ಯುಗಾದಿಗೆ ಬಿಪಿಎಲ್, ಎಪಿಎಲ್ ಕಾರ್ಡ್ದಾರರಿಗೆ Bumper offer – 15 ಕೆ.ಜಿ ಅಕ್ಕಿ ವಿತರಣೆ!
ಕರ್ನಾಟಕ ಸರ್ಕಾರ ನಿರ್ವಹಿಸುತ್ತಿರುವ ಅನ್ನಭಾಗ್ಯ ಯೋಜನೆ ರಾಜ್ಯದ ಬಿಪಿಎಲ್ (BPL) ಹಾಗೂ ಅಂತ್ಯೋದಯ (AAY) ಪಡಿತರ ಚೀಟಿದಾರರಿಗೆ ಅತ್ಯಂತ ಉಪಯುಕ್ತವಾಗಿದೆ. ಈ ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿದಿನವೂ ಸೂಕ್ತ ಪೌಷ್ಠಿಕ ಆಹಾರವನ್ನು ಒದಗಿಸುವ ಉದ್ದೇಶದೊಂದಿಗೆ ಸರ್ಕಾರ ಅಕ್ಕಿ, ಧಾನ್ಯ ಮತ್ತು ಧನ ಸಹಾಯವನ್ನು ನೀಡುತ್ತಿದೆ. ಇದೀಗ ಯುಗಾದಿ ಹಬ್ಬದ(Ugadi festival) ಮುನ್ಸೂಚನೆಯಲ್ಲಿ, ಸರ್ಕಾರ ಪಡಿತರದಾರರಿಗೆ ಭರ್ಜರಿ ಸಂತಸದ ಸುದ್ದಿ ನೀಡಿದೆ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮಾರ್ಚ್ ತಿಂಗಳಲ್ಲಿ 15 ಕೆ.ಜಿ. ಅಕ್ಕಿ ವಿತರಣೆ(15 kg rice distribution in the month of March)
ಅನ್ನಭಾಗ್ಯ ಯೋಜನೆ(Annabhagya scheme)ಯಡಿ ಈ ಬಾರಿ ಫೆಬ್ರವರಿಯಲ್ಲಿ ಬಾಕಿ ಉಳಿದಿದ್ದ ಹೆಚ್ಚುವರಿ 5 ಕೆ.ಜಿ. ಅಕ್ಕಿಯ ಜೊತೆಗೆ ಮಾರ್ಚ್ ತಿಂಗಳ 10 ಕೆ.ಜಿ. ಅಕ್ಕಿಯನ್ನು ಸೇರಿಸಿ, ಒಟ್ಟು 15 ಕೆ.ಜಿ. ಅಕ್ಕಿ ಪಡಿತರ ಚೀಟಿದಾರರಿಗೆ ವಿತರಿಸಲಾಗುವುದು. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ(K.H. Muniyappa)ಅವರ ನಿರ್ದೇಶನದಂತೆ, ಮಾರ್ಚ್ 31ರವರೆಗೆ ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ ಬಾಕಿಯಿರುವ 5 ಕೆ.ಜಿ. ಅಕ್ಕಿಯೊಂದಿಗೆ ಈ ತಿಂಗಳ 10 ಕೆ.ಜಿ. ಅಕ್ಕಿ ವಿತರಣೆಯಾಗಲಿದೆ.
ಫೆಬ್ರವರಿ ತಿಂಗಳ 5 ಕೆ.ಜಿ. ಅಕ್ಕಿ ಬಾಕಿ ಉಳಿದಿದ್ದೇಕೆ?Why is there 5 kg of rice left over from February?
ರಾಜ್ಯ ಸರ್ಕಾರವು ಅಕ್ಕಿಯ ಬದಲಿಗೆ ನಗದು (DBT) ವರ್ಗಾವಣೆಗೆ ಯತ್ನಿಸಿದರೂ, ಅಂತಿಮ ನಿರ್ಧಾರ ವಿಳಂಬವಾಗಿರುವ ಕಾರಣ ಫೆಬ್ರವರಿಯಲ್ಲಿ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆ.ಜಿ. ಅಕ್ಕಿ ನೀಡಲಾಗಿರಲಿಲ್ಲ. ಇದೀಗ, ಈ ಬಾಕಿಯನ್ನು ಮಾರ್ಚ್ ಪಡಿತರ ವಿತರಣೆಯೊಂದಿಗೆ ಸೇರಿಸಲಾಗಿದೆ.
