್ಲೇ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಲಿದೆ. ಇದರಲ್ಲಿ ಕಲಬುರಗಿ ಜಿಲ್ಲೆಗೆ 656ಕೋಟಿ ರೂಪಾಯಿ ಮತ್ತು ಗದಗ ಜಿಲ್ಲೆಗೆ 242 ಕೋಟಿ ರೂಪಾಯಿ ಹೆಚ್ಚಿನ ಪರಿಹಾರ ದೊರಕಿದೆ. ದಕ್ಷಿಣ ಕನ್ನಡ ಜಿಲ್ಲೆಗೆ 2.4 ಲಕ್ಷ ರೂಪಾಯಿ ಮತ್ತು ಉಡುಪಿ ಜಿಲ್ಲೆಗೆ 3 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಬೆಳೆ ವಿಮೆ ಯೋಜನೆಯಡಿ ಹಣದ ವಿತರಣೆ
ಕಳೆದ ಮುಂಗಾರು ಮಳೆಗಾಲದಲ್ಲಿ ತೊಗರಿ, ಭತ್ತ, ರಾಗಿ, ಮೆಕ್ಕೆಜೋಳ, ಸೋಯಾಬೀನ್, ಹತ್ತಿ, ಹೆಸರು ಮತ್ತು ನೆಲಗಡಲೆ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗಿತ್ತು. ಇದರ ಪರಿಹಾರವಾಗಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಡಿಯಲ್ಲಿ ಬೆಳೆ ವಿಮೆ ಮಂಜೂರಾಗಿದೆ. ಈಗಾಗಲೇ 50%ಕ್ಕೂ ಹೆಚ್ಚು ಹಣ ರೈತರ ಖಾತೆಗಳಿಗೆ ಜಮಾ ಆಗಿದೆ. ಕಳೆದ ಕೆಲವು ವರ್ಷಗಳಿಂದ ಕರ್ನಾಟಕಕ್ಕೆ ವಾರ್ಷಿಕವಾಗಿ 1,400 ರಿಂದ 1,600ಕೋಟಿ ರೂಪಾಯಿಗಳ ಬೆಳೆ ವಿಮೆ ಪರಿಹಾರ ದೊರಕುತ್ತಿದೆ. ಈ ಬಾರಿ ಕಲಬುರಗಿ ಮತ್ತು ಗದಗ ಜಿಲ್ಲೆಗಳು ಹೆಚ್ಚಿನ ಹಣ ಪಡೆದಿರುವುದು ಗಮನಾರ್ಹವಾಗಿದೆ.
ಜಿಲ್ಲಾವಾರು ಪರಿಹಾರದ ವಿವರ
- ಕಲಬುರಗಿ: 656ಕೋಟಿ ರೂ. (ಕಳೆದ ವರ್ಷ 189 ಕೋಟಿ)
- ಗದಗ: 242 ಕೋಟಿ ರೂ.
- ಹಾವೇರಿ: 95 ಕೋಟಿ ರೂ. (ಕಳೆದ ವರ್ಷ 400 ಕೋಟಿ)
- ವಿಜಯಪುರ: 97 ಕೋಟಿ ರೂ.
- ಧಾರವಾಡ:23ಕೋಟಿ ರೂ.
- ದಕ್ಷಿಣ ಕನ್ನಡ: 2.4 ಲಕ್ಷ ರೂ.
- ಉಡುಪಿ:3 ಲಕ್ಷ ರೂ.
- ಬೆಂಗಳೂರು ಗ್ರಾಮಾಂತರ: 79 ಲಕ್ಷ ರೂ.
- ಚಿಕ್ಕಬಳ್ಳಾಪುರ: 38 ಕೋಟಿ ರೂ.
- ಚಿತ್ರದುರ್ಗ: 33 ಕೋಟಿ ರೂ.
- ರಾಮನಗರ: 2ಕೋಟಿ ರೂ.
- ಮೈಸೂರು: 39 ಲಕ್ಷ ರೂ.
ಇತರ ಜಿಲ್ಲೆಗಳಾದ ಶಿವಮೊಗ್ಗ, ತುಮಕೂರು, ಬಳ್ಳಾರಿ, ಕೊಪ್ಪಳ, ಬಾಗಲಕೋಟೆ, ಬೀದರ್, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಿಗೂ ಸಹ ಕೋಟಿಗಟ್ಟಲೆ ರೂಪಾಯಿಗಳ ಪರಿಹಾರ ನೀಡಲಾಗಿದೆ.
ರೈತರಿಗೆ ದೊರಕುವ ಪ್ರಯೋಜನ
ಈ ಬೆಳೆ ಪರಿಹಾರವು ಅಕಾಲಿಕ ಮಳೆ ಮತ್ತು ಬರದಿಂದ ಹಾನಿಗೊಳಗಾದ ರೈತರಿಗೆ ನಿಜವಾದ ಆಸರೆಯಾಗಲಿದೆ. ಕಳೆದ ಮಾರ್ಚ್ ತಿಂಗಳಲ್ಲೇ ಮುಂಗಾರು ಬೆಳೆಗಳಾದ ತೊಗರಿ, ಹೆಸರು, ಉದ್ದು ಮತ್ತು ಸೂರ್ಯಕಾಂತಿ ಬೆಳೆಗಳಿಗೆ ಪರಿಹಾರ ಘೋಷಿಸಲಾಗಿತ್ತು. ಇದರಿಂದ ರೈತರು ಮತ್ತೆ ಬೆಳೆ ತೆಗೆಯುವುದಕ್ಕೆ ಪ್ರೋತ್ಸಾಹ ದೊರಕಿದೆ. ಹೆಚ್ಚಿನ ಬೆಳೆ ವಿಮೆ ಮಂಜೂರಾತಿಯಾಗಿರುವುದರಿಂದ ರೈತರು ಈಗ ಹೆಚ್ಚು ಉತ್ಸಾಹದಿಂದ ಬೆಳೆ ವಿಮೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ.
ಕರ್ನಾಟಕದ 23 ಲಕ್ಷಕ್ಕೂ ಹೆಚ್ಚು ರೈತರು ಈ ಬೆಳೆ ಪರಿಹಾರ ಯೋಜನೆಯಿಂದ ಪ್ರಯೋಜನ ಪಡೆಯಲಿದ್ದಾರೆ. ಕಲಬುರಗಿ ಮತ್ತು ಗದಗ ಜಿಲ್ಲೆಗಳು ಹೆಚ್ಚಿನ ಹಣ ಪಡೆದಿರುವುದು ಅಲ್ಲಿ ಬೆಳೆಗಳಿಗಾದ ವ್ಯಾಪಕ ಹಾನಿಯನ್ನು ಸೂಚಿಸುತ್ತದೆ. ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಸರ್ಕಾರದ ಈ ಕ್ರಮವು ಸಹಾಯಕವಾಗಲಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.