ಕರ್ನಾಟಕ ಸರ್ಕಾರದಿಂದ ಬರೊಬ್ಬರಿ 15,000+ ಉದ್ಯೋಗಾವಕಾಶಗಳು! 23 ಇಲಾಖೆಗಳಲ್ಲಿ ನೇಮಕಾತಿಗೆ ಅರ್ಜಿ ಅಹ್ವಾನ ಸಲ್ಲಿಸುವುದು ಹೇಗೆ?

WhatsApp Image 2025 05 23 at 2.52.18 PM

WhatsApp Group Telegram Group
ಕರ್ನಾಟಕ ಸರ್ಕಾರದಿಂದ ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಅವಕಾಶ!

ಕರ್ನಾಟಕ ರಾಜ್ಯ ಸರ್ಕಾರವು 15,000ಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನಿಸಿದೆ. ಆಡಳಿತ ಸುಧಾರಣಾ ಆಯೋಗವು (Administrative Reforms Commission) 23 ವಿವಿಧ ಇಲಾಖೆಗಳಲ್ಲಿ ಖಾಲಿಯಾಗಿರುವ ಸುಮಾರು 15,000 ಹುದ್ದೆಗಳನ್ನು ಶೀಘ್ರವೇ ನೇಮಕಾತಿ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ನೇಮಕಾತಿಗಳು ರಾಜ್ಯದ ಅನೇಕ ಯುವಕರು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶವನ್ನು ನೀಡಲಿವೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಯಾವ ಇಲಾಖೆಗಳಲ್ಲಿ ಎಷ್ಟು ಹುದ್ದೆಗಳು?

ಆಯೋಗವು ಗುರುತಿಸಿರುವ ಪ್ರಮುಖ ಖಾಲಿ ಹುದ್ದೆಗಳು:

  • ಕೌಶಲ್ಯಾಭಿವೃದ್ಧಿ ಇಲಾಖೆ: 1,521 ಕಿರಿಯ ತರಬೇತಿ ಅಧಿಕಾರಿಗಳು
  • ವೈದ್ಯಕೀಯ ಸೇವೆಗಳು: 1,080 ಕಿರಿಯ ವೈದ್ಯರು & 1,397 ನರ್ಸಿಂಗ್ ಅಧಿಕಾರಿಗಳು
  • ಪಶು ಸಂಗೋಪನೆ ಇಲಾಖೆ: 1,043 ಪಶು ವೈದ್ಯರು
  • ಕೃಷಿ ಇಲಾಖೆ: 1,870 ಎಎಒ (Agriculture Assistant Officers) & 732 ಕೃಷಿ ಅಧಿಕಾರಿಗಳು
  • ಸಹಕಾರ ಇಲಾಖೆ: 453 ಹುದ್ದೆಗಳು

23 ಇಲಾಖೆಗಳಲ್ಲಿ ಒಟ್ಟು 21,442 ಹುದ್ದೆಗಳು ಮಂಜೂರಾಗಿದ್ದು, 15000 ಖಾಲಿ ಹುದ್ದೆಗಳನ್ನು ಗುರುತಿಸಲಾಗಿದೆ. ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿ ಕಿರಿಯ ತರಬೇತಿ ಅಧಿಕಾರಿಗಳ 1521 ಹುದ್ದೆ, ವೈದ್ಯಕೀಯ ಕಾಲೇಜ್ ಗಳ ಕಿರಿಯ ವೈದ್ಯರು 1080, ವೈದ್ಯಕೀಯ ಕಾಲೇಜ್ ನರ್ಸಿಂಗ್ ಅಧಿಕಾರಿಗಳು 1397, ಪಶು ಸಂಗೋಪನಾ ಇಲಾಖೆಯಲ್ಲಿ 1043 ವೈದ್ಯರು, ಕೃಷಿ ಇಲಾಖೆ ಎಎಒ ಹುದ್ದೆಗಳು 1870, ಕೃಷಿ ಅಧಿಕಾರಿ 732, ಸಹಕಾರ ಇಲಾಖೆಯಲ್ಲಿ 453 ಸೇರಿ ಒಟ್ಟು 15000 ಹುದ್ದೆಗಳನ್ನು ಆದ್ಯತೆ ಮೇರೆಗೆ ಹುದ್ದೆ ಭರ್ತಿ ಮಾಡಲು ಆದೇಶ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಹುದ್ದೆಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲಭ್ಯವಿರುತ್ತವೆ ಮತ್ತು ಅರ್ಹತೆ, ವಯಸ್ಸು ಮತ್ತು ಇತರ ನಿಯಮಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ನೇಮಕಾತಿ ಪ್ರಕ್ರಿಯೆ ಮತ್ತು ಮುಂದಿನ ಹಂತಗಳು

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ 8ನೇ ವರದಿಯಲ್ಲಿ ಈ ಖಾಲಿ ಹುದ್ದೆಗಳನ್ನು ಆದ್ಯತೆಯ ಆಧಾರದ ಮೇಲೆ ಭರ್ತಿ ಮಾಡುವಂತೆ ಸೂಚಿಸಲಾಗಿದೆ. ಸರ್ಕಾರವು ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆಗಳನ್ನು (Notification) ಹೊರಡಿಸಲಿದೆ.

ಹೇಗೆ ಅರ್ಜಿ ಸಲ್ಲಿಸಬೇಕು?
  1. ಅಧಿಕೃತ ವೆಬ್ಸೈಟ್: www.karnataka.gov.in ಅಥವಾ ಸಂಬಂಧಿತ ಇಲಾಖೆಯ ನೋಟಿಫಿಕೇಶನ್ ಪರಿಶೀಲಿಸಿ.
  2. ಅರ್ಹತೆ: ಪದವಿ/ಡಿಪ್ಲೊಮಾ (ಇಲಾಖೆ ಅನುಗುಣವಾಗಿ ಬದಲಾಗಬಹುದು).
  3. ಆನ್ಲೈನ್ ಅರ್ಜಿ:ನೇಮಕಾತಿಗಳಿಗೆ ಆನ್ಲೈನ್ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ.
ಮುಖ್ಯಮಂತ್ರಿಯವರ ಪ್ರತಿಕ್ರಿಯೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಯನ್ನು ಅನುಮೋದಿಸಿದ್ದು, “ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ನಮ್ಮ ಪ್ರಮುಖ ಆದ್ಯತೆ” ಎಂದು ಹೇಳಿದ್ದಾರೆ.

✅ ಸಲಹೆ: ನೀವು ಈ ಉದ್ಯೋಗಾವಕಾಶಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸಿದರೆ, ಕರ್ನಾಟಕ ಸರ್ಕಾರದ ಉದ್ಯೋಗ ವಿಭಾಗ ಅಥವಾ Karnataka One ಕೇಂದ್ರಗಳನ್ನು ಸಂಪರ್ಕಿಸಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!