ಕೊಳವೆ ಬಾವಿ ಕೊರೆಸುವ ಮುನ್ನ ಅನುಮತಿ ಕಡ್ಡಾಯ: ಸರ್ಕಾರದ ಹೊಸ ನಿಯಮಾವಳಿ ಜಾರಿಗೆ
ಕರ್ನಾಟಕ (Karnataka) ದಲ್ಲಿ ಅಂತರ್ಜಲದ ನಿರ್ವಹಣೆ ಮತ್ತು ದುರಂತ ತಡೆಯುವುದು, ಜೊತೆಗೆ ನೀರಿನ ಮೂಲಗಳ ಸಂರಕ್ಷಣೆ ಗುರಿಯಾಗಿರುವ ಹೊಸ ನಿಯಮವನ್ನು ಸರ್ಕಾರ (Government) ಜಾರಿಗೊಳಿಸಿದೆ. ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) ತಿದ್ದುಪಡಿ ಅಧಿನಿಯಮಕ್ಕೆ ಸರ್ಕಾರ ಅಧಿಕೃತ ಮುದ್ರೆ ಹಾಕಿ, ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ನಿಯಮದ ಮುಖ್ಯ ಅಂಶಗಳು ಯಾವರೀತಿ ಇವೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ನಿಯಮಾವಳಿಯ ಪ್ರಕಾರ, ಕೊಳವೆ ಬಾವಿ (Bore well) ಕೊರೆಸಲು ಸ್ಥಳೀಯ ಪ್ರಾಧಿಕಾರಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ನೈಜವಾಗಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ನೀರಿನ ಮೂಲಗಳ ಸಮರ್ಪಕ ಸಂರಕ್ಷಣೆಯ ಜೊತೆಗೆ, ಉಲ್ಲಂಘನೆಗಳನ್ನು ತಡೆಯುವ ಗುರಿಯನ್ನು ಅನುಷ್ಠಾನಗೊಳಿಸುವ ಹಿನ್ನೆಲೆಯಲ್ಲಿ ಈ ತಿದ್ದುಪಡಿ ಅಗತ್ಯವಾಗಿದೆ.

ಈ ನಿಯಮವನ್ನು ಉಲ್ಲಂಘಿಸಿದರೆ, ಜೈಲುಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು. ಈ ಮೂಲಕ ಸರ್ಕಾರ ಅಂತರ್ಜಲ ಬಳಕೆಯನ್ನು ಸಮತೋಲನಗೊಳಿಸಲು ಹಾಗೂ ನಿಷ್ಕ್ರಿಯ ಕೊಳವೆ ಬಾವಿಗಳನ್ನು (inactive Bore well) ನಿರ್ವಹಿಸಲು ನಿಷ್ಠಾವಂತ ಪ್ರಯತ್ನ ನಡೆಸುತ್ತಿದೆ.
ನಿಯಮದ ಮುಖ್ಯ ಅಂಶಗಳು ಹೀಗಿವೆ :
ಅನುಮತಿ ಕಡ್ಡಾಯ (Permission compulsory) :
ಕೊಳವೆ ಬಾವಿ ಕೊರೆಸುವ ಮೊದಲು ಭೂ ಮಾಲೀಕರು ಅಥವಾ ಅನುಷ್ಠಾನ ಏಜೆನ್ಸಿಗಳು ಅಂತರ್ಜಲ ಪ್ರಾಧಿಕಾರ ಅಥವಾ ಜಿಲ್ಲಾ ಅಂತರ್ಜಲ ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಅನುಮತಿ ಪಡೆದ ನಂತರ ಕನಿಷ್ಟ 15 ದಿನ ಮುಂಚೆ ಸ್ಥಳೀಯ ಪ್ರಾಧಿಕಾರಕ್ಕೆ ಲಿಖಿತವಾಗಿ ಮಾಹಿತಿ ನೀಡಬೇಕು.
ನಿಷ್ಕ್ರಿಯ ಬಾವಿಗಳ ನಿರ್ವಹಣೆ :
ಬಳಕೆಯಲ್ಲಿರುವ ಅಥವಾ ನಿರ್ಲಕ್ಷಿಸಲಾದ ಕೊಳವೆ ಬಾವಿಗಳನ್ನು 24 ಗಂಟೆ ಒಳಗೆ ಮುಚ್ಚುವುದು ಕಡ್ಡಾಯ. ಮುಚ್ಚಿದ ನಂತರ, ಛಾಯಾಚಿತ್ರ (Photography) ದೊಂದಿಗೆ ಪ್ರಾಧಿಕಾರಕ್ಕೆ ವರದಿ ಸಲ್ಲಿಸಬೇಕು.
ಶಿಕ್ಷೆ ಮತ್ತು ದಂಡ (Punishment and penalty) :
ಈ ನಿಯಮಗಳನ್ನು ಉಲ್ಲಂಘಿಸಿದರೆ, ಮೂರು ತಿಂಗಳ ಕಾಲ ಜೈಲು ಶಿಕ್ಷೆ ಅಥವಾ ₹5,000 ದಂಡ ಅಥವಾ ಎರಡೂ ವಿಧಿಸಲಾಗುತ್ತದೆ.
ಸ್ಥಳೀಯ ಪ್ರಾಧಿಕಾರಗಳ ಕರ್ತವ್ಯ (Duty of local authorities) :
ಪ್ರತಿಯೊಂದು ಸ್ಥಳೀಯ ಸಂಸ್ಥೆ ಒಬ್ಬ ಅಧಿಕಾರಿಯನ್ನು ನೇಮಿಸಬೇಕು, ಅವರು ನಿಷ್ಕ್ರಿಯ ಕೊಳವೆ ಬಾವಿಗಳ ತಪಾಸಣೆ ಮತ್ತು ಮೇಲ್ವಿಚಾರಣೆ ಮಾಡಬೇಕು ಎಂದು ತಿಳಿಸಲಾಗಿದೆ.
ಈ ಕಾಯ್ದೆಯ ಪ್ರಾಮುಖ್ಯತೆ ಜಲಮೂಲಗಳ ಸಂರಕ್ಷಣೆ ಮತ್ತು ನಿಷ್ಕ್ರಿಯ ಕೊಳವೆ ಬಾವಿಗಳಿಂದ ಉಂಟಾಗಬಹುದಾದ ಅಪಾಯಗಳನ್ನು ತಡೆಯಲು ಸರ್ಕಾರ ತೆಗೆದುಕೊಂಡ ಕ್ರಮಗಳಲ್ಲಿ ಪ್ರಮುಖದ್ದಾಗಿದೆ. ಪ್ರತಿ ಭೂ ಮಾಲೀಕ ಅಥವಾ ಏಜೆನ್ಸಿಯು (Agency) ಈ ನಿಯಮಾವಳಿಯನ್ನು ಪಾಲಿಸಿದರೆ, ನೀರಿನ ಮೂಲಗಳ ದುರ್ವಿನಿಯೋಗ ತಡೆಯಲು ಸಾಧ್ಯವಾಗುತ್ತದೆ.
ರಾಜ್ಯಪಾಲರ (Governer) ಅನುಮೋದನೆಯೊಂದಿಗೆ ಜಾರಿಗೊಂಡ ಈ ಕಾನೂನು ನೀರಿನ ವೃದ್ಧಿ ಮತ್ತು ಸಂರಕ್ಷಣೆ ಎರಡರಲ್ಲಿಯೂ ಶ್ರೇಯೋಭಿವೃದ್ಧಿಯತ್ತ ರಾಜ್ಯವನ್ನು ಮುನ್ನಡೆಸಲಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




