Skip to content
Thursday, July 7
  • HOME
  • SITEMAP
  • DISCLAIMER
  • CONTACT US
  • PRIVACY POLICY
  • ABOUT US

ನೀಡ್ಸ್ ಆಫ್ ಪಬ್ಲಿಕ್

NEEDS OF PUBLIC

ನೀಡ್ಸ್ ಆಫ್ ಪಬ್ಲಿಕ್

NEEDS OF PUBLIC

  • ಮುಖ್ಯ ಮಾಹಿತಿ
  • ಟೆಕ್ ಅಪ್ಡೆಟ್ಸ್
  • ಟೆಕ್ ನ್ಯೂಸ್
  • ಟೆಕ್ ಟ್ರಿಕ್ಸ್
  • ರಿವ್ಯೂವ್
  • ವಿಡಿಯೋ
  • ಮುಖ್ಯ ಮಾಹಿತಿ
  • ಟೆಕ್ ಅಪ್ಡೆಟ್ಸ್
  • ಟೆಕ್ ನ್ಯೂಸ್
  • ಟೆಕ್ ಟ್ರಿಕ್ಸ್
  • ರಿವ್ಯೂವ್
  • ವಿಡಿಯೋ
Trending Now
  • ಪ್ಯಾನ್ ಕಾರ್ಡನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡುವುದು ಕಡ್ಡಾಯ ಮತ್ತು ರೂ 500 ದಂಡವನ್ನು ಪಾವತಿಸಿ
  • ಸ್ವಂತ ವ್ಯಾಪಾರ ಅಥವಾ ಸ್ವ-ಉದ್ಯೋಗ ಮಾಡಲು ಒಂದು ಲಕ್ಷ ಸಹಾಯಧನ
  • ಎಲ್ಲಾ ರೈತರಿಗೂ ಕೇಂದ್ರ ಸರ್ಕಾರದಿಂದ ಬೆಳೆವಿಮೆಯ ಬಂಪರ್ ಆಫರ್
  • ಅಲ್ಪಸಂಖ್ಯಾತರಿಗೆ ಶ್ರಮಶಕ್ತಿ ಯೋಜನೆ ಅಡಿಯಲ್ಲಿ 50000 ರೂಪಾಯಿ ಸಾಲ ಯೋಜನೆ
  • ರಾಜ್ಯದ ಅನ್ನದಾತರ ಏಳಿಗೆಗಾಗಿ ರೈತಶಕ್ತಿ ಯೋಜನೆ
Home>>ಮುಖ್ಯ ಮಾಹಿತಿ>>ಅಲ್ಪಸಂಖ್ಯಾತರಿಗೆ ಶ್ರಮಶಕ್ತಿ ಯೋಜನೆ ಅಡಿಯಲ್ಲಿ 50000 ರೂಪಾಯಿ ಸಾಲ ಯೋಜನೆ
ಮುಖ್ಯ ಮಾಹಿತಿ

ಅಲ್ಪಸಂಖ್ಯಾತರಿಗೆ ಶ್ರಮಶಕ್ತಿ ಯೋಜನೆ ಅಡಿಯಲ್ಲಿ 50000 ರೂಪಾಯಿ ಸಾಲ ಯೋಜನೆ

admin
June 17, 20220

ಬಹಳ  ಜನರಿಗೆ ವ್ಯಾಪಾರ ಪ್ರಾರಂಭ ಮಾಡಬೇಕೆಂದರೆ  ಹಣ ಇರುವುದಿಲ್ಲ ಮತ್ತು ಇನ್ನೂ ಕೆಲವು ಜನರಿಗೆ ವ್ಯಾಪಾರ ಯಾವ ರೀತಿ ಪ್ರಾರಂಭ ಮಾಡಬೇಕು ಅಂತ  ತರಬೇತಿ ಇರುವುದಿಲ್ಲ ಹಾಗೂ ಇನ್ನು ಕೆಲವರು  ವ್ಯಾಪಾರ ಮಾಡುತ್ತಿರುತ್ತಾರೆ ಆದರೆ ವ್ಯಾಪಾರ ಅಭಿವೃದ್ಧಿ ಮಾಡಲು ಹಣದ ತೊಂದರೆ ಇರುತ್ತೆ  ಎಲ್ಲಾ ಸಮಸ್ಯೆಗಳಿಗೆ ಕರ್ನಾಟಕ ಸರ್ಕಾರದ ಶ್ರಮಶಕ್ತಿ ಯೋಜನೆಯ ಸಾಲ ಯೋಜನೆ ಅನುಕೂಲ ದಾಯಕವಾಗಿದೆ. ಈ ಸಾಲ  ಯೋಜನೆ ಅಡಿಯಲ್ಲಿ rs.50000 ಸಹಾಯಧನವನ್ನು ಕರ್ನಾಟಕ ಸರ್ಕಾರದಿಂದ ಕೊಡಲಾಗುತ್ತಿದೆ.

