Karnataka Rains: ರಾಜ್ಯದ 6 ಜಿಲ್ಲೆಗಳಿಗೆ ಕೆಲವೇ ಕ್ಷಣಗಳಲ್ಲಿ 30-40ಕಿಮೀ ವೇಗದ ಬಿರುಗಾಳಿಯೊಂದಿಗೆ ರಣಭೀಕರ ಮಳೆ.!

WhatsApp Image 2025 06 22 at 4.42.28 PM

WhatsApp Group Telegram Group

ಕರ್ನಾಟಕದ ಹಲವಾರು ಭಾಗಗಳಲ್ಲಿ ನಿರಂತರವಾಗಿ ಸುರಿದು ಬಂದಿದ್ದ ಮುಂಗಾರು ಮಳೆ ಈಗ ಸ್ವಲ್ಪ ದುರ್ಬಲಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಕರಾವಳಿ ಮತ್ತು ಮಲೆನಾಡಿನಲ್ಲಿ ಭಾರೀ ಮಳೆ ಸುರಿದರೂ, ಈಗ ಅದರ ತೀವ್ರತೆ ಕಡಿಮೆಯಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿದ ಪ್ರಕಟಣೆಯ ಪ್ರಕಾರ, ಕರ್ನಾಟಕದಾದ್ಯಂತ ಎರಡು ವಾರ ಬಿಟ್ಟು ಬಿಡದೇ ಸುರಿದಿದ್ದ ಮಳೆರಾಯನ ಅಬ್ಬರ ಕೊಂಚ ತಣ್ಣಗಾಗಿದೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ನಿರಂತರವಾಗಿ ಸುರಿದು ಒಳನಾಡಿಗೂ ವ್ಯಾಪಿಸಿದ್ದ ಮುಂಗಾರು ಮಳೆ ರಾಜ್ಯದಲ್ಲಿ ದುರ್ಬಲಗೊಂಡಿದೆ. ಕೇವಲ ಕರಾವಳಿ ಸೇರಿ ಕೆಲ ಜಿಲ್ಲೆಗಳಲ್ಲಿ ಮಾತ್ರವೇ ಮುಂದಿನ 02 ಘಂಟೆಗಳಲ್ಲಿ ಬಾರಿ ಪ್ರಮಾಣದ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (IMD) ಬೆಂಗಳೂರು ಕೇಂದ್ರದ ವಿಜ್ಞಾನಿ ಡಾ.ಎನ್. ಪುವಿಯರಸನ್ ಅವರು ಮುನ್ಸೂಚನೆ ನೀಡಿದ್ದಾರೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಯಾವ ಜಿಲ್ಲೆಗಳಿಗೆ ಮಳೆ ಎಚ್ಚರಿಕೆ?

IMD ನೀಡಿದ ಮುನ್ಸೂಚನೆಯ ಪ್ರಕಾರ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೆಲವೇ ಘಂಟೆಗಳಲ್ಲಿ  ಮಳೆ ಆಗಬಹುದು ಜೂನ್ 23ರಿಂದ 26ರವರೆಗೆ ಸಾಧಾರಣದಿಂದ ಭಾರೀ ಮಳೆ ಸಾಧ್ಯತೆ ಇದೆ. ಇದಕ್ಕಾಗಿ IMD “ಯೆಲ್ಲೋ ಅಲರ್ಟ್” (ಹಳದಿ ಎಚ್ಚರಿಕೆ) ಘೋಷಿಸಿದೆ.

ಬೆಂಗಳೂರು ಮತ್ತು ಒಳನಾಡಿನ ಹವಾಮಾನ

ಬೆಂಗಳೂರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರಸ್ತುತ ಬಿಸಿಲಿನ ವಾತಾವರಣವಿದೆ. ಕೆಲವು ಕಡೆ ಮಬ್ಬು ಮೋಡಗಳು ಕಾಣಸಿಗುತ್ತಿದ್ದರೂ, ಭಾರೀ ಮಳೆಯ ಯಾವುದೇ ಸೂಚನೆಗಳಿಲ್ಲ. ಇದೇ ರೀತಿಯ ಹವಾಮಾನ ಮುಂದಿನ 2-3 ದಿನಗಳವರೆಗೆ ಮುಂದುವರೆಯಲಿದೆ ಎಂದು IMD ನಿರೀಕ್ಷಿಸಿದೆ.