ಪಡಿತರ ಹಂಚಿಕೆ – ಯಾರು ಎಷ್ಟು ಅಕ್ಕಿ ಪಡೆಯಬಹುದು?
ಅಂತ್ಯೋದಯ ಪಡಿತರ ಚೀಟಿ ಫಲಾನುಭವಿಗಳಿಗೆ:
1-3 ಸದಸ್ಯರಿದ್ದರೆ – 35 ಕೆ.ಜಿ. ಅಕ್ಕಿ
4 ಸದಸ್ಯರಿದ್ದರೆ – 45 ಕೆ.ಜಿ. ಅಕ್ಕಿ
5 ಸದಸ್ಯರಿದ್ದರೆ – 65 ಕೆ.ಜಿ. ಅಕ್ಕಿ
10 ಸದಸ್ಯರಿದ್ದರೆ – 165 ಕೆ.ಜಿ. ಅಕ್ಕಿ
ಬಿಪಿಎಲ್ ಪಡಿತರ ಚೀಟಿದಾರರಿಗೆ:
ಮಾರ್ಚ್ ತಿಂಗಳಲ್ಲಿ ತಲಾ 15 ಕೆ.ಜಿ. ಅಕ್ಕಿ ವಿತರಣೆ
ಏಪ್ರಿಲ್ನಿಂದ ಪ್ರತಿ ಫಲಾನುಭವಿಗೆ ತಲಾ 10 ಕೆ.ಜಿ. ಅಕ್ಕಿ ನೀಡಲಾಗುವುದು.
ಪಡಿತರ ವಿತರಣೆಗೆ ಇ-ಕೆವೈಸಿ ಅಗತ್ಯ!E-KYC required for ration distribution!
ಪಡಿತರ ವಿತರಣಾ ಪ್ರಕ್ರಿಯೆ ಸುಗಮಗೊಳಿಸಲು ಇ-ಕೆವೈಸಿ (e-KYC) ಮಾಡಿಸುವುದು ಅನಿವಾರ್ಯವಾಗಿದೆ. ಮಾರ್ಚ್ 31ರೊಳಗೆ ಎಲ್ಲಾ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗೆ ತೆರಳಿ ಬೆರಳಚ್ಚು(Fingerprints) ನೀಡುವ ಮೂಲಕ ಇ-ಕೆವೈಸಿ ಪ್ರಕ್ರಿಯೆ ಪೂರೈಸಬೇಕು. ಈ ಸೇವೆ ಸಂಪೂರ್ಣ ಉಚಿತವಾಗಿದ್ದು, ಯಾವುದೇ ಶುಲ್ಕ ಪಾವತಿಸಬೇಕಿಲ್ಲ.
4.21 ಕೋಟಿ ಜನರಿಗೆ ತಲುಪಿದ ದೊಡ್ದ ಯೋಜನೆ!
ಕರ್ನಾಟಕ ರಾಜ್ಯದಲ್ಲಿ 1.28 ಕೋಟಿ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿದ ಕುಟುಂಬಗಳು ಈ ಯೋಜನೆಯ ಫಲಾನುಭವಿಗಳಾಗಿದ್ದು, ಒಟ್ಟು 4.21 ಕೋಟಿ ಜನರಿಗೆ ಅನ್ನಭಾಗ್ಯ ಯೋಜನೆಯ ಪ್ರಯೋಜನ ಸಿಗಲಿದೆ. ಸರ್ಕಾರದ ಈ ನಿರ್ಧಾರವು ರಾಜ್ಯದ ಲಕ್ಷಾಂತರ ಗರೀಬ ಕುಟುಂಬಗಳಿಗೆ ದೊಡ್ಡ ಆರ್ಥಿಕ ಸಹಾಯವಾಗಲಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