ಯೋಜನೆ ಅಡಿಯಲ್ಲಿ ಸಾಲವನ್ನು ಪಡೆಯಲು ನಾವು ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಅರ್ಹತೆಗಳು ಏನು ಇರಬೇಕು ಎನ್ನುವುದನ್ನು ಈಗ ನೋಡೋಣ.

ಯೋಜನೆ ಅಡಿಯಲ್ಲಿ ಅಲ್ಪಸಂಖ್ಯಾತ ವರ್ಗದ ಕುಲಕಸುಬು ದಾರರಿಗೆ ತರಬೇತಿ ನೀಡಿ ಅವರು ತಮ್ಮ ಕಲಾತ್ಮಕ ಮತ್ತು ತಾಂತ್ರಿಕ ಕೌಶಲ್ಯವನ್ನು ವೃದ್ಧಿಸಿಕೊಂಡು ಅದೇ ಕಸಬನ ಮುಂದುವರೆಸಲು ಅಥವಾ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಅಭಿವೃದ್ಧಿಗೊಳಿಸುವ ಸಲುವಾಗಿ ನಿಗಮದಿಂದ ಶೇಕಡಾ 4ರ ಬಡ್ಡಿ ದರದಲ್ಲಿ 50 ಸಾವಿರದವರೆಗೆ ಕಲ್ಪಿಸಲಾಗುತ್ತದೆ. ಇದರಲ್ಲಿ ಶೇಕಡಾ 50ರಷ್ಟು ಸಾಲವನ್ನು 36 ತಿಂಗಳಿನಲ್ಲಿ ಫಲಾನುಭವಿಯು ಮರುಪಾವತಿ ಮಾಡಿದಲ್ಲಿ ಉಳಿದ ಶೇಕಡಾ 50ರಷ್ಟು ಹಣವನ್ನು ಬ್ಯಾಂಕ್ ಎಂಡ್  ಸಹಾಯ ಧನವನ್ನಾಗಿ ಪರಿಗಣಿಸಲಾಗುತ್ತದೆ. ಫಲಾನುಭವಿಯು ತಾನು ಪಡೆದ ಸಾಲವನ್ನು 36 ತಿಂಗಳೊಳಗಾಗಿ ಮರುಪಾವತಿ ಮಾಡಲು ವಿಫಲರಾದಲ್ಲಿ ಶೇಕಡ 50ರಷ್ಟು ಬ್ಯಾಂಕ್ ಎಂಡ್  ಸಹಾಯಧನವನ್ನು ಸಹ ಸಾಲವೆಂದು  ಪರಿಗಣಿಸಲಾಗುತ್ತದೆ.

ಅರ್ಜಿಯನ್ನು ಸಲ್ಲಿಸಲು ಈ  ಕೆಳಗಿನ ಅರ್ಹತೆಗಳು  ಇರಬೇಕು

ಅರ್ಜಿದಾರರು ಸರ್ಕಾರಿ ಆದೇಶದಲ್ಲಿ ವಿವರಿಸಿದಂತೆ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು ಮತ್ತು ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು. ಎಲ್ಲಾ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯ ರೂಪಾಯಿ 3ಲಕ್ಷ 50 ಸಾವಿರಕ್ಕಿಂತ ಕಡಿಮೆ ಇರಬೇಕು. ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರ ಆಗಿರಬಾರದು. ಕಳೆದ ಐದು ವರ್ಷಗಳಲ್ಲಿ ಅರ್ಜಿದಾರ ಅಥವಾ ಅವನ ಅಥವಾ ಅವಳ ಕುಟುಂಬದ ಸದಸ್ಯರು ಸರ್ಕಾರದ ಅಥವಾ ನಿಗಮದ ಯಾವುದೇ ಇತರ ಯೋಜನೆ ಅಡಿಯಲ್ಲಿ ( ಅರಿವು ಯೋಜನೆ ಹೊರತುಪಡಿಸಿ )ಸಾಲ ಸೌಲಭ್ಯಗಳನ್ನು
ಪಡೆದಿರಬಾರದು