ರಾಜ್ಯದ ಇತರ ಭಾಗಗಳಲ್ಲಿ ತಾಪಮಾನ

  • ರಾಯಚೂರು: 35°C (ಅತ್ಯಂತ ಬಿಸಿಲು)
  • ಕಲಬುರಗಿ: 34°C
  • ಬೀದರ್, ಬಾಗಲಕೋಟೆ, ಕೊಪ್ಪಳ, ಚಿತ್ರದುರ್ಗ: 32°C
  • ಬೆಂಗಳೂರು, ಮೈಸೂರು, ಗದಗ, ಹಾವೇರಿ: 30°C

ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ಸ್ಥಿತಿ

ಇನ್ನೂ ಮಲೆನಾಡಿನ ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೆಲವೇ ಘಂಟೆಗಳಲ್ಲಿ  ಮಳೆ ಆಗಬಹುದು ಇಂದಿನಿಂದ ಮುಂದಿನ ಮೂರು ದಿನಗಳ ಕಾಲ ಆಗಾಗ ಜೋರು ಮಳೆ ಬರಬಹುದು. ಹೀಗಾಗಿ ಈ ಜಿಲ್ಲೆಗಳಿಗೂ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಉಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಬಳ್ಳಾರಿ, ದಾವಣಗೆರೆ, ಹಾವೇರಿ, ಗದಗ, ಬೆಳಗಾವಿ, ಕೊಪ್ಪಳ, ಧಾರವಾಡ, ವಿಜಯಪುರ, ಬಾಗಲಕೋಟೆ, ಬೀದರ್, ಯಾದಗಿರಿ, ಕಲಬುರಗಿ, ಮೈಸೂರು ಸೇರಿದಂತೆ ವಿವಿಧೆಡೆ ಬಿಸಿಲಿನ ದರ್ಶನವಾಗಿದೆ.

ಒಂದೆರಡು ಕಡೆ ತುಂತುರು ಮಳೆ ಆಗಿದ್ದು ಬಿದ್ದರೆ, ಎಲ್ಲಿಯೂ ಭಾರೀ ಮಳೆ ಲಕ್ಷಣ ಇಲ್ಲ. ಕರಾವಳಿ ಪ್ರದೇಶಗಳಾದ ಮಂಗಳೂರು, ಕಾರವಾರ, ಉಡುಪಿ, ಭಟ್ಕಳ ಮತ್ತು ಮಲೆನಾಡಿನ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಕೆಲವೆಡೆ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಕಡಿದಾದ ಪ್ರದೇಶಗಳಲ್ಲಿ ಕೆಸರುಸರಿಪಾಟುಗಳ ಅಪಾಯವಿದೆ.

ಮುಂಜಾಗ್ರತೆ ಮತ್ತು ಸುರಕ್ಷತಾ ಕ್ರಮಗಳು

  1. ಮಳೆ ಪ್ರಭಾವಿತ ಪ್ರದೇಶಗಳಲ್ಲಿ ಪ್ರಯಾಣಿಸುವಾಗ ಎಚ್ಚರಿಕೆ ವಹಿಸಬೇಕು.
  2. ಕಡಿದಾದ ಬಂಡೆಗಳು ಮತ್ತು ಮಣ್ಣಿನ ಜಾರುವಿಕೆ ಸಾಧ್ಯತೆ ಇರುವ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಬೇಕು.
  3. IMD ನೀಡುವ ನಿಯಮಿತ ಮಳೆ ಮಾಹಿತಿಗಳನ್ನು ಗಮನಿಸಬೇಕು.

ತೀವ್ರ ಮಳೆಗೆ ಕಾರಣಗಳು

  • ದಕ್ಷಿಣ-ಪಶ್ಚಿಮ ಮಾನ್ಸೂನ್ ಸಕ್ರಿಯವಾಗಿರುವುದು.
  • ಅರಬ್ಬೀ ಸಮುದ್ರದಲ್ಲಿ ಉಂಟಾಗುವ ತೇವದ ಪೂರೈಕೆ.
  • ತಮಿಳುನಾಡು ಮತ್ತು ಕೇರಳದಿಂದ ಬರುವ ತೇವಾಂಶದ ಪ್ರವಾಹ.

ನಿಮ್ಮ ಪ್ರದೇಶದಲ್ಲಿ ಮಳೆ ಇದೆಯೇ?

ನಿಮ್ಮ ಪ್ರದೇಶದಲ್ಲಿ ಮಳೆ, ಬಿರುಗಾಳಿ ಅಥವಾ ಇತರ ಹವಾಮಾನ ಬದಲಾವಣೆಗಳನ್ನು ಗಮನಿಸುತ್ತಿದ್ದರೆ, ಕಾಮೆಂಟ್ಗಳಲ್ಲಿ ಹಂಚಿಕೊಳ್ಳಿ!

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Related Posts

Shivaraj

Shivaraj

Shivaraj is an accomplished journalist with four years of experience in the media industry. He possesses extensive expertise in news collection, reporting, interviewing, and analyzing contemporary issues.

Leave a Reply

Your email address will not be published. Required fields are marked *

error: Content is protected !!