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು :
* ಯೋಜನಾ ವರದಿ
* ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣ ಪತ್ರ
* ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣ ಪತ್ರ
* ಫಲಾನುಭವಿಯ ಆಧಾರ್ ಕಾರ್ಡ್

ಈ ಮೇಲಿನ ಎಲ್ಲಾ ದಾಖಲಾತಿಗಳೊಂದಿಗೆ ಆರ್ಯ ಅಭ್ಯರ್ಥಿಗಳು ಶ್ರಮಶಕ್ತಿ ಯೋಜನೆ ಅಡಿಯಲ್ಲಿ ನೇರವಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕರ್ನಾಟಕ ಸರ್ಕಾರದಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಜುಲೈ  2022.

Previous Post

ರಾಜ್ಯದ ಅನ್ನದಾತರ ಏಳಿಗೆಗಾಗಿ ರೈತಶಕ್ತಿ ಯೋಜನೆ

Next Post

ಎಲ್ಲಾ ರೈತರಿಗೂ ಕೇಂದ್ರ ಸರ್ಕಾರದಿಂದ ಬೆಳೆವಿಮೆಯ ಬಂಪರ್ ಆಫರ್

Related Articles

ಮುಖ್ಯ ಮಾಹಿತಿ

ಎಲ್ಲಾ ರೈತರಿಗೂ ಕೇಂದ್ರ ಸರ್ಕಾರದಿಂದ ಬೆಳೆವಿಮೆಯ ಬಂಪರ್ ಆಫರ್

ಮುಖ್ಯ ಮಾಹಿತಿ

ಪ್ಯಾನ್ ಕಾರ್ಡನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡುವುದು ಕಡ್ಡಾಯ ಮತ್ತು ರೂ 500 ದಂಡವನ್ನು ಪಾವತಿಸಿ

ಮುಖ್ಯ ಮಾಹಿತಿಟೆಕ್ ಅಪ್ಡೆಟ್ಸ್ಟೆಕ್ ನ್ಯೂಸ್

ನೀವು ಯ್ಯೂಟ್ಯೂಬರ್ ಆಗಬೇಕಾ..? ಇಲ್ಲಿದೆ ನೋಡಿ ಒಂದಿಷ್ಟು ಬೆಸ್ಟ್ ಟಿಪ್ಸ್

ಮುಖ್ಯ ಮಾಹಿತಿ

ಪಿಯುಸಿ ನಂತರ ಮುಂದೇನು….?

ಮುಖ್ಯ ಮಾಹಿತಿ

ರಾಜ್ಯದ ಅನ್ನದಾತರ ಏಳಿಗೆಗಾಗಿ ರೈತಶಕ್ತಿ ಯೋಜನೆ

Leave a Reply Cancel reply

Your email address will not be published. Required fields are marked *

Recent Posts

  • (no title)
  • ಪ್ಯಾನ್ ಕಾರ್ಡನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡುವುದು ಕಡ್ಡಾಯ ಮತ್ತು ರೂ 500 ದಂಡವನ್ನು ಪಾವತಿಸಿ
  • ಸ್ವಂತ ವ್ಯಾಪಾರ ಅಥವಾ ಸ್ವ-ಉದ್ಯೋಗ ಮಾಡಲು ಒಂದು ಲಕ್ಷ ಸಹಾಯಧನ
  • ಎಲ್ಲಾ ರೈತರಿಗೂ ಕೇಂದ್ರ ಸರ್ಕಾರದಿಂದ ಬೆಳೆವಿಮೆಯ ಬಂಪರ್ ಆಫರ್
  • ಅಲ್ಪಸಂಖ್ಯಾತರಿಗೆ ಶ್ರಮಶಕ್ತಿ ಯೋಜನೆ ಅಡಿಯಲ್ಲಿ 50000 ರೂಪಾಯಿ ಸಾಲ ಯೋಜನೆ
© 2022 ನೀಡ್ಸ್ ಆಫ್ ಪಬ್ಲಿಕ್ | WordPress Theme Ultra News
  • HOME
  • SITEMAP
  • DISCLAIMER
  • CONTACT US
  • PRIVACY POLICY
  • ABOUT US